“ಡಿಡಿ ಢಿಕ್ಕಿ” ಕೊಡಲು ಸಜ್ಜಾದ ನಟಿ ರಂಜನಿ ರಾಘವನ್: ಈಗ ನಿರ್ದೇಶಕಿ

ಸಂಗೀತಲೋಕದ ಸಾಮ್ರಾಟ ಇಳಯರಾಜಾ, ನೆನಪಿರಲಿ ಪ್ರೇಮ್, ಭರವಸೆ ಮೂಡಿಸಿರುವ ನಿರ್ದೇಶಕ ತರುಣ್ ಸುಧೀರ್ ಹೀಗೆ ಒಂದಷ್ಟು ಪ್ರತಿಭೆಗಳ ಗಣಿ ಮುಂದಿಟ್ಟುಕೊಂಡು ನಟಿ ರಂಜನಿ ರಾಘವನ್ ಚಿತ್ರರಂಗಕ್ಕೆ ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದು ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಅಷ್ಟೇ ಅಲ್ಲ, ನಿರ್ದೇಶಕರ ಗುಂಪಿನಲ್ಲಿ ಗಮನ ಸೆಳೆಯಲು ಮುಂದಾಗಿದ್ದಾರೆ.

ಹೊಸ ಚಿತ್ರಕ್ಕೆ “ಡಿಡಿ ಢಿಕ್ಕಿ” ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ. ನಟ ಪ್ರೇಮ್ ಹುಟ್ಟುಹಬ್ಬ ಆಚರಣೆ ಮತ್ತು ಹೊಸ ನಿರ್ಮಾಣ ಸಂಸ್ಥೆಗಳ ಅನಾವರಣ ಕಾರ್ಯಕ್ರಮ ಒಟ್ಟಾಗಿ ನಡೆಯಿತು.

ಈ ವೇಳೆ ಮಾತಿಗಿಳಿದ ನಿರ್ದೇಶಕಿ ರಂಜನಿ ರಾಘವನ್, ಸಿನಿಮಾದ ಕತೆಯನ್ನು ನಿರ್ದೇಶಕರಾದ ಜಡೇಶ್, ತರುಣ್ ಸುಧೀರ್ ಅವರಿಗೆ ಕಥೆ ಹೇಳಿದಾಗ ಅವರು ತುಂಬಾ ಎಕ್ಸೈಟ್ ಆದ್ರು. ಮುಖ್ಯವಾಹಿನಿ ಸಿನಿಮಾ ಮಾಡುವ ನಿರ್ದೇಶಕರಿಗೆ ಕಥೆ ಹೇಳಿ ಒಪ್ಪಿಸುವುದು ಯಾರೋ ಒಬ್ಬ ನಿರ್ಮಾಪಕರಿಗೆ ಟೋಪಿ ಹಾಕಿ ಕರೆದುಕೊಂಡು ಬಂದಂಗೆ ಅಲ್ಲ. ಕಥೆಯಲ್ಲಿ ಗಟ್ಟಿತನ ಇರಬೇಕು. ಅದನ್ನು ಈ ಇಬ್ಬರೂ ಗುರುತಿಸಿದ್ಧಾರೆ. ನಟ ಪ್ರೇಮ್ ಚಿತ್ರದ ಕೆಲವೊಂದು ಸನ್ನಿವೇಶ ಮುಗಿಸಿಕೊಂಡು ಮನೆಗೆ ಹೋದ ನಂತರವೂ ಅತ್ತಿದ್ದೇನೆ ಎಂದಿದ್ದಾರೆ. ಅಷ್ಟು ಮನಮುಟ್ಟುವ ಚಿತ್ರ ಎಂದರು.
ಚಿತ್ರದಲ್ಲಿ ಮಗುವಿನ ಪಾತ್ರ ಬರುತ್ತದೆ. ಚಿತ್ರದಲ್ಲಿ ಆ ಪಾತ್ರವೂ ಅಷ್ಟೇ ಮುಖ್ಯ. ನಾವು 30-35 ಮಂದಿ ಆಡಿಷನ್ ಮಾಡಿದ್ದೆವು. ಅವರೆಲ್ಲರೂ ನಮಗೆ ಎಲ್ಲವೂ ತಿಳಿದಿದೆ ಎನ್ನುವ ರೀತಿ ಅವರಲ್ಲಿ ಕಾಣಿಸುತ್ತಿದ್ದರು. ಮುಗ್ದತೆ ಇರಲಿಲ್ಲ. ಕೊನೆಗೆ ನಟ ಗಣೇಶ್ ಅವರ ಪುತ್ರ ನೋಡಿ ಎಂದು ನಿರ್ದೇಶಕ ತಂಡದಿಂದಲೇ ಸಲಹೆ ಬಂತು. ಮೊದಲು ಗಣೇಶ್ ಅವರು ವಿಹಾನ್ ನನ್ನು ನಟಿಸಲು ಒಪ್ಪಿಕೊಂಡಿರಲಿಲ್ಲ. ಓದಿನ ಕಡೆ ಗಮನ ಹರಿಸಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಮೂರು ನಾಲ್ಕು ತಿಂಗಳು ಹಠ ಬಿಡದೆ ಸಿನಿಮಾಕ್ಕೆ ವಿಹಾನ್ ನನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದೆವು ಎಂದು ಮಾಹಿತಿ ಹಂಚಿಕೊಂಡರು.
ಪ್ರತಿಯೊಬ್ಬರಿಗೂ ಡಿಡಿ ಢಿಕ್ಕಿ ಕನೆಕ್ಟ್ ಆಗುವ ಸಿನಿಮಾ,ಚಿತ್ರದಲ್ಲಿ ಕಾಮಿಡಿ ಮತ್ತು ಎಮೋಷನ್ ಅನ್ನು ಬ್ಲೆಂಡ್ ಮಾಡಿ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಂಗೀತ ನಿರ್ದೇಶಕ ಇಳಯರಾಜಾ ಅವರನ್ನು ಭೇಟಿ ಮಾಡಿ ಒಂದು ಪೋಟೊ ತೆಗೆಸಿಕೊಂಡರೆ ಸಾಕು ಅನ್ನಿಸಿತ್ತು. ಅವರ ಭೇಟಿ ವೇಳೆ, ಕಥೆ ಹೇಳಮ್ಮ ಅಂದರು, ಕಥೆ ಕೇಳಿ ಥ್ರಿಲ್ಲ ಆಗಿದ್ದರು. ಮರುದಿನ ಮ್ಯಾನೇಜರ್ ಬಳಿ ಸಿನಿಮಾ ಮಾಡ್ತಾರಂತೆ ಎಂದು ಹೇಳಿದರು , ಅದು ಕನಸು ನನಸಾದ ಸಮಯ, ಚಿತ್ರದಲ್ಲಿ ನಾಲ್ಕು ಹಾಡು ಮತ್ತು ಬಿಟ್ಗಳಿವೆ ಎಂದು ಹೇಳಿದರು.
ಚಿತ್ರದ ಕಥೆ ಮಾಡುವಾಗ ಇದನ್ನು ಯಾರ ಬಳಿ ಹೇಳಿದರೆ ಒಪ್ಪುತ್ತಾರೋ ಇಲ್ಲವೋ ಎನ್ನುವ ಅಳುಕಿತ್ತು. ಕತೆ ಒಂದು ಹಂತಕ್ಕೆ ಬಂದ ನಂತರ ಪ್ರೇಮ್ ಅವರನ್ನು ಬಿಟ್ಟು ಬೇರೆ ಯಾರೂ ಕಾಣಿಸಿಲಿಲ್ಲ. ಪ್ಯಾಮಿಲಿ ವ್ಯಕ್ತಿಯಾಗಿ ಎಲ್ಲಿರಿಗೂ ಇಷ್ಟವಾದ ವ್ಯಕ್ತಿ. ಅವರು ನಟನೆ ಮಾಡಬೇಕಾಗಿಲ್ಲ, ಅಷ್ಟರ ಮಟ್ಟಿಗೆ ಅವರ ಸಹಜ ಅಭಿನಯವಿದೆ ಎಂದರು.

ಮೊದಲ ವರ್ಷನ್ಗೂ ಈಗಿನ ಸ್ಕ್ರಿಪ್ಟ್ಗೆ ಸುಮಾರು 50 ಬಾರಿ ಬದಲಾವಣೆ ಆಗಿದೆ. ನಾಳೆ ಬೆಳಗ್ಗೆ ಚಿತ್ರೀಕರಣಕ್ಕೆ ಹೋಗಬೇಕು ಸ್ಕ್ರಿಪ್ಟ್ ಅಂತಿಮ ಅಂದರೂ ರಾತ್ರೋ ರಾತ್ರಿ ಬದಲಾಗುತ್ತದೆ. ಮೊದಲ ಬಾರಿಗೆ ನಿರ್ದೇಶನ ಮಾಡುವ ನನಗೆ ಅನುಭವಿ ನಿರ್ದೇಶಕರು ಸಿಕ್ಕಿರುವುದು ಮತ್ತಷ್ಟು ಬಲ ಬಂದಿದೆ .ಚಿತ್ರದ ಚಿತ್ರೀಕರಣ ಶೇಕಡಾ 60 ರಷ್ಟು ಮಾತಿನ ಭಾಗದ ಚಿತ್ರೀಕರಣ ಆಗಿದೆ. ಕನ್ನಡ ಭಾಷೆಯ ಕುರಿತು ಮುಖ್ಯವಾದ ಸನ್ನಿವೇಶವಿದೆ. ಕನ್ನಡತನ ಸಾರುವುದು ಚಿತ್ರದ ಮುಖ್ಯ ಸಾರವಾಗಿದೆ ಎಂದು ಮಾಹಿತಿ ಹಂಚಿಕೊಂಡರು
ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದವರು, ಅವರ ಹೃದಯ ಇಲ್ಲಿಯೇ ಇಲ್ಲವೋ ಅವರ ಬುದ್ದಿಮಾತ್ರ ಇಲ್ಲಿದೆ. ಹೃದಯ ಬಿಟ್ಟುಬಂದ ಊರಿನಲ್ಲಿದೆ. ಕೆಲಸ ಹುಡುಕೊಂಡು ಬಂದ ವ್ಯಕ್ತಿ. ಏನೆಲ್ಲಾ ಕಳೆದುಕೊಳ್ಳುತ್ತಾನೆ, ಪಡೆದುಕೊಳ್ಳುತ್ತಾನೆ , ಅವನ ಜರ್ನಿ, ಅವರ ಜೀವನದಲ್ಲಿ ಬದಲಾವಣೆ. ಇಲ್ಲಿ ಯಾರೂ ವಿಲನ್ ಅಂತ ತೋರಿಸುತ್ತಿಲ್. ಇಲ್ಲಿ ಸನ್ನಿವೇಶಗಳೇ ವಿಲನ್. ಒಂದಷ್ಟು ತಳಮಳಗಳ, ದ್ವಂದವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಸಂಭಾಷಣೆ ಬರೆಯುವುದು ಸುಲಭವಾಗಿ ಒಗ್ಗಲಿಲ್ಲ. ಇಂತಹ ಸಮಯದಲ್ಲಿ “ಟಾಕ್ಸಿಕ್” ಚಿತ್ರದ ವಿನಯ್ ಸಂಭಾಷಣೆಯಲ್ಲಿ ಸಾಥ್ ನೀಡಿದ್ಧಾರೆ. ಡಿಡಿ ಡಿಕ್ಕಿ ಚಿತ್ರದ ಶೀರ್ಷಿಕೆ ಬಗ್ಗೆ ಜನರಿಗೆ ಬಿಟ್ಟಿದ್ದೇವೆ. ಬದುಕು ಕಂಡುಕೊಳ್ಳಲು ನಗರಕ್ಕೆ ಬರುವ ಮಂದಿ ಇಲ್ಲಿ ಏನೇ ಕೆಲಸ ಮಾಡಿದರೂ ಊರಿನ ಬಗ್ಗೆ ಸೆಳೆತವಿದೆ. ಅದನ್ನು ಮುಂದಿನ ಹಂತದಲ್ಲಿ ಹಂತ ಹಂತವಾಗಿ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ನೀಡಿದರು.

ಚಿತ್ರದಲ್ಲಿ ನಟ ಪ್ರೇಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಜಡೇಶ್ ಹಂಪಿ, ರಾಮಕೃಷ್ಣ ಮತ್ತು ಡಾ. ಆನಂದ್ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ.