The movie Ajnathavasi will be aired on Zee5 OTT on the 28th.

ಇದೇ 28ಕ್ಕೆ ಜೀ5 ಒಟಿಟಿಯಲ್ಲಿ ಅಜ್ಞಾತವಾಸಿ ಸಿನಿಮಾ ಪ್ರಸಾರ - CineNewsKannada.com

ಇದೇ 28ಕ್ಕೆ ಜೀ5 ಒಟಿಟಿಯಲ್ಲಿ ಅಜ್ಞಾತವಾಸಿ ಸಿನಿಮಾ ಪ್ರಸಾರ

ಕನ್ನಡ ಪ್ರೇಕ್ಷಕರು ಕಂಟೆಂಟ್ ಬೆಸ್ಡ್ ಸಿನಿಮಾಗಳನ್ನು ಕೈಬಿಟ್ಟ ಉದಾಹರಣೆ ಇಲ್ಲ. ಅದಕ್ಕೆ ಸದ್ಯದ ಉದಾಹರಣೆ ಅಜ್ಞಾತವಾಸಿ ಸಿನಿಮಾ. ಥಿಯೇಟರ್ ನಲ್ಲಿ ಮೆಚ್ಚುಗೆ ಪಡೆದಿದ್ದ ಈ ಚಿತ್ರವೀಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಭಾರತದ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಜೀ5ನಲ್ಲಿ ಇದೇ 28 ರಂದು ಅಜ್ಞಾತವಾಸಿ ಸಿನಿಮಾ ಶೀಘ್ರದಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಜನಾರ್ದನ್ ಚಿಕ್ಕಣ್ಣ ನಿರ್ದೇಶನದಲ್ಲಿ ಹೇಮಂತ್ ರಾವ್, ಪ್ರಚುರ ಪಿಪಿ ಹಾಗೂ ಜಯಲಕ್ಷ್ಮಿ ನಿರ್ಮಾಣದಲ್ಲಿ ಅಜ್ಞಾತವಾಸಿ ಸಿನಿಮಾ ಮೂಡಿ ಬಂದಿತ್ತು. ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಮಲೆನಾಡಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಪ್ರೇಕ್ಷಕರು ಮೆಚ್ಚಿಗೆ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟ ಜಾನ್ ಅಬ್ರಹಾಂ ನೋಡಲೇಬೇಕಾದ ಸಿನಿಮಾ ಎಂದು ಹೇಳಿದ್ದರು.

ಜೀ5 ಒಟಿಟಿ ಎಂಟ್ರಿ ಬಗ್ಗೆ ಜೀ ವಕ್ತಾರರು ಮಾತನಾಡಿದ್ದು, “ಕನ್ನಡದ ಬ್ಲಾಕ್‍ಬಸ್ಟರ್ ಅಜ್ಞಾತವಾಸಿ ಈಗಾಗಲೇ ಚಿತ್ರಮಂದಿರಗಳಲ್ಲಿ ಗಮನಾರ್ಹ ಛಾಪು ಮೂಡಿಸಿದೆ. ಈ ಚಿತ್ರ ನಮ್ಮ ವೇದಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸವಿದೆ. ಅದ್ಭುತ ಕಥಾಹಂದರ, ಕಾಡುವ ವಾತಾವರಣ ಮತ್ತು ಅದ್ಭುತ ನಟನೆ ಈ ಚಿತ್ರವು ನಮ್ಮ ವೈವಿಧ್ಯಮಯ ಕ್ಯಾಟಲಾಗ್‍ಗೆ ಅತ್ಯುತ್ತಮ ಸೇರ್ಪಡೆಯಾಗಿದೆ ಎಂದಿದ್ಧಾರೆ

ನಿರ್ದೇಶಕ ಜನಾರ್ದನ್ ಚಿಕ್ಕಣ್ಣ, ಅಜ್ಞಾತವಾಸಿ ಚಿತ್ರವನ್ನು ಮಾಡಲು ಹೊರಟಾಗ, ಅದು ಕೇವಲ ಒಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿರಬಾರದು ಎಂದು ಬಯಸಿದ್ದೆ. ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಚಿತ್ರವಾಗಿ ಕಲ್ಪಿಸಿಕೊಂಡಿದ್ದೇವು. ರಂಗಾಯಣ ರಘು ಅವರ ಅಭಿನಯ ನಿಜಕ್ಕೂ ಅದ್ಭುತವಾಗಿದೆ. ಕಥೆಯ ರಹಸ್ಯಗಳನ್ನು ಬಹಿರಂಗಪಡಿಸಲು ಜಾಗತಿಕ ಪ್ರೇಕ್ಷಕರು ಉತ್ಸುಕನಾಗಿದ್ದೇನೆ.ವಿಶ್ವಾದ್ಯಂತ ಪಡೆಯುವ ಪ್ರೀತಿಯನ್ನು ನೋಡಲು ಕಾಯಲು ಸಾಧ್ಯವಿಲ್ಲ ಇದು ವಿಶೇಷವಾಗಿರುತ್ತದೆ” ಎಂದಿದ್ದಾರೆ.

ರಂಗಾಯಣ ರಘು ಮಾತನಾಡಿ, ನನ್ನ ವೃತ್ತಿಜೀವನದ ಅತ್ಯಂತ ವಿಶೇಷ ಸಿನಿಮಾಗಳಲ್ಲಿ ಒಂದಾಗಿದೆ. ಪೊಲೀಸ್ ಇನ್ಸ್‍ಪೆಕ್ಟರ್ ಪಾತ್ರವನ್ನು ನಿರ್ವಹಿಸುವುದು ಉಲ್ಲಾಸಕರ ಮತ್ತು ಆಳವಾದ ಭಾವನಾತ್ಮಕವಾಗಿತ್ತು. ಈ ಚಿತ್ರದಲ್ಲಿ ಪ್ರತಿ ಮೌನಕ್ಕೂ ಒಂದು ಕಥೆ ಇದೆ ಮತ್ತು ಪ್ರತಿ ಪಿಸುಮಾತು ಒಂದು ಸುಳಿವಿನಂತೆ ಭಾಸವಾಗುವ ಹಳ್ಳಿಯೊಳಗೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಅಭಿಮಾನಿಗಳು ತೋರಿಸಿದ ಪ್ರೀತಿ ಅಗಾಧವಾಗಿದೆ . Zಇಇ5 ನಲ್ಲಿ ಡಿಜಿಟಲ್ ಪ್ರೇಕ್ಷಕರು ಇದನ್ನು ಅನುಭವಿಸಲು ನಾನು ಉತ್ಸುಕನಾಗಿದ್ದೇನೆ. ಕುಳಿತುಕೊಳ್ಳಿ, ನಿಧಾನಗೊಳಿಸಿ ಮತ್ತು ನಿಗೂಢತೆಯು ನಿಮ್ಮನ್ನು ಆಕರ್ಷಿಸಲಿ” ಎಂದಿದ್ದಾರೆ.

ಕಥೆ ಏನು

ಮಲೆನಾಡ ಸಣ್ಣ ಹಳ್ಳಿಯಲ್ಲಿ ಒಂದು ಪೊಲೀಸ್ ಠಾಣೆ. ಆ ಠಾಣೆ ಶುರುವಾದಾಗಿನಿಂದ ಒಂದು ಕೇಸ್ ಸಹ ಇಲ್ಲ. ಹೀಗಿರುವಾಗಲೇ, ಆ ಊರಿನ ಜಮೀನ್ದಾರ ಶಂಕರಪ್ಪ ಶರತ್ ಲೋಹಿತಾಶ್ವ ನಿಧನರಾಗುತ್ತಾರೆ. ಅದೊಂದು ಸಹಜ ಸಾವು ಅಂದುಕೊಂಡವರಿಗೆ ಅದು ಸಹಜ ಸಾವಲ್ಲ, ಕೊಲೆ ಎಂದು ಅದೇ ಠಾಣೆಯಲ್ಲಿ ಎಷ್ಟೋ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹೇಳುತ್ತಾರೆ. ಅವರಿಗೆ ಅದು ಕೊಲೆ ಅಂತ ಯಾಕನಿಸಿತು? ಆ ಕೊಲೆ ಯಾರು ಮಾಡಿದರು? ಅದರ ಹಿಂದಿನ ಮರ್ಮವೇನು? ಎನ್ನುವುದೇ `ಅಜ್ಞಾತವಾಸಿ’ಯ ಕಥೆ.

ತಾರಾಬಳಗದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ, ಸಿದ್ದು ಮೂಲಿಮನಿ, ಪಾವನಾ ಗೌಡ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಮುಂತಾದವರು ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin