“ನಾಗುಗೆ ವಧು ಬೇಕಾಗಿದೆ” ಚಿತ್ರದ ಟ್ರೈಲರ್ ಬಿಡುಗಡೆ
ಬಹುತೇಕ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು. ಇಂತಹ ಪ್ರಸ್ತುತ ಪರಿಸ್ಥಿತಿಯನ್ನಿಟ್ಟುಕೊಂಡು ನಿರ್ದೇಶಕ ಆರ್ ಕೆ “ನಾಗೂಗೆ ವಧು ಬೇಕಾಗಿದೆ” ಎನ್ನುವ ಸಿನಿಮಾ ಮಾಡಿದ್ದಾರೆ.

ಆರ್ ಕೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣ ಅನ್ನು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಚೌಧರಿ ಟ್ರೇಲರ್ ಹಾಗೂ ಹಾಡುಗಳನ್ನು ಅನಾವರಣ ಮಾಡಿದರು. ನಿರ್ದೇಶಕ “ಬಹದ್ದೂರ್” ಚೇತನ್ ಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು.
ನಾಗಲಕ್ಷ್ಮೀ ಚೌಧರಿ ಮಾತನಾಡಿ ಟ್ರೇಲರ್ ಹಾಗೂ ಹಾಡುಗಳನ್ನು ನೋಡುತ್ತಿದ್ದಾಗ ಈ ಚಿತ್ರದಲ್ಲಿರುವ ತಾಯಿ – ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಯಿತು. ಪ್ರಸಕ್ತ ಬಹುತೇಕ ಗಂಡುಮಕ್ಕಳು ಎದುರುಸುತ್ತಿರುವ ಸಮಸ್ಯೆಗಳನ್ನು ನಿರ್ದೇಶಕರು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲೆಂದು ಎಂದರು.

ನಿರ್ದೇಶಕ ಆರ್.ಕೆ ಮಾತನಾಡಿ ನಗರ ಪ್ರದೇಶಗಳಲ್ಲಾಗಲಿ ಹಾಗೂ ಹಳ್ಳಿಗಳಲ್ಲಾಗಲಿ ಹುಡುಗರಿಗೆ ಮದುವೆ ಆಗುತ್ತಿಲ್ಲ. ಹುಡುಗನಿಗೆ ಗೌರಮೆಂಟ್ ಕೆಲ್ಸಾನೆ ಬೇಕು. ಹೆಣ್ಣು ಕೊಡ್ಬೇಕು ಅಂದ್ರೆ ಅತ್ತೆ ಮಾವ ಇರಬಾರದು. ಬೆಂಗಳೂರು ಅಲ್ಲಿ ಸೈಟ್ ಮನೆ ಇರಬೇಕು. ಈಗಿನ ಕಾಲದ ಹೆಚ್ಚಿನ ಹುಡುಗಿಯರು ಈ ರೀತಿಯ ಬೇಡಿಕೆಗಳನ್ನಿಡುತ್ತಾರೆ. ಈ ಅಂಶಗಳನ್ನಿಟ್ಟುಕೊಂಡು ಹಾಗೂ ಹತ್ತಿರದಿಂದ ಕಂಡ ಕೆಲವು ಸನ್ನಿವೇಶಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಬರೆದಿದ್ದೇನೆ. ಇದೊಂದು ನೈಜಘಟನೆ ಆಧಾರಿತ ಚಿತ್ರ ಎಂದು ಹೇಳಿದರು
ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ದತ್ತು ಪೂಜಾರಿ ನಾಯಕನಾಗಿ ಅಭಿನಯಿಸಿದ್ದಾರೆ. ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ, ಅಪೂರ್ವಶ್ರೀ, ರೇಖಾದಾಸ್, ಬೌ ಬೌ ಬಿರಿಯಾನಿ ಜಯರಾಮ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ನಾಗಲಕ್ಷ್ಮೀ ಚೌಧರಿ ಅವರಿಗೆ ಹಾಗೂ ಶೀರ್ಷಿಕೆ ಅನಾವರಣ ಮಾಡಿದ “ಬಹದ್ದೂರ್” ಚೇತನ್ ಕುಮಾರ್ ಅವರಿಗೆ ಹಾಗೂ ಮಂಜುಳ ರಘು ಅವರಿಗೆ ಧನ್ಯವಾದ ಎಂದರು

ನಾಯಕ ದತ್ತು ಪೂಜಾರಿ ಮಾತನಾಡಿ ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಾಗು ನನ್ನ ಪಾತ್ರದ ಹೆಸರು ಎಂದು ಹೇಳಿದರು .
ಚಿತ್ರದಲ್ಲಿ ನಟಿಸಿರುವ ರೇಖಾದಾಸ್, ಅಪೂರ್ವಶ್ರೀ, ಸೋನಿಕಾ ಸೋಮಣ್ಣ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಶ್ರೀಸುರೇಶ್ ಹಾಗೂ ಛಾಯಾಗ್ರಾಹಕ ನಾಗರಾಜ್ ಮುಂತಾದವರಿದ್ದರು

