Review: "Sutradari", a story of revenge

Review : ಸೇಡಿನ ಪ್ರತೀಕಾರದ ಕಥನ “ಸೂತ್ರದಾರಿ” - CineNewsKannada.com

Review : ಸೇಡಿನ ಪ್ರತೀಕಾರದ ಕಥನ “ಸೂತ್ರದಾರಿ”

ಚಿತ್ರ: ಸೂತ್ರದಾರಿ
ನಿರ್ದೇಶನ: ಕಿರಣ್ ಕುಮಾರ್
ತಾರಾಗಣ: ಚಂದನ್ ಶೆಟ್ಟಿ, ಅಪೂರ್ವ, ತಬಲನಾಣಿ, ನವರಸನ್, ಸಂಜನಾ ಆನಂದ್, ಕಾರ್ತಿಕ್, ಸಂತೋಷ್, ವಾಣಿಶ್ರೀ ಮತ್ತಿತರರು
ರೇಟಿಂಗ್ : *** 3.5/5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಬಗೆಯ ಕಥೆ,ಕಂಟೆಂಟ್‍ಗಳು ಚಿತ್ರಗಳು ತೆರೆಗೆ ಬರುತ್ತಿವೆ. ಜೊತೆಗೆ ಗಮನ ಸೆಳೆಯುತ್ತಿವೆಯೂ ಕೂಡ, ಅಂತಹ ವಿಭಿನ್ನ ಕಥಾಹಂದರ ಚಿತ್ರ “ಸೂತ್ರದಾರಿ”.

ಆರಂಭದಿಂದ ಕೊನೆ ತನಕ ಕುತೂಹಲ ಕಾಪಾಡಿಕೊಂಡೇ ಅಪರಾಧಿಗಳ ಪತ್ತೆ ಮಾಡುವ ಕತೆಯ ಪ್ರತಿ ಪಕ್ಷವೂ ಕುತೂಹಲ ಹುಟ್ಟಿಸುತ್ತದೆ, ಅಂತಹ ಕತೆಯನ್ನು ಚಿತ್ರ ರೂಪದಲ್ಲಿ ತರುವ ಮೂಲಕ ನಟ, ನಿರ್ಮಾಪಕ ನವರಸನ್ ಯಶಸ್ವಿಯಾಗಿದ್ದಾರೆ. ಜೊತೆಗೆ ಕನ್ನಡಕ್ಕೆ ಹೊಸ ಮಾದರಿಯ ಚಿತ್ರ ನೀಡಿದ್ದಾರೆ.

ಸರಳವಾದ ಕತೆಯನ್ನು ಮುಂದಿಟ್ಟುಕೊಂಡು ಜನರಿಗೆ ಹಿಡಿಸುವ ಚಿತ್ರವನ್ನು ನೀಡಿದ್ದಾರೆ,.ಈ ಮೂಲಕ ಸೇಡಿನ ಪ್ರತೀಕಾರದ ಕತೆ ರೋಚಕ ಕಹಾನಿ ಒಳಗೊಂಡಿದೆ. ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಚಂದನ್ ಶೆಟ್ಟಿ ಹಾಡು, ಸಂಗೀತದಲ್ಲಿಯೂ ಕೈ ಆಡಿಸಿದ್ದಾರೆ

ವಿಜಯ್ (ಚಂದನ್ ಶೆಟ್ಟಿ) ಖಡಕ್ ಪೊಲೀಸ್ ಅಧಿಕಾರಿ. ಅಪರಾಧಿಗಳನ್ನು ಎನ್‍ಕೌಂಟರ್ ಮಾಡುವುದರಲ್ಲಿ ನಿಸ್ಸೀಮ. ಈ ಕಾರಣಕ್ಕಾಗಿಯೇ ಕೆಲಸಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ಅನೇಕ ಬಾರಿ ಅಮಾನಾತ್ತಾದವ. ಇನ್ನು ಮಗನಿಗೆ ಮದುವೆ ಮಾಡಿಸಬೇಕು ಎನ್ನುವುದು ತಾಯಿ ಆಸೆ. ಮಗನ ಅಮಾನತ್ತು ತಿಳಿದು ಮದುವೆಯೂ ರದ್ದು.

