Artist arrivals for Uttarkanda film: Rangayana Raghu as "Bande Kaaka".

ಉತ್ತರಕಾಂಡ ಚಿತ್ರಕ್ಕೆ ಕಲಾವಿದರ ಆಗಮನ: “ಬಂಡೆ ಕಾಕಾ” ಪಾತ್ರದಲ್ಲಿ ರಂಗಾಯಣ ರಘು - CineNewsKannada.com

ಉತ್ತರಕಾಂಡ ಚಿತ್ರಕ್ಕೆ ಕಲಾವಿದರ ಆಗಮನ: “ಬಂಡೆ ಕಾಕಾ” ಪಾತ್ರದಲ್ಲಿ ರಂಗಾಯಣ ರಘು

ಬಹು ನಿರೀಕ್ಷಿತ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾಟೀಲನಾದ ಯೋಗರಾಜ್ ಭಟ್

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಉತ್ತರಾಕಾಂಡದಲ್ಲಿ ನಟಿಸಲಿದ್ದಾರೆ. “ಪಾಟೀಲ” ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,ಇದೀಗ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಳ್ಳಲಿದ್ದಾರೆ.

ಬಂಡೆ ಕಾಕನಾದ ರಂಗಾಯಣ ರಘು

ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಈಗಾಗಲೇ ಎಲ್ಲೆಡೆ ಸಂಚಲನ ಮೂಡಿಸಿರುವ ಚಿತ್ರದಲ್ಲಿ ರಂಗಾಯಣ ರಘು “ಬಂಡೆ ಕಾಕಾ” ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೂದ್ ಪೇಡಾ ದಿಗಂತ್ ಮಿರ್ಚಿ “ಮಲ್ಲಿಗೆ”

ನಟ ದೂದ್ ಪೇಡಾ ದಿಗಂತ್ ಉತ್ತರಕಾಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿರ್ಚಿ “ಮಲ್ಲಿಗೆ” ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿನ ಅವರ ಖಡಕ್ ಲುಕ್ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಲಚ್ಚಿಯಾದ ಚೈತ್ರ ಆಚಾರ್

ಚೈತ್ರ ಆಚಾರ್”ಉತ್ತರಕಾಂಡ” ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಲಚ್ಚಿ ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ನಟಿ ಚೈತ್ರ ಆಚಾರ್.

ಧರ್ಮನಾದ ಗೋಪಾಲಕೃಷ್ಣ ದೇಶಪಾಂಡೆ

ಪ್ರತಿ ದಿನ ಚಿತ್ರದ ತಾರಾಬಳಗವನ್ನು ವಿಭಿನ್ನವಾಗಿ ಪರಿಚಯಿಸುತ್ತಿರುವ ಚಿತ್ರ ತಂಡ ಇದೀಗ “ಧರ್ಮ” ಎಂಬ ಮತ್ತೊಂದು ಮುಖ್ಯ ಪಾತ್ರವನ್ನು ಪರಿಚಯಿಸಿದೆ. ಈ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಕಾಣಿಸಿಕೊಳ್ಳಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin