I didn't want to do a movie: I was thrilled after hearing the story - actor Prem remembers

ಸಿನ್ಮಾ ಮಾಡೋಕೆ ಇಷ್ಟ ಇರಲಿಲ್ಲ: ಕಥೆ ಕೇಳಿ ಥ್ರಿಲ್ ಆದೆ- ನಟ ನೆನಪಿರಲಿ ಪ್ರೇಮ್ - CineNewsKannada.com

ಸಿನ್ಮಾ ಮಾಡೋಕೆ ಇಷ್ಟ ಇರಲಿಲ್ಲ: ಕಥೆ ಕೇಳಿ ಥ್ರಿಲ್ ಆದೆ- ನಟ ನೆನಪಿರಲಿ ಪ್ರೇಮ್

“ಈ ಸಿನಿಮಾ ಮಾಡೋಕೆ ನನಗೆ ಇಷ್ಟವಿರಲಿಲ್ಲ.” ಫ್ಯಾಮಿಲಿ ಕಥೆ, ಲವ್ ಸ್ಟೋರಿ ಮಾಡಿ ಮಾಡಿ ಬೇಜಾರಾಗಿದೆ.ನನ್ನ ಹುಟ್ಟುಹಬ್ಬ ಸುಳ್ಳು ಹೇಳಬಾರದು ಎಂದು ನಿಜ ಹೇಳುತ್ತಿರುವೆ “.ಕಥೆ ಕೇಳಿ ಥ್ರಿಲ್ ಆದೆ. ಎಲ್ಲವನ್ನೂ ಬಿಟ್ಟು ಸಿಟಿ ಜೀವನ ಮಾಡಬೇಕು ಎಂದು ಬಂದ ಮಂದಿಗೆ ಹಳ್ಳಿಗೆ ಹೋಗಿ ನೆಲದ ಸೊಗಡು ಅರ್ಥವಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ..”

ಹೀಗೆಂದು ಮಾತಿಗಿಳಿದರು ನಟ ನೆನಪಿರಲಿ ಪ್ರೇಮ್.

ನಿರ್ದೇಶಕ ತರುಣ್ ಸುಧೀರ್ ಫೋನ್ ಮಾಡಿ ಒಂದು ಕಥೆ ಬಂದಿದೆ, ಕೇಳು ಅಂದ. ಏನು ಕಥೆ ಅಂದೆ, ಅದಕ್ಕೆ ಆತ ಫ್ಯಾಮಿಲಿ ಕಥೆ ಅಂತ ಹೇಳಿದ, ನಾನ್ ಮಾಡಲ್ಲ ಗುರು. ಔಟ್ ಆಫ್ ದಿ ಬಾಕ್ಸ್ ಏನಾದ್ರು ಕಥೆ ಇದ್ರೆ ಹೇಳು ಮಾಡ್ತಿನಿ ಅಂದೆ. ಅದಕ್ಕೆ ಅವ ಮಗಾ, ನಿನಗೆ ಔಟ್ ಆಫ್ ದಿ ಬಾಕ್ಸ್ ಕಥೆ ಆದರೆ ಏನು, ಫ್ಯಾಮಿಲಿ ಕಥೆ ಆದರೆ ಏನು ಕಥೆ ಚೆನ್ನಾಗಿರಬೇಕು ಅಲ್ವಾ.. ಕಥೆ ಕೇಳು ಇಷ್ಟ ಆದ್ರೆ ಮಾಡು ಇಲ್ಲಾಂದ್ರೆ ಬೇಡ ಅಂದ..”

ನಿರ್ದೇಶಕಿ ರಂಜನಿ ರಾಘವನ್ ಹೇಳಿದ ಕಥೆ ಮನಸ್ಸಿಗೆ ಹಿಡಿಸಿತು ಕಥೆ ಏನು ಬೇಕೋ ಅದನ್ನು ಅದನ್ನೇ ತೆಗೆದುಕೊಳ್ಳುತ್ತೆ. ಫ್ಯಾಮಿಲಿ ಕಥೆ ಆದರೂ ಇಷ್ಟು ಚೆಂದವಾಗಿ ಮಾಡಿದ್ದಾರೆ. ಹೆಣ್ಣು ಮಗಳು ಮಾಡಿದ ಕಥೆ ಇಷ್ಟ ಆಯ್ತು. ತರುಣ್ ಹೇಳಿದ್ದು ಹೊಸ ಟೀಮ್, ಅವರಿಗೆ ಬೆಂಬಲ ಬೇಕು. ಅವರು ಯಾರನ್ನೋ ಹಾಕಿಕೊಂಡು ಮಾಡಿದರೆ ಏನೂ ಆಗಲ್ಲ. ಹೊಸಬರಿಗೆ ಬಂಬಲ ನೀಡು, ಅಷ್ಟೋ ಇಷ್ಟೋ ಹಣ ಹೊಂದಿಸಿ ಸಿನ್ಮಾ ಮಾಡ್ತಾ ಇದ್ದಾರೆ. ಆ ಹುಡುಗಿ ತುಂಬಾ ವರ್ಷದಿಂದ ಕಥೆ ಬರೆದು ತನ್ನನ್ನು ಪ್ರೂವ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದಾಳೆ. ನೀನೇ ಸಪೋರ್ಟ್ ಮಾಡದಿದ್ರೆ ಹೆಂಗೆ ಅಂದ ಅದನ್ನೆಲ್ಲ ಮನಸ್ಸಿಗೆ ತಟ್ಟಿ ಸಿನಿಮಾದಲ್ಲಿ ನಟಿಲು ಒಪ್ಪಿಕೊಂಡೆ ಎಂದರು

ನಟಿ ರಂಜನಿ ರಾಘವನ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ “ಡಿಡಿ ಢಿಕ್ಕಿ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ, ನಿರ್ಮಾಣ ಸಂಸ್ಥೆಯ ಲಾಂಛನ ಅನಾವರಣ ಮತ್ತು ನಟ ಪ್ರೇಮ್ ಹುಟ್ಟುಹಬ್ಬದ ಬಳಿಕ ಮಾತಿಗಿಳಿದ ಪ್ರೇಮ್ ಚಿತ್ರ ಆರಂಭವಾದ ಬಗೆಯನ್ನು ಮಾದ್ಯಮದ ಮುಂದೆ ಬಿಚ್ಚಿಟ್ಟರು.

ಚಿತ್ರದಲ್ಲಿ ನಟ ಗಣೇಶ್ ಪುತ್ರ ವಿವಾನ್ ನಟಿಸಿದ್ದು ಅವನ ಜೊತೆ ಒಳ್ಳೆಯ ಬಾಂಡ್ ಬೆಳೆದಿದೆ. ಇನ್ನೂ ಸಂಗೀತ ಮಾಂತ್ರಿಕ ಇಳಯರಾಜಾ ಅವರು ಕಥೆ ಹೇಳಮ್ಮ ಎಂದು ಕೇಳಿ, ಇಷ್ಟಪಟ್ಟು ಈ ಕಥೆಗೆ ಸಂಗೀತಾ ಮಾಡ್ಲಾ ಅಂತ ಕೇಳೋದು ಸುಲಭದ ಮಾತಲ್ಲ. ಇನ್ನೂ ಅವರ ಸಂಭಾವನೆ ವಿಷಯದಲ್ಲಿ ಚಿತ್ರತಂಡಕ್ಕೆ ಇದ್ದ ತಳಮಳ ನಿವಾರಿಸಿ ನಿಮಗೆ ಎಷ್ಟು ಕೊಡಬೇಕೋ ಅಷ್ಟು ಕೊಡಿ ಅವರು ಸಹಾಯ ಮಾಡ್ತಾರೆ ಎಂದು ಅವರ ಮ್ಯಾನೇಜರ್ ಹೇಳಿದಾಗ ತಂಡ ನೆಮ್ಮದಿ ನಿಟ್ಟಿಸಿರು ಬಿಟ್ಟಿದೆ. ಅವರಿಗೆ ದೀರ್ಘ ದಂಡ ನಮಸ್ಕಾರ ಎಂದು ಹೇಳಿದರು.

ಹಳ್ಳಿಯಿಂದ ಬಂದ ಹುಡುಗರು ಬೆಂಗಳೂರಿನಲ್ಲಿ ಬಂದು ಎದುರಿಸುವ ಸಮಸ್ಯೆ, ಸಿಟಿಯಲ್ಲಿ ಜೀವನ ನೆಡೆಸುವ ಹೆಮ್ಮೆ. ಅಂತವರಿಗೆ ಸಿನಿಮಾ ಮೋಡಿ, ಮತ್ತೆ ಒಂದಷ್ಟು ಜನ ಹಳ್ಳಿಗೆ ಹೋಗಿ ನೆಲದ ಸೊಗಡು ಅರ್ಥವಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಬೇಡ ಅಂದ ಸಿನಿಮಾ ಬಗ್ಗೆ ಈಗ ಹೆಮ್ಮೆ ಇದೆ. ಅದ್ಬುತವಾದ ಸಿನಿಮಾ ಆಗಲಿದೆ. ಎಲ್ಲರ ಪರಿಶ್ರಮದಿಂದ ಒಳ್ಳೆಯ ಸಿನಿಮಾ ಆಗಲಿದೆ. ಚಿತ್ರೀಕರಣ ಮುಗಿಸಿ ಮನೆಗೆ ಹೋದಾಗ ಸನ್ನಿವೇಶ ನೆನಪಿಸಿಕೊಂಡು ಅತ್ತಿದ್ದೇನೆ. ಸುಮ್ಮನೆ ನಕ್ಕಿದ್ದೇನೆ.ಜೊತೆಗೆ ಚಿತ್ರದಲ್ಲಿ ಮುದ್ದಾದ ಜೋಡಿ ಇದೆ ಅದನ್ನು ಮುಂದಿನ ದಿನಗಲ್ಲಿ ಪರಿಚಯಿಸಲಾಗುವುದು ಎಂದರು

ನಿರ್ಮಾಪಕ ಜಡೇಶ್ ಕೆ ಹಂಪಿ ಮಾತನಾಡಿ ನಟಿ ರಂಜನಿ ರಾಘವನ್ ಅವರು “ಕಾಟೇರ” ಚಿತ್ರದಲ್ಲೂ ಬರವಣಿಗೆ ತಂಡದಲ್ಲಿದ್ದರು. ಆನಂತರ ತಾವೇ ಒಂದು ಪುಸ್ತಕ ಬರೆದಿರುವ ಹೇಳಿ, ನನಗೆ ಪುಸ್ತಕ ಬಂದಿದೆ. ಪುಸ್ತಕ ಓದಿ ಆಶ್ಚರ್ಯವಾಯಿತು. ಸಿನಿಮಾಗೆ ಹೇಳಿ ಮಾಡಿದ ಕಥೆ ಎನಿಸಿತು. ನಾನು ತರುಣ್ ಸುಧೀರ್ ಅವರ ಜೊತೆಗೆ ಚರ್ಚೆ ಮಾಡಿದೆ. ಆನಂತರ ಚಿತ್ರ ಆರಂಭವಾಯಿತು. ಚಂದದ ಕಥೆ ಬರೆದಿರುವ ರಂಜನಿ ಅವರ ನಿರ್ದೇಶನ ಮಾಡಲಿ ಎಂದು ನಿರ್ಧಾರವಾಯಿತು. ಪ್ರೇಮ್ ಅವರೇ ಈ ಕಥೆಗೆ ಸೂಕ್ತ ನಾಯಕ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಪ್ರೇಮ್ ಅವರ ಕಥೆ ಕೇಳಿ ಒಪ್ಪಿಕೊಂಡರು. ನಮ್ಮ ಹಂಪಿ ಪಿಕ್ಚರ್ಸ್ ನ ಮೊದಲ ನಿರ್ಮಾಣಕ್ಕೆ ರಾಮಕೃಷ್ಣ ಹಾಗೂ ಆನಂದ್ ಕುಮಾರ್ ಜೊತೆಯಾದರು ಎಂದರು

ನಿರ್ಮಾಪಕ ರಾಮಕೃಷ್ಣ ಸಹ ಹಂಪಿ ಪಿಕ್ಚರ್ಸ್ ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಛಾಯಾಗ್ರಾಹಕ ಸುಧಾಕರ್, ನಟ ಮಹಾಂತೇಶ್ ಮುಂತಾದವರು ಚಿತ್ರದ ಕುರಿತು. ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವೇಳೆ ನಟ ಪ್ರೇಮ್ ಅವರಿಗೆ ಪತ್ನಿ ಹಾಗೂ ಪುತ್ರಿ ಆರತಿ ಬೆಳಗಿ ಸಿಹಿ ತಿನಿಸಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ವಿಶೇಷವಾಗಿತ್ತು. ತಮ್ಮ ಚಿತ್ರದ ಬಿಡುಗಡೆಯ ದಿನವೇ ಅಜೇಯ್ ರಾವ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಮಿತ್ರನಿಗೆ ಶುಭಾಶಯ ತಿಳಿಸಿದರು. ಗುರು ದೇಶಪಾಂಡೆ, ಆರ್ ಎಸ್ ಗೌಡ, ಜಗದೀಶ್ ಗೌಡ, ರವಿ ಗೌಡ, ಕೃಷ್ಣ ಸಾರ್ಥಕ್, “ಲ್ಯಾಂಡ್ ಲಾರ್ಡ್” ಚಿತ್ರದ ನಿರ್ಮಾಪಕ ಸೂರಜ್ ಮುಂತಾದವರು ಪ್ರೇಮ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin