Review: "Veera Chandrahasa" is an attention-grabbing story with a different approach

Review: “ವೀರ ಚಂದ್ರಹಾಸ’ ವಿಭಿನ್ನ ಪ್ರಯತ್ನದ ಗಮನ ಸೆಳೆಯುವ ಕಥನ - CineNewsKannada.com

Review: “ವೀರ ಚಂದ್ರಹಾಸ’ ವಿಭಿನ್ನ ಪ್ರಯತ್ನದ ಗಮನ ಸೆಳೆಯುವ ಕಥನ

ಚಿತ್ರ: ವೀರಚಂದ್ರಹಾಸ
ನಿರ್ದೇಶನ: ರವಿ ಬಸ್ರೂರು
ತಾರಾಗಣ: ಶಿವರಾಜ್‍ಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ, ಶಿಥಿಲ್ ಶೆಟ್ಟಿ , ಪ್ರಸನ್ನ ಶೆಟ್ಟಿ ,ನಾಗಶ್ರೀ.ಜಿ.ಎಸ್ ಮತ್ತಿತರರು
ನಿರ್ದೇಶಕ : ರವಿ ಬಸ್ರೂರು

ಕನ್ನಡ ಚಿತ್ರರಂಗದಲ್ಲಿನ ಅದ್ಬುತ ಸಂಗೀತ ನಿರ್ದೇಶಕ ರವಿ ಬಸ್ರೂರು. ಸಿನಿಮಾ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡವರು. ಕರಾವಳಿ ಭಾಗದ ಸಂಸ್ಕøತಿ, ಆಚರಣೆ, ಕಲೆ,ಸೇರಿದಂತೆ ಮತ್ತಿತರ ವಿಷಯಗಳನ್ನು ಸಿನಿಮಾ ಮೂಲಕ ಜನರಿಗೆ ಕಟ್ಟಿಕೊಡುವ ಮೂಲಕ ತಾವೊಬ್ಬ ವಿಭಿನ್ನ ಅಭಿರುಚಿ ಹೊಂದಿದ ವ್ಯಕ್ತಿ ಎನ್ನುವುದನ್ನು ನಿರೂಪಿಸುತ್ತಲೇ ಬಂದಿದ್ಧಾರೆ

ಗಿರ್ಮಿಟ್ ಎನ್ನುವ ವಿಭಿನ್ನ ಚಿತ್ರ ನಿರ್ದೇಶನ ಮಾಡಿದ್ದ ರವಿ ಬಸ್ರೂರು, ಇದೀಗ ಕರಾವಳಿ ಭಾಗದಲ್ಲಿ ಜಪ್ರಿಯವಾಗಿರುವ ಯಕ್ಷಗಾನ ಪ್ರಸಂಗವನ್ನು ತೆರೆಯ ಮೇಲೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಇತರರಿಗಿಂತ ತಾವು ಭಿನ್ನ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ಯಕ್ಷಗಾನದ ವಿವಿಧ ಪ್ರಸಂಗಗಳನ್ನು ಕಣ್ತುಂಬಿಕೊಳ್ಳುವುದೇ ಮುದ,ಅಂತಹುದರಲ್ಲಿ ಸಿನಿಮಾ ಮೂಲಕ ಯಕ್ಷಗಾನ ಕಟ್ಟಿಕೊಡುವ ಮೂಲಕ ಕರಾವಳಿ ಅಲ್ಲದೆ ರಾಜ್ಯದ ಇತರೆ ಭಾಗಗಳ ಜನರಿಗೆ ಸಿನಿಮಾ ಮೂಲಕ ಕಲೆಯನ್ನು ಮತ್ತಷ್ಟು ಹತ್ತಿರ ಮತ್ತು ಆಪ್ತವಾಗಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವಿ ಬಸ್ರೂರು. ಆ ಪ್ರಯತ್ನದಲ್ಲಿ ಅವರು ಯಶಸ್ಸು ಕೂಡ ಕಂಡಿದ್ಧಾರೆ.

ಅನಾಥ ಬಾಲಕ ಚಂದ್ರಹಾಸನು ಭವಿಷ್ಯದಲ್ಲಿ ಕುಂತಲ ಸಾಮ್ರಾಜ್ಯದ ಯುವರಾಣಿ ವರಿಸಿ ಸಾಮ್ರಾಜ್ಯಕ್ಕೆ ಚಂದ್ರಹಾಸ ರಾಜನಾಗುತ್ತಾನೆ ಎಂಬ ಭವಿಷ್ಯವಾಣಿ ಕೇಳಿ ಕ್ರೋಧಗೊಳ್ಳುವ ಮಂತ್ರಿ ಕಟುಕರಿಗೆ ಚಂದ್ರಹಾಸನನ್ನು ಕೊಲ್ಲಲು ಹೇಳುತ್ತಾನೆ. ಆದರೆ ಚಂದ್ರಹಾಸ ಸಾಯುವುದಿಲ್ಲ. ಆತ ರಾಜಕುಟುಂಬದಲ್ಲಿ ಬೆಳೆದು 20 ವರ್ಷಗಳ ಬಳಿಕ ಮತ್ತೆ ದುಷ್ಟಬುದ್ಧಿಗೆ ಎದುರಾಗುತ್ತಾನೆ. ಇದು ದುಷ್ಟಬುದ್ಧಿಗೆ ಮತ್ತೆ ತಳಮಳ ಉಂಟು ಮಾಡುವ ಕಥೆ. ಅಲ್ಲಿಂದ ಏನಾಗುತ್ತದೆ. ದುಷ್ಟಬುದ್ದಿಯ ಕಥೆ ಏನು ಎನ್ನುವುದನ್ನು ರೋಚಕ

ಯಕ್ಷಗಾನ ಆಧಾರಿತ ಚಿತ್ರವಾಗಿರುವ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ಯಕ್ಷಗಾನ ಶೈಲಿಗೆ ಒತ್ತು ನೀಡಿದ್ದಾರೆ.ಅಲ್ಲಲ್ಲಿ ಗ್ರಾಫಿಕ್ ಮೂಲಕ ಗಮನ ಸೆಳೆದಿದ್ಧಾರೆ. ಯಕ್ಷಗಾನದಿಂದ ಹೊಸ ಮಾದರಿಯ ಕಳೆಯನ್ನು ಆರಂಭದಲ್ಲಿ ಪ್ರೇಕ್ಷಕ ಒಗ್ಗಿಗೊಳ್ಳಲು ತುಸು ತ್ರಾಸ ಎನ್ನಿಸಿದರೂ ಕ್ರಮೇಣ ಪ್ರೇಕ್ಷಕ ಸಿನಿಮಾದ ಕಡೆ ಸೆಳೆಯುವ ಮಾಂತ್ರಿಕ ಶಕ್ತಿ ಹೋಂದಿದೆ.ಈ ಮೂಲಕ ನಿರ್ದೇಶಕ ರವಿ ಬಸ್ರೂರು ತಾವು ಅಂದುಕೊಂಡ ಕೆಲಸ ಮಾಡಿ ಗಮನ ಸೆಳೆದಿದ್ದಾರೆ

ಕರಾವಳಿ ಭಾಗದ ಜನರಿಗೆ ಯಕ್ಷಗಾನ ಪ್ರಸಂಗಗಳು ಹೊಸದೇನಲ್ಲ. ಯಕ್ಷಗಾನ ಪ್ರಸಂಗಗಳನ್ನು ಹೆಚ್ಚಾಗಿ ನೋಡದೇ ಇರುವವರಿಗೆ ಇದು ಖಂಡಿತ ಹೊಸ ಅನುಭವ ನೀಡಲಿದೆ. ಜೊತೆಗೆ ಯಕ್ಷಗಾನ ಪ್ರಸಂಗಗಳು ರಂಗದ ಮೇಲಿಂದ ಬೆಳ್ಳಿ ಪರದೆ ಮೇಲೆ ಕಟ್ಟಿಕೊಟ್ಟಿರುವ ಪ್ರಯತ್ನ ಹೊಸತನ ಮತ್ತು ವಿನೂತನವಾಗಿದೆ.

ಚಿತ್ರದಲ್ಲಿ ಬಳಸಲಾಗಿರುವ ಪದ್ಯಗಳು, ರಂಗ ಗೀತೆಗಳು ಗಮನ ಸೆಳೆದಿವೆ. ನಿರ್ದೇಶಕರೇ ಸಂಗೀತ, ಹಿನ್ನೆಲೆ ಸಂಗೀತ ನೀಡಿದ ಹಿನ್ನೆಲೆಯಲ್ಲಿ ಅಬ್ದುತವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅಲ್ಲಲ್ಲಿ ಹಾಸ್ಯದ ದೃಶ್ಯಗಳು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತತವೆ

ವಿಶೇಷ ಪಾತ್ರದಲ್ಲಿ ಹಿರಿಯ ನಟ ಶಿವರಾಜ್‍ಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್ ಅವರಿಗೆ ಮತ್ತಷ್ಟು ಅವಕಾಶ ನೀಡಿದ್ದರೆ ಚೆಂದ ಇರುತ್ತಿತ್ತು.

ಶಿಥಿಲ್ ಶೆಟ್ಟಿ, ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಅವರ ಪಾತ್ರ ಗಮನ ಸೆಳೆದಿದೆ, ಜೊತೆಗೆ ಉದಯ ಹೆಗಡೆ ಕಾಡಬಾಳ್ ಕೂಡ.ತಮ್ಮ ಪಾತ್ರಗಳಿಗೆ ಜೀವ ತುಂಬಿಸಿದ್ದಾರೆ. ಯಕ್ಷಗಾನವನ್ನು ರಂಗದ ಮೇಲೆ ನೋಡಿ ಆನಂದಿಸಿದ ಮಂದಿ ಬೆಳ್ಳಿ ಪರದೆಯ ಮೇಲೆ ಕಣ್ಣು ತುಂಬಿಕೊಳ್ಳಬಹುದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin