19.20.21 New chapter for March 3rd A story of the struggle of the brave

ಮಾರ್ಚ್ 3ಕ್ಕೆ 19.20.21 ಹೊಸ ಅಧ್ಯಾಯ
ಧಮನಿತರ ಹೋರಾಟದ ಕಥನ - CineNewsKannada.com

ಮಾರ್ಚ್ 3ಕ್ಕೆ 19.20.21 ಹೊಸ ಅಧ್ಯಾಯಧಮನಿತರ ಹೋರಾಟದ ಕಥನ

ಹರಿವು, ನಾತಿಚರಾಮಿ, ಆಕ್ಟ್ 1978 ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ತಾವೊಬ್ಬ ವಿಭಿನ್ನ ಆಲೋಚನೆಯ ಸೂಕ್ಷ್ಮ ಸಂವೇದನೆಯ ನಿರ್ದೇಶಕ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಮಂಸೋರೆ, ಇದೀಗ ಹೊಸ ಬಗೆಯ ನೈಜ ಘಟನೆಯನ್ನು ಮುಂದಿಟ್ಟುಕೊಂಡು ಧಮನಿತರ ಹೋರಾಟದ ಕಥೆಯನ್ನು 19,20,21 ಚಿತ್ರದ ಮೂಲಕ ತೆರೆ ಮೇಲೆ ತರಲು ಮುಂದಾಗಿದ್ದಾರೆ.

” ದೌರ್ಜನ್ಯ, ತುಳಿತಕ್ಕೊಳಾದ ಚಿಕ್ಕ ಸಮುದಾಯದ ದಶಕಗಳ ಹೋರಾಟಕ್ಕೆ ಚಿತ್ರರೂಪ ನೀಡಿ, ತೆರೆಯ ಮೇಲೆ ಎಮೋಷನಲ್ ಜರ್ನಿಯನ್ನು ಕಟ್ಟಿಕೊಡಲಿದ್ದಾರೆ.ಅದಕ್ಕಾಗಿ ಮಾರ್ಚ್ 3 ರಂದು ಮುಹೂರ್ತವೂ ನಿಗಧಿಯಾಗಿದೆ.
ಕರಾವಳಿ ಮತ್ತು ಪಶ್ವಿಮ ಘಟ್ಟ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಬೆರಳಣಿಕೆಯಷ್ಟು ಮಂದಿ ಇರುವ ಸಮುದಾಯವೊಂದರ ಹೋರಾಟದ ನೈಜ ಘಟನೆ ಹೂರಣ ಹೊಂದಿರುವ ಚಿತ್ರ ಇದು.
19,20,21 ಸಂವಿಧಾನದಲ್ಲಿ ಬರುವ ಆರ್ಟಿಕಲ್. ಇದನ್ನು ಸಂವಿಧಾನದ ಹೃದಯ ಭಾಗ ಎನ್ನುತ್ತಾರೆ.,ವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೇಳಲಾಗಿದೆ. ಅದನ್ನೇ ಸಿನಿಮಾದಲ್ಲಿಯೂ ತೋರಿಸಲಾಗಿದೆ.

Director Mansore and Sampath
M.D Pallavi
Sandeep

ಚಿತ್ರಕ್ಕೆ ದೇವರಾಜ್ ನಿರ್ಮಾಣ ಮಾಡಿದ್ದು ಛಾಯಾಗ್ರಾಹ ಸತ್ಯ ಹೆಗಡೆ ಸಹ ನಿರ್ಮಾಣವಿದೆ. ರಂಗಭೂಮಿಯ ಪ್ರತಿಭೆ ಶೃಂಗ,ಬಾಲಾಜಿ ಮನೊಹರ್, ಸಂಪತ್ ಮೈತ್ರೇಯಾ, ಸಂದೀಪ್, ಎಂ.ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ರಾಜೇಶ್ ನಟರಂಗ ಸೇರಿದಂತೆ ರಂಗಭೂಮಿಯ ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದೆ.

  • ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮಂಸೋರೆ, ನೈಜ ಘಟನೆಯ ಸಿನಿಮಾ ಆಗಿರುವುದರಿಂದ ಅದನ್ನು ತೆರೆಯ ಮೇಲೆ ಕಟ್ಟಿಕೊಡುವ ಸವಾಲು ಕೂಡ ಇತ್ತುಸಿನಿಮಾ ಮೂಲಕ ನೀಡುವ ಗೌರವಾರ್ಪಣೆ . ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ…” 19.20.21 .ಚಿತ್ರದ ಮೂಲಕ ಆ ಸಮುದಾಯ ಎದುರಿಸಿದ ನೋವು,ದೌರ್ಜನ್ಯ, ಹೋರಾಟ ಬೆಳಕಿಗೆ ಬಂದದ್ದು ಹೇಗೆ.ಹೋರಾಟಕ್ಕೆ ಬೆಂಬಲ ನೀಡಿದವರಾರು ಎನ್ನುವ ಹಲವು ವಿಷಯಗಳನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ.

ಹರಿವು, ನಾತಿಚರಾಮಿ, ಆಕ್ಟ್ 1978 ಚಿತ್ರಗಳಲ್ಲಿ ಎಮೋಷನ್ ಅನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಆದರೆ ಇಲ್ಲಿ ಎಮೋಷನ್ ಅನ್ನು ಸಿನಿಮಾ ನೋಡುವ ಮಂದಿಗೆ ಬಿಡಲಾಗಿದೆ. ನೋವು, ದೌರ್ಜನ್ಯ ಕಂಡವರು, ಅನುಭವಿಸಿದವರ ಮನ ಕಲಕುತ್ತೆ.ಹೀಗಾಗಿ ಇದು ಭಿನ್ನವಾದ ಸಿನಿಮಾ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಿರ್ದೇಶಕರದ್ದು.

ಎಲ್ಲೆಡೆ ಸಲ್ಲುವ ಜಾಗತಿಕ ಸಿನಿಮಾ

Director Mansore

ವಿಶ್ವದ ಯಾವುದೇ ಭಾಗದಲ್ಲಿ ಸಲ್ಲಬಹುದಾದ ಮತ್ತು ಆ ಭಾಗದ ಜನರಿಗೆ ಇಷ್ಡವಾಗುವ ಸಿನಿಮಾವೇ ಜಾಗತಿಕ ಸಿನಿಮಾ. 19.20.22 ಜಗತ್ತಿನ ಎಲ್ಲೆಡೆ ಸಲ್ಲಬಹುದಾದ ಚಿತ್ರ ಎಂದರು ನಿರ್ದೇಶಕ ಮಂಸೋರೆ.
2012-19 ರ ನಡುವೆ ನಡೆದ ಆದಿವಾಸಿ ಸಮುದಾಯದ ಹೋರಾಟವನ್ನು ಆಗಿನ ಕಾಲಘಟ್ಟದಲ್ಲಿ ಕಟ್ಟಿಕೊಡಲಾಗಿದೆ.ನ್ಯಾಯಾಂಗ, ಮಾದ್ಯಮ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದಿದ್ದರೆ ಧಮನಿತರ ಹೋರಾಟ ಯಾವ ದಿಕ್ಕಿನತ್ತ ಸಾಗಲಿದೆ ಎನ್ನುವುದನ್ನು ತೆರೆಯ ಮೇಲೆಕಟ್ಟಿಕೊಡಲಾಗಿದೆ. ನೈಜ ಘಟನೆಯ ಚಿತ್ರ ಎಲ್ಲರಿಗೂ ಮನ ಮುಟ್ಡಲಿದೆ ಎನ್ನುವ ವಿಶ್ವಾಸ ನಿರ್ದೇಶಕರದ್ದು.

ಬಕ್ಕೇಶ್ ಸಂಗೀತ, ಶಿವು ಬಿಕೆ ಕುಮಾರ್ ಛಾಯಾಗ್ರಹಣ ಚಿತ್ತಕ್ಕಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin