“ಕುಚುಕು” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ

ಸ್ನೇಹದ ಮಹತ್ವ ಸಾರುವ “ಕುಚುಕು” ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ. ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಎಂ.ಎನ್ ಕುಮಾರ್, ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭಕೋರಿದ್ದಾರೆ

ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ “ಕುಚುಕು’ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಚಿತ್ರ ಖಳನಟ ಶಿವಾಜಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ನಿರ್ದೇಶಕ ಮೈಸೂರು ರಾಜು ಮಾತನಾಡಿ,ಈ ಹಿಂದೆ “ನೃತ್ಯಂ” ಚಿತ್ರ ನಿರ್ದೇಶಿಸಿದ್ದೆ. ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು.
ಅರ್ಜುನ್ ಚೌಹ್ಹಾಣ್ ಮಾತನಾಡಿ ನನ್ನ ಅಭಿನಯದ ಮೂರನೇ ಚಿತ್ರ. ಹೆಸರೆ ತಿಳಿಸುವಂತೆ ಸ್ನೇಹಿತರ ಕುರಿತಾದ ಚಿತ್ರದಲ್ಲಿ ಒಬ್ಬ ಸ್ನೇಹಿತ ಎಂದು ತಿಳಿಸಿದರು.

ಮತ್ತೊಬ್ಬ ನಾಯಕ ಬಸವರಾಜಕುಮಾರ್ ,ಗುಲ್ಬರ್ಗ ಮೂಲ. ರಂಗಭೂಮಿ ಕಲಾವಿದ. ಚಿತ್ರದಲ್ಲಿ ನಾನು ಹಾಗೂ ಅರ್ಜುನ್ “ಕುಚುಕು”ಗಳಾಗಿ ನಟಿಸಿದ್ದೇವೆ ಎಂದರು
ಖಳನಟ ಶಿವಾಜಿ ಮಾತನಾಡಿ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ವಿಲನ್ ಪಾತ್ರ ನಿರ್ವಹಿಸಿದ್ದೇನೆ. ಆರ್ ಚಂದ್ರು ರವರ ಫಾದರ್ ಸಿನಿಮಾ ಮತ್ತು ಕುಂಟೆಬಿಲ್ಲೆ, ಸಿನಿಮಾ. ಮಂಡಲ್ ಪಂಚಾಯಿತಿ ಮುಂತಾದ ಚಿತ್ರಗಳಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದೆ ಎಂದರು

ಇತ್ತೀಚಿನ ದಿನಗಳಲ್ಲಿ ಕೆಲವರು ಪ್ರಚಾರಕ್ಕೆ ಬರುವುದಿಲ್ಲ. ನಿರ್ದೇಶಕ ನಿರ್ಮಾಪಕರು ಕೇಳಿದರೆ ನಮಗೆ ಶೂಟಿಂಗ್ ಇದೆ ಎಂದು ನೆಪ ಹೇಳುತ್ತಾರೆ ಮತ್ತು ಬಲವಂತ ಮಾಡಿ ಕರೆದರೆ. ನಮಗೆ ಹೋಗುವ ಬರುವ ಖರ್ಚುಗಳು ಸಂಭಾವನೆ ಕೊಡಬೇಕೆಂದು ಕೇಳುತ್ತಾರೆ. ಈ ರೀತಿ ಆದರೆ, ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ತುಂಬಾ ನೋವಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಎಂ ಎನ್ ಕುಮಾರ್ ಅವರ ಬಳಿ ದೂರು ಹೇಳಿಕೊಂಡರು
ಎಂ ಎನ್ ಕುಮಾರ್ ಮಾತನಾಡಿ, ಚಿತ್ರೀಕರಣದ ಮೊದಲು ನಿರ್ದೇಶಕರು, ನಿರ್ಮಾಪಕರು, ಕಲಾವಿದರೊಂದಿಗೆ ಪ್ರಚಾರದ ಸಮಯದಲ್ಲಿ ಬರಬೇಕೆಂದು ಅಗ್ರಿಮೆಂಟ್ ಕರಾರು ಮಾಡಿಕೊಳ್ಳುವುದು ಸೂಕ್ತ.ಪ್ರಚಾರಕ್ಕೆ ಕಲಾವಿದರು ಬರಲಿಲ್ಲವೆಂದರೆ ವಾಣಿಜ್ಯ ಮಂಡಳಿಗೆ. ದೂರು ಕೊಡಿ ಎಂದರು
ನಿರ್ಮಾಪಕಿ ನಾಗರತ್ನಮ್ಮ ಸಂಗೀತ ನಿರ್ದೇಶಕ ಎ.ಟಿ.ರವೀಶ್ ನಾಯಕಿ ಪ್ರಿಯದರ್ಶಿನಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು