Rayara Darshan' album song released in the presence of Guru Raya Raghavendra Swamy

ಗುರು ರಾಯರ ಸಮ್ಮುಖದಲ್ಲಿ’ರಾಯರ ದರ್ಶನ’ ಅಲ್ಬಮ್ ಹಾಡು ಬಿಡುಗಡೆ - CineNewsKannada.com

ಗುರು ರಾಯರ ಸಮ್ಮುಖದಲ್ಲಿ’ರಾಯರ ದರ್ಶನ’ ಅಲ್ಬಮ್ ಹಾಡು ಬಿಡುಗಡೆ

ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳು ಅಸಂಖ್ಯಾತ ಭಕ್ತಗಣ ಹೊಂದಿದ್ದಾರೆ. ಮಂತ್ರಾಲಯದ ಶ್ರೀಗಳಾದ ಶ್ರೀಸುಬುಧೇಂದ್ರ ತೀರ್ಥರು ನಿತ್ಯ ರಾಯರ ಸೇವೆ ಮಾಡುವ ಕ್ಷಣಗಳನ್ನು ಭಕ್ತರಿಗೆ ತಲುಪಿಸುವ ಉದ್ದೇಶದಿಂದ “ರಾಯರ ದರ್ಶನ” ಆಲ್ಬಂ ಹಾಡು ಹೊರ ತರಲಾಗಿದೆ. ಮಂತ್ರಾಲಯದಲ್ಲಿ ಗುರು ರಾಯರ ಮುಂದೆ ಆಲ್ಬಂ ಹಾಡು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ರಾಯರ ಸೇವಕರಾದ ರಘುಭಟ್ ಮತ್ತು ಸುಗುಣ ರಘು ದಂಪತಿಗಳು “ರಾಯರ ದರ್ಶನ” ಆಲ್ಬಂ ಹಾಡು ಹೊರ ತಂದಿದ್ಧಾರೆ. ಅವರಿಗೆ ಶ್ರೀಸುಬುಧೇಂದ್ರ ತೀರ್ಥರ ಸಹಕಾರ ಮತ್ತು ಬೆಂಬಲದಿಂದ ಆಲ್ಬಂ ಹಾಡು ಅತ್ಯುತ್ತಮವಾಗಿ ಮೂಡಿ ಬಂದಿದ್ದು ಸಾಕ್ಷಾತ್ ರಾಯರನ್ನು ದರ್ಶನ ಮಾಡಿದಷ್ಟು ಅನುಭವವಾಗಲಿದೆ.

ಆಲ್ಬಂ ಬಿಡುಗಡೆ ವೇಳೆ ಚಿತ್ರರಂಗದ ಹಿರಿಯ ಕಲಾವಿದರಾದ ಪ್ರಯಣರಾಜ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್, ತಾರಾ ಅನುರಾಧ, ಸುಧಾರಾಣಿ, ಮೇಘನಾ ಗಾಂವಕರ್, ಮಾನ್ವಿತಾ ಕಾಮತ್, ಭಾವನಾ ರಾವ್, ನೆನಪಿರಲಿ ಪ್ರೇಮ್ ಆದಿಯಾಗಿ ಚಿತ್ರರಂಗದ ಹಲವು ಮಂದಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು

ಈ ವೇಳೆ ಮಾತಿಗಿಳಿದ ಶ್ರೀಸುಬುಧೇಂದ್ರ ತೀರ್ಥರು ಜಾತ್ಯತೀತವಾಗಿ ಎಲ್ಲಾ ರಾಯರ ಭಕ್ತರ ಸಹಕಾರದಿಂದ “ರಾಯರ ದರ್ಶನ” ಆಲ್ಬಂ ಸಾಂಗ್ ಬಹಳ ಚೆನ್ನಾಗಿ ಮೂಡಿಬಂದಿದೆ. ರಘು ಭಟ್ ನಿರ್ದೇಶನದಲ್ಲಿ ಹಾಗೂ ಸುಗುಣ ಭಟ್ ಅವರ ನಿರ್ಮಾಣದಲ್ಲಿ, ಅಜನೀಶ್ ಲೋಕನಾಥ್ ಅವರ ಸ್ವರ ಸಂಯೋಜನೆಯಲ್ಲಿ ಹಾಗೂ ಅಬ್ಬಿ ವಿ ಗಾಯನದಲ್ಲಿ ಅದ್ಭುತವಾಗಿ ಮೂಡಿಬಂದಿರುವ ಈ ಆಲ್ಬಂನಲ್ಲಿ ಬರೀ ಹಾಡನ್ನು ಮಾತ್ರ ತೋರಿಸದೆ, ಮಠದಲ್ಲಿ ನಡೆಯುವ ಪೂಜೆ, ದೈನಂದಿನ ಉತ್ಸವ ಹಾಗೂ ವಾರ್ಷಿಕ ಉತ್ಸವಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.ಈ ಆಲ್ಬಂ ಸಾಂಗ್ ಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ರಾಯರ ಭಕ್ತರಿಗೆ ಗುರುರಾಯರ ಅನುಗ್ರಹ ಸದಾ ಇರಲಿ ಎಂದು ಆಶೀರ್ವದಿಸಿದರು

