'Muddusose' serial at a critical juncture; a major twist in existence and conflict

ಕುತೂಹಲ ಘಟ್ಟದಲ್ಲಿ ‘ಮುದ್ದುಸೊಸೆʼ ಧಾರಾವಾಹಿ; ಅಸ್ತಿತ್ವ, ಸಂಘರ್ಷದ ಮಹಾತಿರುವು - CineNewsKannada.com

ಕುತೂಹಲ ಘಟ್ಟದಲ್ಲಿ ‘ಮುದ್ದುಸೊಸೆʼ ಧಾರಾವಾಹಿ; ಅಸ್ತಿತ್ವ, ಸಂಘರ್ಷದ ಮಹಾತಿರುವು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ ‘ಮುದ್ದುಸೊಸೆ’ ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದ್ದು ಅಸ್ತಿತ್ವ, ಸಂಘರ್ಷದ ಮಹಾತಿರುವು ರೋಚಕ ಕುತೂಹಲ‌ ಮೂಡಿಸಿದೆ.

ಆರಂಭದಿಂದಲೂ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಧಾರಾವಾಹಿಯಲ್ಲಿ, ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವ ಘಟನೆ ಸಂಭವಿಸಿದೆ.

“ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ನನ್ನ ಗಂಡನ ಮೇಲಿರುವ ಅಪವಾದ ಸುಳ್ಳು!” ಒಂದು ನಂಬಿಕೆಯ ಮೇಲೆ ಕಲರ್ಸ್ ಕನ್ನಡದ ‘ಮುದ್ದುಸೊಸೆ’ ಧಾರಾವಾಹಿಯ ಕಥಾನಾಯಕಿ ವಿದ್ಯಾ ಈಗ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಕಥೆಯ ದಿಕ್ಕನ್ನೇ ಬದಲಿಸುವಂತಹ ‘ಮಹಾ ತಿರುವು’ ಪಡೆದುಕೊಂಡಿದೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ.

ಮುದ್ದುಸೊಸೆ ಧಾರಾವಾಹಿ, ಪ್ರಸಾರ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ಸಾಕಷ್ಟು ತಿರುವುಗಳನ್ನು ವೀಕ್ಷಕರಿಗೆ ನೀಡುತ್ತಲೇ ಬಂದಿದೆ. ವೆಬ್‌ಸಿರೀಸ್‌ನಂತೆ ಏಪಿಸೋಡ್‌ನಿಂದ ಏಪಿಸೋಡ್‌ಗೆ ಕೌತುಕವನ್ನು ಉಳಿಸಿಕೊಳ್ಳುತ್ತಲೇ ಸಾಗಿದೆ. ಒಂದೇ ತಿಂಗಳೊಳಗೆ ಎಂಟಕ್ಕೂ ಅಧಿಕ ಮಹಾ ತಿರುವುಗಳನ್ನು ಕಂಡಿರುವ ಕನ್ನಡದ ಏಕೈಕ ಧಾರಾವಾಹಿ ಎಂದರೂ ಅತಿಶಯೋಕ್ತಿಯಲ್ಲ. ಕನ್ನಡ ಕಿರುತೆರೆಯಲ್ಲಿ ಇಷ್ಟೊಂದು ವೇಗವಾಗಿ ಕಥೆ ಹೇಳಲು ಹೊರಟಿರುವುದು ಒಂದು ಹೊಸ ಪ್ರಯೋಗ ಎನ್ನಲಾಗುತ್ತಿದೆ. ಇದೀಗ ಇದೇ ʻಮುದ್ದುಸೊಸೆʼ ಮಗದೊಂದು ಟ್ವಿಸ್ಟ್‌ ಜೊತೆಗೆ ಆಗಮಿಸಿದ್ದಾಳೆ.

ಯಾರೂ ಊಹಿಸದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಭದ್ರ ಮತ್ತು ವಿನಂತಿ ಒಂದೇ ಹಾಸಿಗೆ ಹಂಚಿಕೊಂಡ ಸ್ಥಿತಿಯಲ್ಲಿ ಮನೆಯವರಿಗೆ ಕಂಡಿದ್ದಾರೆ. ಇದು ಭದ್ರ ಮತ್ತು ವಿದ್ಯಾಳ ಸುಂದರ ಸಂಸಾರವನ್ನು ಒಡೆಯಲು ಕುತಂತ್ರಿಗಳು ಹಣೆದ ನೀಚ ಪ್ಲಾನ್ ಆಗಿದೆ. ಮನೆಯ ಒಳಗೇ ಇರುವ ಸಾವಿತ್ರಿಯ ದ್ರೋಹದಿಂದಾಗಿ ಇಡೀ ಮನೆಯ ಪರಿಸ್ಥಿತಿ ತಲೆಕೆಳಗಾಗಿದೆ.

ಶಿವರಾಮೇಗೌಡನ ಸವಾಲು

ಹಠಾತ್ ಬೆಳವಣಿಗೆಯಿಂದ ಕುಪಿತನಾದ ಭದ್ರನ ತಂದೆ ಶಿವರಾಮೇಗೌಡ, ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ಸೊಸೆ ವಿದ್ಯಾಳ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಇಟ್ಟಿದ್ದಾನೆ. ಮೊದಲನೆಯದು ಭದ್ರನಿಗೆ ವಿಚ್ಛೇದನ ನೀಡಿ ದೂರವಾಗುವುದು. ಇದಕ್ಕೆ ಪ್ರತಿಯಾಗಿ ಶಿವರಾಮೇಗೌಡ ತಮ್ಮ ಒಟ್ಟು ಆಸ್ತಿಯಲ್ಲಿ ಶೇಕಡಾ ಐವತ್ತರಷ್ಟು ಪಾಲನ್ನು ವಿದ್ಯಾಗೆ ನೀಡಲು ಸಿದ್ಧನಿದ್ದಾನೆ. ಎರಡನೆಯದು ಭದ್ರನ ಮೊದಲ ಪತ್ನಿಯಾಗಿಯೇ ಮನೆಯಲ್ಲಿ ಉಳಿಯುವುದು. ಆದರೆ, ಭದ್ರ ಮತ್ತು ವಿನಂತಿಯ ಎರಡನೇ ಮದುವೆಗೆ ವಿದ್ಯಾ ಸಮ್ಮತಿಸಿ, ಮೊದಲ ಪತ್ನಿಯಾಗಿ ಮನೆಯಲ್ಲಿಯೇ ಉಳಿಯಬೇಕು.

ವಿದ್ಯಾಳ ಅಚಲ ನಂಬಿಕೆ ಮತ್ತು ಹೋರಾಟ
ಇಡೀ ಪ್ರಪಂಚವೇ ಭದ್ರನ ಮೇಲೆ ಬೆರಳು ತೋರಿಸುತ್ತಿದ್ದರೂ, ಪತಿಯ ಮೇಲೆ ವಿದ್ಯಾಳಿಗೆ ಅಚಲವಾದ ನಂಬಿಕೆಯಿದೆ. ಗಂಡನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂಬ ಸತ್ಯವನ್ನು ಅರಿತಿರುವ ವಿದ್ಯಾ, ಆಸ್ತಿ ಅಥವಾ ರಾಜಿ ಯಾವುದಕ್ಕೂ ಬಗ್ಗದೆ ತನ್ನ ಮೌಲ್ಯಗಳಿಗಾಗಿ ನಿಂತಿದ್ದಾಳೆ.

ಮಾವಯ್ಯನ ನಿರ್ಧಾರದ ವಿರುದ್ಧ ಮತ್ತು ತನ್ನ ಪತಿಯ ಗೌರವವನ್ನು ಕಾಪಾಡಲು ವಿದ್ಯಾ ಈಗ ರಣರಂಗಕ್ಕೆ ಇಳಿದಿದ್ದಾಳೆ. ತಾಳಿಯನ್ನು ಉಳಿಸಿಕೊಳ್ಳುವ ಹೋರಾಟದ ಜೊತೆಗೆ, ಮನೆಯಲ್ಲೇ ಅಡಗಿರುವ ಕುತಂತ್ರಿಗಳ ನಿಜ ಬಣ್ಣವನ್ನು ಬಯಲು ಮಾಡುವ ಗುರುತರ ಜವಾಬ್ದಾರಿ ಈಗ ಅವಳ ಮೇಲಿದೆ.

ಮುಂದಿನ ದಿನಗಳಲ್ಲಿ ಏನು ಕಾದಿದೆ

ವಿದ್ಯಾಳ ಈ ಏಕಾಂಗಿ ಹೋರಾಟಕ್ಕೆ ಜಯ ಸಿಗುತ್ತಾ ವಿಧಿ ಆಟದ ಮುಂದೆ ವಿದ್ಯಾ ಸೋಲುತ್ತಾಳಾ ಅಥವಾ ಸತ್ಯವನ್ನು ಸಾಬೀತುಪಡಿಸಿ ಸಂಸಾರವನ್ನು ಮತ್ತೆ ಒಂದು ಮಾಡುತ್ತಾಳಾ ಕುತಂತ್ರಿಗಳ ಮುಖವಾಡ ಕಳಚುವ ಆ ರೋಚಕ ಕ್ಷಣಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಈ ಮಹಾ ತಿರುವುಗಳ ಸರಣಿಯನ್ನು ಮಿಸ್ ಮಾಡದೆ ನೋಡಿ, ‘ಮುದ್ದುಸೊಸೆ’ – ಪ್ರತಿ ರಾತ್ರಿ 7:30ಕ್ಕೆ, ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin