ಪ್ರತಿಭಾನ್ವಿತರಿಬ್ಬರ ಕನಸಿನ ಚಿತ್ರ ಪರಂವಃ : ಜುಲೈ 21ಕ್ಕೆ ರಾಜ್ಯಾದ್ಯಂತ ತೆರೆಗೆ

ಪ್ರತಿಭಾನ್ವಿತ ಜೋಡಿ ಸಂತೋಷ್ ಕೈದಾಳ ಮತ್ತು ನಟ ಪ್ರೇಮ್ ಸಿಡೇಗಲ್ ಜೊತೆಗೂಡಿ ಕೆಲಸ ಮಾಡಿರುವ ಅವರ ಕನಸಿನ ಚಿತ್ರ “ಪರಂವಃ” ಇದೇ ತಿಂಗಳ 21ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಭಾವನಾತ್ಮಕ ಸಂಬಂಧದ ಕಥೆಯನ್ನು ” ಪರಂವಃ ” ಚಿತ್ರದ ಮೂಲಕ ಕಟ್ಟಿಕೊಡಲು ಮುಂದಾಗಿದ್ದಾರೆ ಯುವ ನಿರ್ದೇಶಕ ಸಂತೋಷ್ ಕೈದಾಳ. ಈ ಮೂಲಕ ನಾಡಿನ ಜನಪದ ಕಲೆಯಲ್ಲಿ ಒಂದಾದ ವೀರಗಾಸೆ ಕಲೆಯ ಮಹತ್ವದ ಬಗ್ಗೆ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಈ ಮೂಲಕ ನಾಡಿನ ಜನ ಮನ ಗೆಲ್ಲಲು ಮುಂದಾಗಿದ್ದಾರೆ.
ಪೀಪಲ್ ವಲ್ರ್ಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ,ಇನ್ನೂರು ಜನ ಸ್ನೇಹಿತರು ಬಂಡವಾಳ ಹೂಡಿರುವುದು ಚಿತ್ರದ ವಿಶೇಷತೆಗಳಲ್ಲಿ ಒಂದು. ಅದರ ಜವಾಬ್ದಾರಿಯನ್ನು ಪ್ರೇಮ್ ಮತ್ತು ಸಂತೋಷ್ ಹೆಗಲ ಮೇಲೆ ಹಾಕಿಕೊಂಡು ನಾಡಿನಾದ್ಯಂತ ಸಂಚಾರ ಮಾಡಿ, ಹಲವು ಮಠಾದೀಶರು, ಹಿರಿಯ ನಟರನ್ನು ಭೇಟಿ ಮಾಡಿ ತಂಡದಿಂದ ಆಶೀರ್ವಾದ ಪದೆದಿದ್ದಾರೆ.ಇದೇ ಖುಷಿಯಲ್ಲಿ ಪರಂವಃ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಸಿದ್ದಗಂಗಾ ಶ್ರೀಗಳಿಂದ ಹಿಡಿದು ನಾಡಿನ ಹಲವು ಮಠಾದೀಶರನ್ನು ಭೇಟಿ ಮಾಡಿ ಆಶೀರ್ವಚನ ಪಡೆದಿದ್ದಾರೆ. ಜೊತೆಗೆ ನಟರಾದ ನೆನಪಿರಲಿ ಪ್ರೇಮ್, ದುನಿಯಾ ವಿಜಯ್ ಆದಿಯಾಗಿ ಕನ್ನಡ ಚಿತ್ರರಂಗದ ಒಂದಷ್ಟು ಮಂದಿ ನಟರು ಪರಂವಃ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತು ಶುಭ ಹಾರೈಸಿದ್ದಾರೆ

ನಟ ಪ್ರೇಮ್ ಸಿಡೇಗಲ್ ಹಾಗು ಮೈತ್ರಿ ಜೆ ಕಶ್ಯಪ್ ಹಾಗು ಗಣೇಶ್ ಹೆಗ್ಗೋಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿರುವ ಹಿನ್ನೆಲೆಯಲ್ಲಿ ಜನರಿಗೆ ಮುಟ್ಟಿಸಲು ನಿರ್ದೇಶಕ ಸಂತೋಷ್ ಮತ್ತು ನಟ ಪ್ರೇಮ್ ರಾಜ್ಯಾದ್ಯಂತ ಸುತ್ತಾಡಿ ಚಿತ್ರದ ಬಗ್ಗೆ ಪ್ರಚಾರ ಮಾಡಿದ್ದಾರೆ.
“ಪರಂವಃ” ಚಿತ್ರದ ‘ಸ್ನೇಹದ ಕಡಲಲಿ’ ಲಿರಿಕಲ್ ಹಾಡನ್ನು ಗಾಯಕ ನವೀನ್ ಸಜ್ಜು ಹಾಡಿದ್ದು ,ನಾಗೇಶ್ ಕುಂದಾಪುರ ಹಾಗೂ ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದಾರೆ.ಸ್ಯಾಂಡಲ್ ವುಡ್ ಸಲಗ ‘ದುನಿಯಾ ವಿಜಯ್ ಈ ಹಾಡಿಗೆ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತವಿದೆ.ಅಪರಿಜಿತ್ ಹಾಗೂ ಜೋಸ್ ಜೊಸ್ಸಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.ಎ ಎಸ್ ಶೆಟ್ಟಿ ಛಾಯಾಗ್ರಹಣ “ಪರಂವಃ”ಚಿತ್ರಕ್ಕಿದೆ.
ಶಿವನ ಢಮರುಗದಿಂದ ಹೊರಹೊಮ್ಮವ ನಾದಕ್ಕೆ ಪರಂವಃ ಎನ್ನುತ್ತಾರೆ. ಹೀಗಾಗಿ ನಾವು ಚಿತ್ರಕ್ಕೆ ಅದೇ ಹೆಸರು ಇಟ್ಟಿದ್ದೇವೆ ಎಂದು ನಿರ್ದೇಶಕ ಸಂತೋಷ್ ಕೈದಾಳ ಮಾಹಿತಿ ಹಂಚಿಕೊಂಡಿದ್ದಾರೆ.

ವೀರಗಾಸೆ ಕಲೆ ಮತ್ತು ತಂದೆ ಮಗನ ಭಾವನಾತ್ಮಕ ಕಥೆಯನ್ನು ಮನಮುಟ್ಟುವ ರೀತಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ, ಜೊತೆಗೆ ಆಕ್ಷನ್ ಥ್ರಿಲ್ಲರ್, ಹೀಗೆ ಪ್ರೇಕ್ಷಕರನ್ನು ರಂಜಿಸುವ ಹಲವು ವಿಷಯಗಳು ಚಿತ್ರದಲ್ಲಿವೆ.ನಾಯಕ ಪ್ರೇಮ್ ಸಿಡೇಗಲ್ ಅವರು ಚಿತ್ರರಂಗದಲ್ಲಿ ನಾಯಕನಾಗಿ ನೆಲೆ ನಿಲ್ಲಲು ಭೂಮಿಕೆಯಲ್ಲಿದ್ದಾರೆ. ಇದೇ ಶುಕ್ರವಾರ ತೆರೆಗೆ ಬರುತ್ತಿದ್ದು ಎಲ್ಲರ ಬೆಂಬಲ ಬೇಕು ಎಂದು ಚಿತ್ರತಂಡ ಕೇಳಿಕೊಂಡದೆ.