“ಬಘೀರ” ಚಿತ್ರದ ಯಶಸ್ಸು: ಅಭಿಮಾನಿ ದೇವರುಗಳು ಸಪರ್ಪಿಸಿದ ನಟ ಶ್ರೀಮರುಳಿ

“ಬಘೀರ” ಚಿತ್ರದ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ಹುರುಪು ಮತ್ತು ವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಈ ಮೂಲಕ ನಟ ಶ್ರೀಮುರುಳಿ ಅವರಲ್ಲಿ ಹೊಸ ಚೈತನ್ಯ ತುಂಬಿದೆ. ಇದೇ ಖುಷಿಯಲ್ಲಿ ಮತ್ತಷ್ಟು ಚಿತ್ರ ಮಾಡಲು ಮುಂದಾಗಿದ್ಧಾರೆ.
“ಭಘೀರ” ಚಿತ್ರದ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಡೀ ಚಿತ್ರತಂಡ ಸೇರಿತ್ತು,. ಹೊಂಬಾಳೆ ನಿರ್ಮಾಣ ಸಂಸ್ಥೆಯಡಿ ಮೂಡಿ ಬಂದಿರುವ ಈ ಚಿತ್ರವನ್ನು ಡಾ, ಸೂರಿ ನಿರ್ದೇಶನ ಮಾಡಿದ್ದು, ಇಡೀ ತಂಡ ಗೆಲುವಿನ ಸಿಹಿ ಹಂಚಿಕೊಂಡಿತು.

ಈ ವೇಳೆ ಮಾತಿಗಿಳಿದ ನಟ ಶ್ರೀಮುರುಳಿ, ಬರೋಬ್ಬರಿ ಮೂರು ವರ್ಷದ ನಂತರ ಗೆಲುವು ಸಿಕ್ಕಿದೆ. ಈ ಗೆಲುವುವನ್ನು ಅಭಿಮಾನಿ ದೇವರುಗಳಿಗೆ ಸಮರ್ಪಣೆ ಮಾಡುತ್ತೇನೆ, ಅವರ ಬೆಂಬಲದಿಂದಲೇ ಚಿತ್ರ ಗೆಲ್ಲಲು ಸಹಕಾರಿಯಾಗಿದೆ., ಪ್ರೇಕ್ಷಕ ಮಹಾಪ್ರಭುಗಳಿಗೆ ಜೀವನ ಪರ್ಯಂತ ಚಿರಋಣಿ ಎಂದರು.
ಚಿತ್ರವನ್ನು ಮನೆ ಮಂದಿಯೆಲ್ಲಾ ಚಿತ್ರಮಂದಿರಕ್ಕೆ ತೆರಳಿ ಚಿತ್ರ ನೋಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಬೆಳವಣಿಗೆ ಇದಕ್ಕಿಂತ ಖುಷಿ ಇನ್ನೇನು ಬೇಕು, ಚಿತ್ರ ನೋಡಿದ ಮಂದಿ ಪುನೀತ್ ರಾಜ್ ಕುಮಾರ್ ಅವರನ್ನು ಕಂಡೆ ಎಂದು ಅನೇಕರು ಹೇಳಿದ್ದು ಇದು ಇನ್ನಷ್ಟು ಧನ್ಯತಾ ಭಾವ ತೋರುವಂತೆ ಮಾಡಿತು ಎಂದು ಮಾಹಿತಿ ಹಂಚಿಕೊಂಡರು

ಚಿತ್ರ ಬಿಡುಗಡೆಯಾದ ದಿನದಿಂದ ಅವರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು. ಇನ್ನೂ ಈ ಯಶಸ್ಸಿಗೆ ನಾನೊಬ್ಬ ಮಾತ್ರ ಕಾರಣನಲ್ಲ. ಇಡೀ ತಂಡದ ಶ್ರಮದಿಂದ ಈ ಯಶಸ್ಸು ದೊರಕಿದೆ. ಅದರಲ್ಲಿ ಮುಖ್ಯವಾದವರು, ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಅವರ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಿಸಿರುವ ಡಾ.ಸೂರಿ. ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಕೂಡ ಉತ್ತಮ ಮಾತುಗಳು ಕೇಳಿ ಬರುತ್ತಿದೆ ಎಂದು ಮೆಚ್ಚುಗೆಯ ಮಾತನಾಡಿದರು
ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯವಾದ. ಹತ್ತು ವರ್ಷಗಳ ಹಿಂದೆ ಡಾ.ಸೂರಿ ಜೊತೆಗೆ ಒಂದು ಚಿತ್ರದ ಕುರಿತು ಮಾತನಾಡಿದ್ದೆ. ಆ ಚಿತ್ರವನ್ನು ಸೂರಿ ಅವರು ಬೇಗ ಆರಂಭಿಸಲಿ ಎಂದರು