ನಿರ್ದೇಶಕ ರಘು ಭಟ್ ಮಾತನಾಡಿ, ‘ಕಳೆದ ಎಂಟು ತಿಂಗಳಿಂದ ಶ್ರಮ ಪಟ್ಟು ಈ ಹಾಡು ಮಾಡಲಾಗಿದೆ. ನೈಜತೆಗೆ ಹತ್ತಿರವಾಗಿ ಚಿತ್ರೀಕರಣ ಮಾಡಿದ್ದೇವೆ. ನನಗೆ ತಿಳಿದ ಹಾಗೆ ಇಡೀ ಭಾರತದಲ್ಲೇ ಮಠದ ಕುರಿತಾಗಿ ಸಮಗ್ರವಾದ ವಿಡಿಯೋ ಸಾಂಗ್ ಮಾಡಿಲ್ಲ. ಇದು ಮಾಡಿರುವುದು ನಾವೇ ಮೊದಲಿಗರು ಎನ್ನಬಹುದು. ತುಂಬಾ ಚೆನ್ನಾಗಿ ಆಲ್ಬಂ ಸಾಂಗ್ ಬಂದಿದೆ. ಒಂದು ವರ್ಷದಲ್ಲಿ ಮಂತ್ರಾಲಯದಲ್ಲಿ ಏನೆಲ್ಲಾ ಕಾರ್ಯಕ್ರಮ ನಡೆಯುತ್ತವೆ ಎಂಬುದನ್ನು ಹಾಡಿನಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ರಾಯರ ಭಕ್ತನಾಗಿ ಇದನ್ನು ಮಾಡಿದ್ದೇನೆ. ಈ ಸಂದರ್ಭದಲ್ಲಿ ಶ್ರೀಸುಬುಧೇಂದ್ರ ತೀರ್ಥರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ. ಸಹಕಾರ ನೀಡಿದ ನಮ್ಮ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ಲಕ್ಷ್ಮೀ ಗಣೇಶ ಪೆÇ್ರಡಕ್ಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡನ್ನು ಎಲ್ಲರೂ ನೋಡಬಹುದು’ ಎಂದರು.

ಸಂಗೀತದ ಕುರಿತು ಅಜನೀಶ್ ಲೋಕನಾಥ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ಸಿ.ಆರ್ ಬಾಬಿ, ಪ್ರಾಜೆಕ್ಟ್ ಹೆಡ್ ಶ್ರೀನಿಧಿ ಕರಣಂ, ಗಾಯಕ ಅಬ್ಬಿ ವಿ, ನಿರ್ಮಾಪಕಿ ಸುಗುಣ ರಘು, ಶ್ರೀಶ ಜೋಯಿಸ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಶ್ರೀಸುಬುಧೇಂದ್ರ ತೀರ್ಥರಿಗೆ ಪ್ರಶಸ್ತಿ

ಪ್ರತಿ ವರ್ಷ ಜೂನ್ ನಲ್ಲಿ ಟಿ.ಎನ್.ಐ.ಟಿ. ಮೀಡಿಯಾ ಅವಾರ್ಡ್ ಕೊಡುತಾ ಬಂದಿದ್ದೀವಿ. ಈ ವರ್ಷ ರಾಯರ ದರ್ಶನ ಅಲ್ಬಮ್ ಗೀತೆ ಬಿಡುಗಡೆ ಇದ್ದದ್ದರಿಂದ ಈ ವರ್ಷದ ಅವಾರ್ಡ್ ಗಳನ್ನು ಸೆಪ್ಟೆಂಬರ್ ನಲ್ಲಿ ಕೊಡುತ್ತಿದ್ದೇವೆ. ಆದರೆ, ವರ್ಷದ ಟಿ.ಎನ್.ಐ.ಟಿ ಮೊದಲ ಮೀಡಿಯಾ ಅವಾರ್ಡ್ ಅನ್ನು ಶ್ರೀಸುಬುಧೇಂದ್ರ ತೀರ್ಥರಿಗೆ ಪ್ರಧಾನ ಮಾಡಲಾಯಿತು

ಶ್ರೀಗಳು ಈ ಮೊದಲು ಪೂರ್ವಾಶ್ರಮದಲ್ಲಿ ಇದ್ದಾಗ ಪತ್ರಕರ್ತರಾಗಿದ್ದರು. ಹಾಗಾಗಿ ಈ ವರ್ಷದ ಮೊದಲ ಟಿ.ಎನ್.ಐ.ಟಿ ಅವಾರ್ಡ್ ಅನ್ನು ಈ ವೇದಿಕೆಯಲ್ಲಿಯೇ ಶ್ರೀಗಳವರಿಗೆ ಕೊಡುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ರಘು ಭಟ್ ತಿಳಿಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin