ತಂದೆ ನೆನೆದು ಭಾವೋದ್ವೇಗಕ್ಕೆ ಒಳಗಾದ ನಟಿ ಅಧ್ವಿತಿ ಶೆಟ್ಟಿ

ಅವಕಾಶ ವಂಚಿತರಾಗಿ, ಇನ್ನೇನು ಉದ್ಯಮ ಬಿಡಬೇಕು ಅಂತ ನಿರ್ಧಾರ ಮಾಡಿದ್ದೆ ಆ ಸಂದರ್ಭದಲ್ಲಿ “ ಧೀರ ಸಾಮ್ರಾಟ್” ಚಿತ್ರದ ಅವಕಾಶ ಸಿಕ್ಕಿತು. ಚಿತ್ರದಲ್ಲಿ ನಟಿಸುತ್ತಿರುವಾಗಲೇ ಎರಡು ಚಿತ್ರಗಳಿಗೆ ಸಹಿ ಹಾಕಿದೆ ಎನ್ನುತ್ತಲೇ ನಟಿ ಅದ್ವಿತಿ ಶೆಟ್ಟಿ ಭಾವೋದ್ವೇಗಕ್ಕೆ ಒಳಗಾದ ಘಟನೆ ನಡೆಯಿತು.

ಒಬ್ಬ ಕಲಾವಿದೆಗೆ ಚಿತ್ರವೊಂದು 25 ದಿನ ಪ್ರದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವುದು ಅಂದರೆ ಅದಕ್ಕಿಂತ ಸಂತಸ ಬೇರೆ ಇಲ್ಲ.ಚಿತ್ರ ಮುಂದಿನ ದಿನಗಳಲ್ಲಿ 50 ಮತ್ತು 100 ದಿನ ಪ್ರದರ್ಶನ ಕಾಣಲಿ ಮತ್ತೆ ನಾವೆಲ್ಲರೂ ಸೇರೋಣ. ಅಪ್ಪ ಇದ್ದರೆ ತುಂಬ ಖುಷಿಪಡುತ್ತಿದ್ದರು ಎಂದು ಹೇಳುವಾಗ ಅವರ ಕಣ್ಣುಗಳು ಒದ್ದೆಯಾಗಿದ್ದವು.
ಧೀರ ಸಾಮ್ರಾಟ್ ಚಿತ್ರದ 25 ನೇ ದಿನದ ಸಂಭ್ರಮದಲ್ಲಿ ನಟಿ ಅಧ್ವಿತಿ ಶೆಟ್ಟಿ ಅವರು ಈ ವಿಷಯ ಹಂಚಿಕೊಂಡು, ಇನ್ನಷ್ಟು ಚಿತ್ರಗಳಲ್ಲಿ ಕೆಲಸ ಮಾಡಲು ಸ್ಫೂರ್ತಿಯಾಗಿದೆ ಎಂದಿದ್ಧಾರೆ
25ನೇ ದಿನದ ಸಂಭ್ರಮ

ವರ್ಷದ ಎರಡನೇ ಚಿತ್ರ ‘ಧೀರ ಸಾಮ್ರಾಟ್’ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಘರುಗಳಿಗೆ ಪಾರಿತೋಷಕವನ್ನು ತಂಡ ವಿತರಣೆ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪವನ್ಕುಮಾರ್ 25 ಎನ್ನುವುದು ಸುಲುಭವಾದುದಲ್ಲ. ನಮ್ಮ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಎಲ್ಲಾ ಭಾಷೆ ಸೇರಿದಂತೆ 21 ಚಿತ್ರಗಳು ತೆರೆ ಕಂಡಿದ್ದವು. ಇದರ ಮಧ್ಯೆ ನಮ್ಮದು ಸತತ ಪ್ರದರ್ಶನ ಕಂಡಿರುವುದು ಖುಷಿಯ ವಿಚಾರ. ಮುಖ್ಯವಾಗಿ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಬೇಕು. ಸಮಸ್ಯೆ ಏನೇ ಬಂದರೂ ಅವರು ತಲೆಕೆಡಿಸಿಕೊಳ್ಳದೆ ಎಲ್ಲರನ್ನು ಹುರಿದುಂಬಿಸುತ್ತಿದ್ದರು ಎಂದರು
ಅದ್ವಿತಿಶೆಟ್ಟಿ ನಾವು ಕರೆದಾಗಲೆಲ್ಲಾ ಬಂದು ಮಾತು ಉಳಿಸಿಕೊಂಡಿದ್ದಾರೆ. ನಮ್ಮಂತಹ ಹೊಸ ಚಿತ್ರಕ್ಕೆ ಸ್ಟಾರ್ ನಟರು ಪೆÇ್ರೀತ್ಸಾಹ ನೀಡಿದರೆ ಇನ್ನಷ್ಟು ಪ್ರಚಾರ ಸಿಗುತ್ತಿತ್ತು. ಗೆಳೆಯ ಧ್ರುವಸರ್ಜಾ ಮುಹೂರ್ತಕ್ಕೆ ಆಗಮಿಸಿ, ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದಂತೆ ಶ್ರೀಮುರಳಿ ಪೆÇೀಸ್ಟರ್ ಅನಾವರಣಗೊಳಿಸಿದ್ದರು. ಅವರೆಲ್ಲರಿಗೂ ನಮ್ಮ ಕಡೆಯಿಂದ ತುಂಬು ಹೃದಯದ ಕೃತಜ್ಘತೆ ಸಲ್ಲಿಸಬೇಕು. ತಮಿಳು,ತೆಲುಗು ಡಬ್ಬಿಂಗ್ ರೈಟ್ಸ್ ಆಗಿದೆ. ಹಿಂದಿ, ಒಟಿಟಿ ಮಾತುಕತೆಯಲ್ಲಿದೆ. ಒಟ್ಟಿನಲ್ಲಿ ಒಂದು ಹಂತದಲ್ಲಿ ನಿರ್ಮಾಪಕರು ಸೇಫ್ ಆಗಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಸಿನಿಮಾವು ಇನ್ನು ಪ್ರದರ್ಶನ ಕಾಣುತ್ತಿದೆ ಅಂತ ನಿರ್ಮಾಪಕ ಗುಡಿಬಂಡೆ ಮಾಹಿತಿ ನೀಡಿದರು.
ನಟರಾದ ರವೀಂದ್ರನಾಥ್, ನಾಗೇಂದ್ರಅರಸು, ಯತಿರಾಜ್, ಇಂಚರ, ಸಂಗೀತ ನಿರ್ದೇಶಕ ವಿನುಮನಸು, ಸೆನ್ಸಾರ್ ಶಿವು ಮುಂತಾದವರು ಉಪಸ್ತಿತರಿದ್ದರು. ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್, ಕನ್ನಡಪರ ಹೋರಾಟಗಾರ,ಬಿಗ್ಬಾಸ್ ಸ್ಪರ್ಧಿ ರೂಪೇಶ್ರಾಜ್ ತಂಡಕ್ಕೆ ಶುಭಹಾರೈಸಲು ಆಗಮಿಸಿದ್ದರು.