Shooting of the film 'Aparichithe' in Ramanagara

‘ರಾಮನಗರದಲ್ಲಿ ‘ಅಪರಿಚಿತೆ’ ಚಿತ್ರದ ಚಿತ್ರೀಕರಣ - CineNewsKannada.com

‘ರಾಮನಗರದಲ್ಲಿ ‘ಅಪರಿಚಿತೆ’ ಚಿತ್ರದ ಚಿತ್ರೀಕರಣ

“ತಾಯವ್ವ” ಖ್ಯಾತಿಯ ಗೀತಪ್ರಿಯ, ಸಿಂಧೂ ಲೋಕನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗಿರುವ “’ಅಪರಿಚಿತೆ’ ಚಿತ್ರದ ಚಿತ್ರೀಕರಣ ರಾಮನಗರದಲ್ಲಿ ಭರದಿಂದ ಸಾಗಿದೆ.

‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ “ಅಪರಿಚಿತೆ” ಚಿತ್ರದ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವನಾಥ್ ನಿರ್ದೇಶಿಸುತ್ತಿರುವ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಶಾಸಕ ಅಶ್ವಥ್ ನಾರಾಯಣ್ ಅನಾವರಣ ಮಾಡಿ ಚಿತ್ರಕ್ಕೆ ಚಾಲನೆ ನೀಡಿದ್ದರು.

ಪ್ರಸ್ತುತ ಚಿತ್ರಕ್ಕೆ ರಾಮನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಗೀತಪ್ರಿಯ, ಸಿಂಧೂ ಲೋಕನಾಥ್ ಸೇರಿದಂತೆ ಅನೇಕ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.ನೈಜಘಟನೆ ಆಧಾರಿತ ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಸಹ ಹೊಂದಿದೆ ಎಂದು ನಟಿ ಗೀತಪ್ರಿಯ ತಿಳಿಸಿದ್ದಾರೆ.

ಗೀತಪ್ರಿಯ ಪತಿ ಸುರೇಶ್ ಕುಮಾರ್‍ಅಮರ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರದ ತಾರಾಬಳಗದಲ್ಲಿ ಗೀತಪ್ರಿಯ, ಹಿರಿಯ ನಟ ಶ್ರೀನಾಥ್, ರೋಹಿತ್ (ಶ್ರೀನಾಥ್ ಅವರ ಪುತ್ರ), ಸಿಂಧೂ ಲೋಕನಾಥ್, ಆರ್.ಜೆ ನಿಖಿತಾ ಮುಂತಾದವರಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin