ಧಿರೇನ್- ಅಮೃತಾ ಪ್ರೇಮ್ ಹೊಸ ಚಿತ್ರ “ಪಬ್ಬಾರ್” ಗೆ ಮುಹೂರ್ತ: ಗಣ್ಯರ ದಂಡು ಭಾಗಿ

ಗೀತಾ ಶಿವರಾಜ್ ಕುಮಾರ್ ಅವರ ನಿರ್ಮಾಣದ ಗೀತಾ ಪಿಕ್ಚರ್ಸ್ ನಿಂದ ನಾಲ್ಕನೇ ಸಿನಿಮಾ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದಿನ ವೇದ, ಬೈರತಿ ಗಣಗಲ್ ಹಾಗು ಇತ್ತೀಚೆಗಷ್ಟೇ ಮಹೂರ್ತ ಕಂಡ “ಎ ಫಾರ್ ಆನಂದ್” ಚಿತ್ರವನ್ನು ಪತಿ ಶಿವರಾಜ್ ಕುಮಾರ್ ಅವರಿಗೆ ನಿರ್ಮಾಣ ಮಾಡಿದ್ದರು. ಇದೀಗ ನಾದಿನಿ ಪೂರ್ಣಿಮಾ ಪುತ್ರ ಧಿರೇನ್ ರಾಮ್ ಕುಮಾರ್ ಅವರಿಗೆ ನಿರ್ಮಾಣ ಮಾಡುತ್ತಿದ್ದಾರೆ.

ಧಿರೇನ್ ಮತ್ತು ಅಮೃತಾ ಪ್ರೇಮ್ ನಾಯಕ ನಾಯಕಿಯಾಗಿ ನಟಿಸುತ್ತಿರುವ ಚಿತ್ರಕ್ಕೆ ಶಾಖಾಹಾರಿ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದುವೇ “ಪಬ್ಬಾರ್”. ಚಿತ್ರಕ್ಕೆ ಬೆಂಗಳೂರಿನ ವೀರಾಂಜನೇಯ ದೇಗುಲದಲ್ಲಿ ಮುಹೂರ್ತ ನೆರವೇರಿತು. ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಕೆವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು , ನೆನಪಿರಲಿ ಪ್ರೇಮ್ ಕ್ಯಾಮೆರಾಗೆ ಚಾಲನೆ ನೀಡಿ ಶುಭ ಹಾರೈಸಿದರು.
ಸೋದರಳಿಯನ ಚಿತ್ರಕ್ಕೆ ಆಶೀರ್ವಾದಿಸಲು ನಟ ಶಿವರಾಜ್ ಕುಮಾರ್, ಧಿರೇನ್ ತಾಯಿ ಪೂರ್ಣಿಮಾ, ತಂದೆ ರಾಮ್ ಕುಮಾರ್, ಸಹೋಧರಿ ಧನ್ಯ, ಸೇರಿದಂತೆ ನಟ ಪ್ರೇಮ್ ಕುಟುಂಬದ ಸದಸ್ಯರು, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ. ರಾ ಗೋವಿಂದು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಈ ವೇಳೆ ಮಾತಿಗಿಳಿದ ನಟ ಶಿವರಾಜ್ ಕುಮಾರ್, ಒಂದೊಳ್ಳೆ ಪ್ರಯತ್ನ. ಒಳ್ಳೆ ಸಿನಿಮಾ ಬರಲಿ. ಈಗ ಎಲ್ಲರೂ ಹೇಳ್ತಾರೆ. ರಿಸ್ಕ್ ಅನ್ನು ರಸ್ಕ್ ರೀತಿ ತೆಗೆದುಕೊಂಡು ತಿನ್ನಬೇಕು ಅಷ್ಟೇ. ಬೇರೆ ಭಾಷೆ ಜೊತೆ ಸ್ಪರ್ಧೆ ಮಾಡಬೇಕು ಎಂದರೆ ಹೊಸ ಸಿನಿಮಾ ಬರಬೇಕು. ಏನ್ ಆಗುತ್ತದೆ. ಏನ್ ಆಗೋಲ್ಲ ಎಂಬುವುದು ಆ ಮೇಲಿನ ಪ್ರಶ್ನೆ. ಪ್ರಯತ್ನವನ್ನೇ ಪಡದೇ ಇದ್ದರೆ ಹೇಗೆ ಅಗುತ್ತದೆ. ಇಂಡಸ್ಟ್ರೀಗೆ ಬಂದು ನಲ್ವತ್ತು ವರ್ಷ ಆಯ್ತು. ಇನ್ನೂ ಎಷ್ಟು ವರ್ಷ ಸಿನಿಮಾ ಮಾಡುತ್ತೇವೋ ಗೊತ್ತಿಲ್ಲ. ಹೊಸ ಪೀಳಿಗೆ ಬರಬೇಕು. ಹೊಸ ರೀತಿ ಸಿನಿಮಾ ಬರಬೇಕು. ಈ ರೀತಿ ವಿಭಿನ್ನ ಸಿನಿಮಾ ಮಾಡಬೇಕು ಎಂಬುದನ್ನು ನಾವೇ ಆಸೆಪಡುತ್ತೇವೆ ಎಂದರು
ನಿರ್ದೇಶಕ ಸಂದೀಪ್ ಹೇಳಿದ ಕಥೆ ಇಷ್ಟವಾಗಿದೆ. ಪಬ್ಬಾರ್ ನಾನ್ ವೆಜ್ ಕಥೆ ಎನಿಸುತ್ತದೆ. ಒಳ್ಳೆ ಸಿನಿಮಾ ಆಗುವ ಕಥೆಯಾಗುತ್ತದೆ ಎಂಬ ಭರವಸೆ ಇದೆ. ಅಮ್ಮನ ಹುಟ್ಟಿದಹಬ್ಬ ದಿನ ಚಿತ್ರ ಅನೌನ್ಸ್ ಮಾಡಿದ್ದೇವೆ. ಪ್ರೇಮ್ ಮಗಳು ನಟನೆ ಮಾಡುತ್ತಿದ್ದಾರೆ. ಪ್ರೇಮ್ ನನಗೆ ಇಷ್ಟ. ಅವರ ಜೊತೆ ಒಳ್ಳೆ ಒಟನಾಟ ಇದೆ. ಲೋಕೇಷನ್ ಚೆನ್ನಾಗಿ ಇದೆ. ಕುತೂಹಲ ಕೊಡುತ್ತದೆ ಎಂದು ಹೇಳಿದರು
ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಪಬ್ಬಾರ್ ಕಥೆ ಧೀರೆನ್ ಮೂಲಕ ಬಂದಿದ್ದು, ಧೀರೆನ್ ನಿರ್ದೇಶಕರನ್ನು ಕರೆದುಕೊಂಡು ಹೇಳಿದ ಕಥೆ ಬಹಳ ಇಷ್ಟವಾಯಿತು. ಸಂದೀಪ್ ನಮ್ಮ ಬ್ಯಾನರ್ ನಡಿ ಕೆಲಸ ಮಾಡಲು ಬಂದಿರುವುದು ಖುಷಿ. ಧೀರೆನ್ ಬಹಳ ಕಷ್ಟಪಟ್ಟು ಕೆಲಸ ಮಾಡುವ ಹುಡ್ಗ. ಕಳೆದ ಐದಾರು ತಿಂಗಳಿನಿಂದ ಬಹಳ ವರ್ಕೌಟ್ ಮಾಡಿದ್ದಾರೆ. ಈ ಸಿನಿಮಾಗಾಗಿ ಐದಾರು ಕೆಜಿ ಸಣ್ಣ ಆಗಿದ್ದಾರೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನಾಯಕ ಧೀರೆನ್ ಮಾತನಾಡಿ, ನನಗೆ ಪುನರ್ ಜನ್ಮ ಬಂದಾಗೆ. ಆಂಟಿ-ಮಾಮನಿಗೆ ಎಷ್ಟೇ ಧನ್ಯವಾದ ಹೇಳಿದರು ಕಡಿಮೆನೆ. ನಾನು ಅವರಿಗೆ ಕಥೆ ಇದು ಎಂದು ಕೇಳಿದಾಗ ಅವರು ನಿರ್ದೇಶಕ ಎಲ್ಲವೂ ಕೇಳಿ ಸಿನಿಮಾ ಮಾಡುತ್ತೇನೆ ಎಂದರು. ನವೆಂಬರ್ 28 ನಾನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ನನ್ನಲ್ಲಿ ಆದ ಫೀಲಿಂಗ್ ಮರೆಯಲು ಆಗುವುದಿಲ್ಲ. ಇದೆಲ್ಲಾ ಕನಸು ಎನಿಸುತ್ತಿದೆ. ನನಗ ಆಂಟಿ-ಮಾಮ ಶಿವ-ಪಾರ್ವತಿ ಇದ್ದಂತೆ. ಸಾಕಷ್ಟು ಸಿನಿಮಾಗಳು ಗೀತಾ ಪಿಕ್ಚರ್ಸ್ನಿಂದ ಬರಲಿದೆ. ಅವರ ಪೆÇ್ರಡಕ್ಷನ್ನಡಿ ನಾನು ಕೆಲಸ ಮಾಡುತ್ತಿರರುವುದು ಖುಷಿಕೊಟ್ಟಿದೆ ಎಂದು ತಿಳಿಸಿದರು.

ನಾಯಕಿ ಅಮೃತಾ ಪ್ರೇಮ್ ಮಾತನಾಡಿ, ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಶಾಖಾಹಾರಿ ಡೈರೆಕ್ಟರ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಇದೆ ಎಂದರು.
ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಹಂತ ಹಂತವಾಗಿ ಕಥೆ,ನಿರೂಪಣೆ, ಕಥಾಂದರದ ಬಗ್ಗೆ ಸಣ್ಣ ತುಣುಕು ರಿಲೀಸ್ ಮಾಡುತ್ತೇವೆ. ಇದು ಗಟ್ಟಿ ಕಥೆ. ನನಗೆ ಬಹಳ ಜವಾಬ್ದಾರಿ ಇದೆ. ಇದು ಅಡ್ವೆಂಚರ್ಸ್ ಕ್ರೈಮ್ ಥ್ರಿಲ್ಲರ್. ಈ ಚಿತ್ರದಲ್ಲಿ ಎರಡು ರೀತಿ ಜರ್ನಿ ಇದೆ. ಒಂದು ಕೇಸ್ ಜರ್ನಿ ಇದೆ. ಪರ್ಸನಲ್ ಇದೆ. ಪಬ್ಬಾರ್ ಜಾಗ. ಚಿತ್ರದ ಮೇನ್ ಕ್ಯಾರೆಕ್ಟರ್. ಇದು ನೈಜ ಘಟನೆ ಕಥೆಯಲ್ಲ ಎಂದು ತಿಳಿಸಿದರು.

ಶಾಖಾಹಾರಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡ ಕೂಡ ಇದೇ ಚಿತ್ರಕ್ಕೂ ದುಡಿಯಲಿದೆ. ಪಬ್ಬಾರ್ ಸಿನಿಮಾಗೆ ವಿಶ್ವಜಿತ್ ರಾವ್ ಕ್ಯಾಮೆರಾ ವರ್ಕ್, ಮಯೂರ್ ಅಂಬೇಕಲ್ಲು ಸಂಗೀತ, ನಿರ್ದೇಶಕ ಸಂದೀಪ್ ಸುಂದರ್ ಅವರೇ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.