ಈ ನಡುವೆ ಹೈ ಪ್ರೋಪೈಲ್ ವ್ಯಕ್ತಿಗಳು ಅನುಮಾನಾಸ್ಪದವಾಗಿ ಹತ್ಯೆ ಪೊಲೀಸರಿಗೆ ತಲೆ ಬಿಸಿ ಉಂಟುಮಾಡುತ್ತದೆ. ಈ ವೇಳೆ ಅಮಾನತ್ತುಗೊಂಡ ಪೊಲೀಸ್ ಅಧಿಕಾರಿಯನ್ನು ಮರಳಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಂಡು ಪ್ರಕರಣ ಬೇಧಿಸುವ ಕೆಲಸದ ಹೊಣೆ ನೀಡಲಾಗುತ್ತದೆ.

ಆತನೋ ಉಡಾಫೆ ವ್ಯಕ್ತಿತ್ವದದ ವ್ಯಕ್ತಿ. ಕಂಡ ಕಂಡ ಹುಡುಗಿಯರಿಗೆ ಕಾಳು ಹಾಕುವುದರಲ್ಲಿ ಎತ್ತಿದ ಕೈ. ಅಚಾನಕ್ ಆಗಿ ಕಂಡ ಅದ್ವಿಕಾ ( ಅಪೂರ್ವ) ಮೇಲೆ ಕಣ್ಣು ಹಾಕುತ್ತಾರೆ. ಸ್ನೇಹ,ಮ ಸಲುಗೆ ಪ್ರೀತಿಯೂ ಚಿಗುರೊಡೆಯುತ್ತದೆ.

ಈ ಮದ್ಯೆ ಅಪರಾಧಿಗಳ ಬೆನ್ನು ಹತ್ತಿದ ಪೊಲೀಸ್ ಅಧಿಕಾರಿ ವಿಜಯ್‍ಗೆ ರೋಹಕ ಸತ್ಯದ ಅನಾವರಣ ಆಗುತ್ತದೆ.ಆದರೆ ಅದನ್ನು ಸಾಬೀತು ಪಡಿಸಲು ಸಾಕ್ಷಿಗಳೇ ಇಲ್ಲ. ಅದನ್ನು ಮಾಡಿದವರು, ಯಾರು, ಅದರ ಸೂತ್ರದಾರಿ, ಪಾತ್ರದಾರಿ ಯಾರು, ಯಾಕಾಗಿ ಈ ರೀತಿ ಅವರು ಮಾಡುತ್ತಿದ್ದರು ಎನ್ನುವುದನ್ನು ಕುತೂಹಲಕಾರಿಯಾಗಿ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ನಿರ್ದೇಶಕ ಕಿರಣ್ ಕುಮಾರ್ ಸರಳವಾದ ನಿರೂಪಣೆ, ಚಿತ್ರಕತೆಯ ಮೂಲಕ ವಿಭಿನ್ನವಾದ ಚಿತ್ರ ಕಟ್ಟಿಕೊಟ್ಟಿದ್ದಾರೆ. ನಟ ಚಂದನ್ ಶೆಟ್ಟಿ ಮೊದಲ ಬಾರಿಗೆ ನಟಿಸಿದ್ದು ಇನ್ನೊಂದಿಷ್ಟು ನಟನೆಯ ಕಡೆಗೆ ಗಮನ ಹರಿಸಿದರೆ ಉತ್ತಮ ನಟನಾಗು ಎಲ್ಲಾ ಸಾಮಥ್ರ್ಯವಿದೆ. ನಟಿ ಅಪೂರ್ವ, ತಬಲ ನಾಣಿ ಮತ್ತಿತರು ಕಲಾವಿದರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನವರಸನ್ ಪಾತ್ರ ಏನು, ಯಾಕಾಗಿ ಬರುತ್ತದೆ ಎನ್ನುವುದು ಚಿತ್ರದ ಕುತೂಹಲದ ಸಂಗತಿ. ಪಿ.ಕೆಎಚ್ ದಾಸ್ ಕ್ಯಾಮರ, ಚಂದನ್ ಶೆಟ್ಟಿ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin