ಬೆಂಗಳೂರಿನಲ್ಲಿ ಭಾರತದ ಮೊದಲ ಬೆಕ್ಕು ಸ್ಟೆರಿಲೈಸೇಶನ್ ಕೇಂದ್ರ ಆರಂಭ

ಮೂರ್ತಿ ಟ್ರಸ್ಟ್, ಕಂಪ್ಯಾಷನ್ ಅನ್ ಲಿಮಿಟೆಡ್ ಪ್ಲಸ್ ಆಕ್ಷನ್ ಸಹಯೋಗದೊಂದಿಗೆ ನವೀನ ಮೈತ್ರಿ ಉಪಕ್ರಮ ಬೆಂಗಳೂರಿನಲ್ಲಿ ಆರಂಭವಾಗಿದೆ. ಅತ್ಯಾಧುನಿಕ ಸಮುದಾಯ ಬೆಕ್ಕು ಜನನ ನಿಯಂತ್ರಣ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.

ಸದ್ಭಾವನೆ ಹಾಗೂ ಸೌಹಾರ್ದತೆ ಸಂಕೇತಿಸುವ “ಮೈತ್ರಿ” ಎಂದು ಹೆಸರಿಸಲಾದ ಈ ಕೇಂದ್ರ ಬೀದಿ ಬೆಕ್ಕು ಜನಸಂಖ್ಯೆಯನ್ನು ನಿರ್ವಹಿಸಲು ಮತ್ತು ಅಧಿಕ ಜನಸಂಖ್ಯೆಯ ಸಮಸ್ಯೆ ಎದುರಿಸಲು ಮೀಸಲಾಗಿರುವ ಪ್ರಯತ್ನದ ಭಾಗವಾಗಿದೆ.
ಬೆಕ್ಕು ಜನನ ನಿಯಂತ್ರಣಗೆ ಸಮುದಾಯ – ಕೇಂದ್ರಿತ ವಿಧಾನದೊಂದಿಗೆ 2018 ರಿಂದ 5000 ಕ್ಕೂ ಹೆಚ್ಚು ಸಮುದಾಯ ಬೆಕ್ಕುಗಳನ್ನು ಯಶಸ್ವಿಯಾಗಿ ಆಪರೇಷನ್ ಮಾಡಲಾಗಿದೆ. ಮೈತ್ರಿ ಉಪಕ್ರಮ ಮೂಲಕ, ಸಮುದಾಯ ಬೆಕ್ಕು ಜನಸಂಖ್ಯೆ ನಿಯಂತ್ರಿಸುವಲ್ಲಿ ಅವರ ಪ್ರಯತ್ನ ಅಳೆಯಲು ನಿರ್ಣಾಯಕ ಸಂಪನ್ಮೂಲಒದಗಿಸುವ ಮೂಲಕ ಪ್ರಭಾವಶಾಲಿ ಕೆಲಸವನ್ನು ಹೆಚ್ಚಿಸಲು ಮೂರ್ತಿ ಟ್ರಸ್ಟ್ ಗುರಿ ಹೊಂದಿದೆ.
ಸುಧಾಮೂರ್ತಿ ಅವರು ಪ್ರಾಣಿ ಕಲ್ಯಾಣದ ಮಹತ್ವದ ಕುರಿತು ಮಾಹಿತಿ ನೀಡಿ, ಸಾಮರಸ್ಯದ ಸಹಬಾಳ್ವೆ ಬೆಳಸುವಲ್ಲಿ ಪ್ರಾಣಿಗಳು ಮತ್ತು ಸಮುದಾಯ ಎರಡನ್ನು ಬೆಂಬಲಿಸುವ ಅಗತ್ಯವಿದೆ. ರಜನಿ ಬಾದಾಮಿ ಸಹಯೋಗದ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.

ಸಮುದಾಯದ ಬೆಕ್ಕುಗಳ ಜನಸಂಖ್ಯೆ ನಿರ್ವಹಿಸುವಲ್ಲಿ ಮತ್ತು ಬೆಕ್ಕುಗಳು ಮತ್ತು ಬೆಂಗಳೂರಿನ ನಿವಾಸಿಗಳಿಗೆ ಹೆಚ್ಚು ಸಮತೋಲಿತ ವಾತಾವರಣ ನಿರ್ಮಿಸುವಲ್ಲಿ ಗಣನೀಯ ಪರಿಣಾಮ ಬೀರಲಿದೆ. 1991 ರಲ್ಲಿ ಸ್ಥಾಪಿತವಾದ ಕುಪಾ, ಬೆಂಗಳೂರಿನ ದಾರಿತಪ್ಪಿದ ಪ್ರಾಣಿಗಳನ್ನು ರಕ್ಷಿಸಲು ಮತ್ತು ಆರೈಕೆ ಮಾಡಲು ಬದ್ದರಾಗಿರುವ ವ್ಯಕ್ತಿಗಳ ನೇತೃತ್ವದಲ್ಲಿ ಪ್ರಾಣಿ ವೈವಿಧ್ಯಮಯ ಪ್ರಾಣಿ ಕಲ್ಯಾಣ ಅಂಶಗಳನ್ನು ತಿಳಿಸುವ ಅನೇಕ ಕೇಂದ್ರಗಳನ್ನು ನಿರ್ವಹಿಸುತ್ತದೆ.
ಸುಧಾಮೂರ್ತಿ ಮತ್ತು ರೋಹನ್ ಮೂರ್ತಿ ಅವರ ಮಾರ್ಗದರ್ಶನದ ಮೂರ್ತಿ ಟ್ರಸ್ಟ್, ವಿವಿಧ ಲೋಕೋಪಕಾರಿ ಉಪಕ್ರಮಗಳ ಮೂಲಕ ಸಾಂಸ್ಕೃತಿಕ ಪರಂಪರೆ, ಶಿಕ್ಷಣ ಮತ್ತು ಪ್ರಾಣಿ ಕಲ್ಯಾಣವನ್ನು ಸಂರಕ್ಷಿಸುವತ್ತ ಗಮನ ಹರಿಸುತ್ತದೆ. ಮೈತ್ರಿ ಇನಿಶೆಯೇಟಿವ್ ಪರಿಸರ ಮತ್ತು ಸಮುದಾಯ ಪ್ರಾಣಿಗಳ ನಡುವೆ ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಪೆÇೀಷಿಸಲು ಪ್ರಯತ್ನಿಸುತ್ತದೆ.
ಪರಿಸರ ವ್ಯವಸ್ಥೆಗಳು ಮತ್ತು ಅವು ಬೆಂಬಲಿಸುವ ವೈವಿಧ್ಯಮಯ ಜಾತಿಗಳ ಮೇಲೆ ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸಲು ಬಯಸುತ್ತದೆ. ಸಮುದಾಯ ಬೆಕ್ಕುಗಳ ಶಸ್ತ್ರಚಿಕಿತ್ಸೆ ಮಾಡಲು ಬಯಸುವವರಿಗೆ ವಿಚಾರಗಳನ್ನು ಅuಠಿಚಿಠಿಡಿoರಿeಛಿಣs@ಛಿuಠಿ ಚಿiಟಿಜiಚಿ.oಡಿg ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.