“ನಿಮಿತ್ತ ಮಾತ್ರ” ಕನ್ನಡದ ಪ್ರಥಮ ಪ್ಯಾರಾ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ

“ನಿಮಿತ್ತ ಮಾತ್ರ” ಕನ್ನಡದ ಪ್ರಥಮ ಪ್ಯಾರಾ ಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದು,ಬೆಂಗಳೂರು ಮತ್ತು ಮಂಗಳೂರು ಹಿನ್ನೆಲೆಯೊಂದಿಗೆ ಮೂಡಿ ಬಂದಿದೆ.15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಭಯಾನಕ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ.

ತಂದೆಯಿಂದ ಬಿಟ್ಟುಹೋಗಿದ್ದ ಸಂಧರ್ಭ ಅರಿಯಲು ತನಿಖಾ ಪತ್ರಕರ್ತನೊಬ್ಬ ಪ್ರಕರಣ ಪರಿಹರಿಸಲು ಹೊರಟಿದ್ದಾನೆ. ಆತ ಸತ್ಯ ಪತ್ತೆಹಚ್ಚುವನೋ ಅಪರಾಧಿಯನ್ನು ನ್ಯಾಯದ ಕಟ್ಟೆಗೆ ಸೆಳೆವನೋ.ಈ ಪ್ರಶ್ನೆಗಳು ಚಿತ್ರದಲ್ಲಿ ಮುಂದುವರೆಯುತ್ತ ಹೋಗುವುದು ಚಿತ್ರದ ಕುತೂಹಲ.
ಚಿತ್ರಕ್ಕೆ ರೋಶನ್ ಡಿ ಸೌಜಾ ಕಥೆ ಬರೆಯುವ ಜೊತೆಗೆ , ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ., ಪೂರ್ಣಚಂದ್ರ ಮೈಸೂರ್, ಸಂಗೀತ ರಾಜೀವ್, ಮತ್ತು ಅರವಿಂದ ಕುಪ್ಲಿಕರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಂಗೀತ ರಾಜೀವ್,ಚಿತ್ರದಲ್ಲಿ ನಟನೆಯ ಜೊತೆಗೆ ತಮ್ಮ ಸಂಗೀತ 4 ಹಾಡುಗಳಿಗೆ ಸಂಗೀತ ನೀಡಿದ್ದಾರೆ.ರೋಶನ್ ಅವರೊಂದಿಗೆ ರಷ್ಯಾ ಮತ್ತು ಚೆನ್ನೈನ ಪ್ರತಿಭಾವಂತ ಸಂಗೀತಗಾರರ ತಂಡದ ಜೊತೆಗೂಡಿ, ವೈವಿಧ್ಯಮಯ ಹಿನ್ನೆಲೆ ಸಂಗೀತಬರೂಪಿಸಿದ್ದಾರೆ. ಚಿತ್ರಕಲೆ ವಿಜಯ್ ಮೊಂಟೇರಿ ಅವರದು. ಸಂಭಾಷಣೆಯನ್ನು ರೋಷನ್ ಡಿಸೋಜಾ ಹಾಗು ಪ್ರದ್ಯುಮ್ನ ನರಹಳ್ಳಿ ಬರೆದಿದ್ದಾರೆ
“ನಿಮಿತ್ತ ಮಾತ್ರ” ಚಿತ್ರ ಪ್ರಸ್ತುತ ಪ್ರೇಕ್ಷಕರಿಗೆ ಅದ್ಧೂರಿಯಾಗಿ ತಲುಪಿಸಲು ಮತ್ತು ಸೂಕ್ತ ಪರಿಚಯ ಪಡೆಯಲು ಪ್ರಸ್ತುತಪಡಿಸುವವರಿಗೆ ಎದುರು ನೋಡುತ್ತಿದೆ.

ಧೀರಜ್ ಎಂ.ವಿ. ಕನ್ನಡ ಫಿಲ್ಮಿಕ್ಲಬ್ ಮೂಲಕ ಚಿತ್ರದ ಮಾರ್ಕೆಟಿಂಗ್,ವಿತರಣಾ ಮತ್ತು ಪ್ರಸ್ತುತಗೊಳಿಸುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. 5000 ಕ್ಕೂ ಹೆಚ್ಚು ಸದಸ್ಯರ ಬಲದಿಂದ “ನಿಮಿತ್ತ ಮಾತ್ರ”ಗೆ ಪ್ರಾರಂಭಿಕ ಹಂಗಾಮಿಯನ್ನು ರಚಿಸುವಲ್ಲಿ ತೊಡಗಿಕೊಂಡಿದೆ ಹಾಗೂ ಬೃಹತ್ ಪ್ರಚಾರ, ಬ್ರ್ಯಾಂಡಿಂಗ್, ಮತ್ತು ಪ್ರಸ್ತುತಗೊಳಿಸುವ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
“ನಿಮಿತ್ತ ಮಾತ್ರ ಒಂದು ರೋಮಾಂಚಕಾರಿ-ಥ್ರಿಲ್ಲರ್ ಚಿತ್ರವಾಗಿದ್ದು, ಇದು ಸರಿಯಾದ ಪ್ರೇಕ್ಷಕರಿಗೆ ತಲುಪಿದರೆ ಮುಂದಿನ ದಶಕಕ್ಕೂ ಹೆಚ್ಚು ಕಾಲ ಜನರ ಮನಸ್ಸಿನಲ್ಲಿ ಉಳಿಯುವ ಸಾಮಥ್ರ್ಯವನ್ನು ಹೊಂದಿದೆ. ಮೊದಲ ಕ್ಷಣದಿಂದ ಹಿಡಿದು ಶೀರ್ಷಿಕೆಯ ವರೆಗೂ ನಿಮ್ಮನ್ನು ಹಿಡಿದುಕೊಂಡೇ ಇರಿಸುವ ಚಿತ್ರ ಇದಾಗಿದೆ.” – ನಿರ್ದೇಶಕ ರೋಷನ್ ಡಿ’ಸೋಜಾ ಹೇಳುತ್ತಾರೆ