A grand display of the divine life of Lord Krishna in Bengaluru and Chennai

ಬೆಂಗಳೂರು ಮತ್ತು ಚೆನ್ನೈ ನಲ್ಲಿ ಶ್ರೀಕೃಷ್ಣನ ದಿವ್ಯ ಜೀವನದ ಭವ್ಯ ಪ್ರದರ್ಶನ - CineNewsKannada.com

ಬೆಂಗಳೂರು ಮತ್ತು ಚೆನ್ನೈ ನಲ್ಲಿ ಶ್ರೀಕೃಷ್ಣನ ದಿವ್ಯ ಜೀವನದ ಭವ್ಯ ಪ್ರದರ್ಶನ

ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತು ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ ‘ರಾಜಾಧಿರಾಜ್ ಯಾತ್ರಾ ಕೃಷ್ಣ ಲೀಲಾ ಆಪ್ಕೆ ದ್ವಾರ್’ ಎಂಬ ಭವ್ಯ ಭಕ್ತಿಪ್ರಧಾನ ನಾಟಕವನ್ನು ಬೆಂಗಳೂರು ಮತ್ತು ಚೆನ್ನೈ ನಗರಗಳಿಗೆ ಹೊತ್ತು ತರುತ್ತಿದೆ.

ಶ್ರೀಕೃಷ್ಣನ ಪವಿತ್ರ ಜೀವನದ ಪಯಣವನ್ನು ಗೋಕುಲ ಮತ್ತು ವೃಂದಾವನದ ಬೀದಿಗಳಿಂದ ಹಿಡಿದು ಮಥುರೆಯವರೆಗೆ ಹಾಗೂ ದ್ವಾರಕೆಯ ರಾಜಾಧಿರಾಜನಾಗಿ ಆತ ನಡೆಸಿದ ಆಳ್ವಿಕೆಯನ್ನು ನಾಟಕ ವೇದಿಕೆಯ ಮೇಲೆ ಜೀವಂತಗೊಳಿಸಲಿದೆ.ವಿಶ್ವದಾದ್ಯಂತ ಈಗಾಗಲೇ 75ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಈ ಅದ್ಭುತ ಕಲಾಕೃತಿ, ಈಗ ದಕ್ಷಿಣ ಭಾರತದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದೆ.

ಸಂಸ್ಥಾಪಕರು ಮತ್ತು ನಿರ್ಮಾಪಕರಾದ ಧನ್ ರಾಜ್ ನಥ್ವಾನಿ ಮಾತನಾಡಿ“ಶ್ರೀಕೃಷ್ಣನ ಕಾಲಾತೀತ ಬುದ್ಧಿವಂತಿಕೆಯನ್ನು ಇಂದಿನ ಪೀಳಿಗೆಗೆ ರಂಗಭೂಮಿಯ ಮೂಲಕ ತಲುಪಿಸುವುದು ನಮ್ಮ ಉದ್ದೇಶ. ಈ ಪ್ರದರ್ಶನವು ಕೇವಲ ಭವ್ಯವಾಗಿರುವುದು ಮಾತ್ರವಲ್ಲದೆ, ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಆಧ್ಯಾತ್ಮಿಕ ಅನುಭವ ನೀಡಲಿದೆ ಎಂದಿದ್ದಾರೆ

ಕಾರ್ಯಕಾರಿ ನಿರ್ಮಾಪಕರಾದ ಭೂಮಿ ನಥ್ವಾನಿ ಮಾತನಾಡಿ “ರಾಜಾಧಿರಾಜ್ ಯಾತ್ರಾ ಕೇವಲ ಒಂದು ಪ್ರದರ್ಶನವಲ್ಲ, ಇದೊಂದು ಆಧ್ಯಾತ್ಮಿಕ ಪ್ರಯಾಣ. ಲೈವ್ ಹಾಡುಗಾರಿಕೆಯಿಂದ ಹಿಡಿದು ನೃತ್ಯ ಸಂಯೋಜನೆಯವರೆಗೆ ಪ್ರತಿಯೊಂದು ವಿವರವನ್ನೂ ಅತ್ಯಂತ ಭಕ್ತಿ ಮತ್ತು ಜವಾಬ್ದಾರಿಯಿಂದ ರೂಪಿಸಲಾಗಿದೆ ಎಂದು ಹೇಳಿದ್ದಾರೆ

ಪ್ರದರ್ಶನದ ವೇಳಾಪಟ್ಟಿ : ಬೆಂಗಳೂರು

ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕೋಣನಕುಂಟೆ (ಫೆÇೀರಂ ಸೌತ್ ಮಾಲ್ ಪಕ್ಕದಲ್ಲಿ)

  • ಮಾರ್ಚ್ 19: ಸಂಜೆ 7 ಗಂಟೆಗೆ
  • ಮಾರ್ಚ್ 20: ಸಂಜೆ 7 ಗಂಟೆಗೆ
  • ಮಾರ್ಚ್ 21: ಮಧ್ಯಾಹ್ನ 2 ಮತ್ತು ಸಂಜೆ 7 ಗಂಟೆಗೆ
  • ಮಾರ್ಚ್ 22: ಮಧ್ಯಾಹ್ನ 2 ಮತ್ತು ಸಂಜೆ 7 ಗಂಟೆಗೆ

ಚೆನ್ನೈ
ಸ್ಥಳ: ಸರ್ ಮುತ್ತಾ ವೆಂಕಟಸುಬ್ಬ ರಾವ್ ಕಾನ್ಸರ್ಟ್ ಹಾಲ್, ಹ್ಯಾರಿಂಗ್ಟನ್ ರಸ್ತೆ, ಚೆಟ್ಪೆಟ್

  • ಮಾರ್ಚ್ 27: ಸಂಜೆ 7 ಗಂಟೆಗೆ
  • ಮಾರ್ಚ್ 28: ಮಧ್ಯಾಹ್ನ 2 ಮತ್ತು ಸಂಜೆ 7ಗಂಟೆಗೆ
  • ಮಾರ್ಚ್ 29: ಬೆಳಗ್ಗೆ 11:30 ಮತ್ತು ಸಂಜೆ 4:30 ಗಂಟೆಗೆ
    7 ದಿನಗಳು | 2 ನಗರಗಳು | 11,000ಕ್ಕೂ ಹೆಚ್ಚು ಪ್ರೇಕ್ಷಕರ ನಿರೀಕ್ಷೆ

ಪ್ರದರ್ಶನದ ಬಗ್ಗೆ

ಧನ್ ರಾಜ್ ನಥ್ವಾನಿ ಪರಿಕಲ್ಪನೆ ಮತ್ತು ನಿರ್ಮಾಣದ ‘ರಾಜಾಧಿರಾಜ್ ಯಾತ್ರಾ’, ಶ್ರೀಕೃಷ್ಣನ ಬಾಲ್ಯದ ಮುಗ್ಧತೆ, ಧೈರ್ಯ, ಬುದ್ಧಿವಂತಿಕೆ ಮತ್ತು ಧರ್ಮದ ಹಾದಿಯನ್ನು ಪರಿಚಯಿಸುವ ಆಧ್ಯಾತ್ಮಿಕ ಅನುಭವವಾಗಿದೆ. ಶಕ್ತಿಯುತ ಕಥೆಗಾರಿಕೆ, ಭವ್ಯವಾದ ವೇದಿಕೆ ವಿನ್ಯಾಸ, ಅದ್ಭುತ ನೃತ್ಯ ಸಂಯೋಜನೆ ಮತ್ತು ಸುಮಧುರ ಸಂಗೀತದ ಮೂಲಕ ಎಲ್ಲಾ ವಯಸ್ಸಿನವರಿಗೂ ಇದು ಸಾಂಸ್ಕೃತಿಕ ರಸದೌತಣ ನೀಡಲಿದೆ.

ಪ್ರದರ್ಶನದ ವಿಶೇಷತೆ

  • ಭವ್ಯ ರಂಗಭೂಮಿ ಪ್ರದರ್ಶನ: ಸಿನೆಮ್ಯಾಟಿಕ್ ವೇದಿಕೆ ವಿನ್ಯಾಸ ಮತ್ತು ಲೈವ್ ಗಾಯನದೊಂದಿಗೆ ಮೂಡಿಬರುವ ಭಕ್ತಿ ಲೀಲೆ
  • ಸಂಪೂರ್ಣ ಜೀವನ ಚರಿತ್ರೆ: ವೃಂದಾವನದಿಂದ ದ್ವಾರಕೆಯವರೆಗಿನ ಕೃಷ್ಣನ ಪಯಣದ ಸುಂದರ ಚಿತ್ರಣ.
  • ಪರಂಪರೆ ಮತ್ತು ಆಧುನಿಕತೆಯ ಸಂಗಮ: ಸಂಪ್ರದಾಯ ಉಳಿಸಿಕೊಂಡು ಇಂದಿನ ಪೀಳಿಗೆಗೆ ತಕ್ಕಂತೆ ಮೂಡಿಬಂದಿರುವ ಕಲಾಕೃತಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin