Exclusive: ಪಾತ್ರಕ್ಕೆ ಜೀವ ತುಂಬುವ ಕಲಾವಿದೆ: ಮೇಘನಾ ಗಾಂವಕರ್ ನಡೆದು ಬಂದ ಹಾದಿ… - CineNewsKannada.com

Exclusive: ಪಾತ್ರಕ್ಕೆ ಜೀವ ತುಂಬುವ ಕಲಾವಿದೆ: ಮೇಘನಾ ಗಾಂವಕರ್ ನಡೆದು ಬಂದ ಹಾದಿ…

ತಾವಾಯಿತು ತಮ್ಮ ಕೆಲಸವಾಯಿತು ಎನ್ನುವುದರಲ್ಲಿ ನಂಬಿಕೆ ಇಟ್ಟವರು. ಮಾಡಿರುವುದು ಕಡಿಮೆ ಚಿತ್ರವಾದರೂ ಗಮನ ಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಂಡವರು, ಚಿತ್ರಗಳ ಸಂಖ್ಯೆಗಿಂತ ಗುಣಮಟ್ಟವೇ ಪ್ರಧಾನ ಎಂದು ನಿರೂಪಿಸಿದರು. ಕೈನಲ್ಲಿ ಸಿನಿಮಾ ಇರಲಿ ಇಲ್ಲದಿರಲಿ ಯಾರ ತಂಟೆ ತಕರಾರು ಬೇಡ ಎಂದು ದೇಶ ಸುತ್ತಿಕೊಂಡು ಅಲ್ಲಿನ ಅಚಾರ ವಿಚಾರ ತಿಳಿಯುವ ಪ್ರಯತ್ನ ನಡೆಸಿದ್ದಾರೆ.Exclusive Interview: Actress Meghana Goankar

Actress Meghana Goankar
Actress Meghana Goankar

ಕಾಲೇಜು ದಿನಗಳಿಂದಲೇ ‘ನಮ್ ಏರಿಯಾಲ್ ಒಂದ್ ದಿನ’ ಎಂದು ಚಿತ್ರರಂಗದ ಏರಿಯಾಕ್ಕೆ ಪ್ರವೇಶ ಪಡೆದು ‘ವಿನಾಯಕ ಗೆಳೆಯರ ಬಳಗ’ ದ ಜೊತೆ ಸುತ್ತಾಡಿ, ನಮ್ಮ ಹತ್ರ ‘ತುಘಲಕ್’ ದರ್ಬಾರ್ ನಡೆಯುವುದಿಲ್ಲ ಎಂದು ಖಡಕ್ ಆಗಿ ಹೇಳಿ, ಗೌರವ ಇರುವ ಕಡೆ ‘ಭಕ್ತ ಶಂಕರ’ ಎನ್ನುತ್ತಲೇ, ‘ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ ಹೇಳುತ್ತಲೇ ‘ಚಾರ್ ಮಿನಾರ್’ ಏರಿ ಯಶಸ್ಸಿನ ಸಿಹಿ ಕಂಡವರು. ‘ಕಾಳಿದಾಸ ಕನ್ನಡ ಮೇಷ್ಟ್ರು’ ಮೂಲಕ ಕನ್ನಡಾಭಿಮಾನ ಮೆರೆದಾಕೆ. ‘ಕರ್ವ-3’ ಜೊತೆ ಜೊತೆಗೆ ‘ಛೂ ಮಂಥರ್’ ಎನ್ನುತ್ತಲೇ ‘ಶಿವಾಜಿ ಸೂರತ್ಕಲ್-2’ ಅಡ್ಡದಲ್ಲಿ ಎಸಿಪಿ ದೀಪಾ ಕಾಮರ್ ಆಗಿ ತನಿಖೆ ಉಸ್ತುವಾರಿ ವಹಿಸಿ ಸೈ ಎನಿಸಿಕೊಂಡು ಇದೀಗ ರಾಜ್ಯಶಾಸ್ತ್ರದ ಉಪನ್ಯಾಸಕಿಯಾಗಿ ‘ದಿ ಜಡ್ಜ್‍ಮೆಂಟ್’ ಸಾಕ್ಷಿಯಾಗಿದ್ದಾರೆ.

ಯಾರಿವರು ಎನ್ನುವ ಕುತೂಹಲವೇ,ಅವರೇ ಮೇಘನಾ ಗಾವಂಕರ್. ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು.. ಸಿನಿಮಾ ಇಲ್ಲದಿದ್ದಾಗ ಯಾರ ತಂಟೆ ತಕರಾರು ಬೇಡ ಎಂದು ದೇಶ ಸುತ್ತಿಕೊಂಡು ಅಲ್ಲಿನ ಅಚಾರ ವಿಚಾರ ತಿಳಿಯುವ ಪ್ರಯತ್ನ ನಡೆಸಿದ್ದಾರೆ. ಇದೀಗ ಮೇಘನಾ ಕೈನಲ್ಲಿ ಹಲವು ಚಿತ್ರಗಳಿವೆ.

ಚಿತ್ರರಂಗದ ಸಿನಿಮಾ ಪ್ರಯಾಣದ ಕುರಿತು ನಟಿ ಮೇಘನಾ ಗಾವಂಕರ್ ಮಾಹಿತಿ ಹಂಚಿಕೊಂಡಿದ್ದಾರೆ.

  • ಚಿತ್ರರಂಗಕ್ಕೆ ಬಂದ ಬಗೆ ಹೇಗೆ?

ಕಾಲೇಜು ದಿನಗಳಿಂದಲೇ ಶಿಯಾಮಕ್ ದಾವರ್ ಸಂಸ್ಥೆಯಲ್ಲಿ ನೃತ್ಯ ಬೋಧಕಿಯಾಗಿ ಕೆಲಸ ಮಾಡುತ್ತಿದ್ದೆ. ನಿರೂಪಕಿಯಾಗಿ ಹಲವು ಜನಪ್ರಿಯ ಕಾರ್ಯಕ್ರಮ ನಿರೂಪಿಸಿದ್ದೆ. ಜೊತೆಗೆ ರಂಗಭೂಮಿ ಮತ್ತು ಟಿವಿ ಶೋಗಳಲ್ಲಿ ಕೆಲಸ ಮಾಡುತ್ತಿದ್ದೆ.ಕಾಲೇಜಿನ ಕೊನೆಯ ಸೆಮಿಸ್ಟರ್‍ನಲ್ಲಿದ್ದಾಗಲೇ ಚಿತ್ರಗಳಿಂದ ಅವಕಾಶಗಳು ಬರಲು ಆರಂಭಿಸಿದವು. ತಂದೆ ಪೊಲೀಸ್ ಇಲಾಖೆಯಲ್ಲಿ ಇದ್ದದರಿಂದ ಸಹಜವಾಗಿಯೇ ಪದವಿ ಮುಗಿಸು ಆ ಮೇಲೆ ನಟನೆ ಕಡೆಗೆ ಗಮನ ಹರಸಿ ಎನ್ನುವ ಸಲಹೆ ನೀಡಿದ್ದರು. 2010ರಲ್ಲಿ ಮೊದಲು ಒಪ್ಪಿಕೊಂಡ ಚಿತ್ರ ‘ನಮ್ ಏರಿಯಾಲ್ ಒಂದ್ ದಿನ’ . ಚಿತ್ರ ಬಿಡುಗಡೆಯಾಯಿತು. ಬಿಡುಗಡೆಯ ಮೊದಲ ದಿನ ಕಪಾಲಿ ಚಿತ್ರಮಂದಿರದಲ್ಲಿ ನನ್ನನ್ನು ನಾನೇ ಮೊದಲ ಬಾರಿಗೆ ಹಿರಿ ತೆರೆಯ ಮೇಲೆ ನೋಡಿ ಕುಣಿದು ಕುಪ್ಪಳಿಸಿದ್ದೆ. ಅಂದಿನಿಂದಲೇ ಚಿತ್ರರಂಗದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದೆ. ಮೊದಲ ಚಿತ್ರ ಅಂದುಕೊಂಡಷ್ಟು
ಯಶಸ್ಸು ಕಾಣಲಿಲ್ಲ. ಆದರೆ ನನ್ನ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

• ನಂತರದ ಅವಕಾಶಗ ಬಗ್ಗೆ ಹೇಳುವುದಾದರೆ?

ನಮ್ ಏರಿಯಾಲ್ ಒಂದ್ ದಿನ ಚಿತ್ರ ಬಿಡುಗಡೆಯಾದ ಬಳಿಕ 2011ರಲ್ಲಿ ‘ವಿನಾಯಕ ಗೆಳೆಯರ ಬಳಗ’ ಮತ್ತು ನಂತರ 2012 ರಲ್ಲಿ ತುಘಲಕ್ ಚಿತ್ರಗಳಲ್ಲಿ ನಟಿಸಿದೆ. ಇದೇ ವೇಳೆ ನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶನದ ‘ಮಾತು ಕಥೆ’ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಅದ್ಯಾಕೋ ಚಿತ್ರ ತೆರೆಗೆ ಬರಲಿಲ್ಲ, 2012ರಲ್ಲಿ ಭಕ್ತಿ ಪ್ರಧಾನ ಚಿತ್ರ ‘ಭಕ್ತಶಂಕg”À ಚಿತ್ರದಲ್ಲಿ ನಟಿಸಿದೆ. ಈ ಚಿತ್ರ ಟಿವಿಯಲ್ಲಿ ಮಾತ್ರ ಬಿಡುಗಡೆಯಾಗಿತ್ತು.

• ಮೊದಲ ಯಶಸ್ಸಿನ ಅನುಭವದ ಕುರಿತು ಮಾಹಿತಿ ಹಂಚಿಕೊಳ್ಳುವುದಾದರೆ

ಚಿತ್ರರಂಗಕ್ಕೆ ಬಂದು ನಾಲ್ಕೈದು ಚಿತ್ರಗಳನ್ನು ಮಾಡಿದ ಬಳಿಕ ಆರ್. ಚಂದ್ರು ನಿರ್ದೇಶನ ಮತ್ತು ನಿರ್ಮಾಣದಲ್ಲಿ ನೆನಪಿರಲಿ ಪ್ರೇಮ್ ಜೊತೆ 2012ರಲ್ಲಿ ‘ಚಾರ್ ಮಿನಾರ್” ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ 203ರಲ್ಲಿ ಚಿತ್ರ ತೆರೆಗೆ ಬಂತು. ಪ್ರೇಕ್ಷಕರನ್ನು ಮೋಡಿ ಮಾಡಿತು. ಇದು ನನ್ನ ಸಿನಮಾ ಜೀವನದ ಮೊದಲ ಗೆಲುವು. ಅಲ್ಲಿಯ ತನಕ ನಟಿಸಿದ್ದ ಚಿತ್ರಗಳು ನನ್ನ ನಟನೆಯ ಬಗ್ಗೆ ಅಷ್ಟೇ ಪ್ರಶಂಸೆ ಬರುತ್ತಿತ್ತು. ಮೊದಲ ಬಾರಿಗೆ ಚಾರ್ ಮಿನಾರ್ ಗೆಲುವಿನ ಸಿಹಿ ತಂದುಕೊಟ್ಟಿತ್ತು.

• ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಮಿಸ್ಸಾಗಿದ್ದು ಯಾಕೆ?

ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಸುನಿ ಅವರು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಯ ಕತೆ ಹೇಳಿದ್ದರು. ಚಾರ್ ಮಿನಾರ್ ಚಿತ್ರದಲ್ಲಿ ನಟಿಸುತ್ತಿದ್ದರಿಂದ ಆ ಚಿತ್ರದಲ್ಲಿ ನಟಿಸಲು ಆಗಲಿಲ್ಲ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿತ್ತು ಗೊತ್ತೇ ಇದೆ. ಅದಾದ ಬಳಿಕ 2014 ರಲ್ಲಿ ಸುನಿ ನಿರ್ದೇಶನದ ಮತ್ತೊಂದು ಚಿತ್ರ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ 2016 ರಲ್ಲಿ ಬಿಡುಗಡೆಯಾಯಿತು ಎಂದರು.

• ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಬಳಿಕ ಸಾಕಷ್ಟು ಅವಕಾಶ ಬಂದರೂ ಒಪ್ಪಿಕೊಳ್ಳದಿರಲು ಕಾರಣ?

2019ರಲ್ಲಿ ನವರಸ ನಾಯಕ ಜಗ್ಗೇಶ್ ಅವರೊಂದಿಗೆ ನಟಿಸಿದ “ಕಾಳಿದಾಸ ಕನ್ನಡ ಮೇಷ್ಟ್ರು” ಚಿತ್ರ ಬಿಡುಗಡೆಯಾಯಿತು. ಚಿತ್ರ ಕೂಡ ಯಶ¸ಸ್ವಿಯಾಯಿತು. ಈ ನಡುವೆ ಚಿತ್ರಗಳಿಂದ ಸಾಕಷ್ಟು ಅವಕಾಶಗಳು ಬಂದರೂ ಯಾವುದನ್ನು ಒಪ್ಪಿಕೊಳ್ಳಲಿಲ್ಲ, ಅದಕ್ಕೆ ಕಾರಣ ಬಯಸಿದ ಪಾತ್ರ, ಚಿತ್ರ, ಮತ್ತು ಕಥೆಗಳು ಬರದಿರುವುದೇ ಕಾರಣ ಹೊರತು ಬೇರೇನು ಇಲ್ಲ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಹೀಗಾಗಿ ಓದಿನ ಕಡೆ ಗಮನ ಹರಿಸಿದೆ.

• ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ನಂತರ ಮಾತುಕತೆಯಾಗಿದ್ದ ಸಿನಿಮಾಗಳು ಎಲ್ಲಿಗೆ ಬಂದವು.

ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಯಶಸ್ಸು ಗಳಿಸಿದ ನಂತರ ಕೆಲವು ಚಿತ್ರಗಳಿಗೆ ಸಹಿ ಹಾಕಿದೆ. ಇದರ ಜೊತೆಗೆ 3-4 ಚಿತ್ರ ಮಾಡುವ ಸಂಬಂಧ ಮಾತುಕತೆ ನಡೆಸಿದ್ದೆ. ಕೋವಿಡ್ ಸೋಂಕು ಜಗತ್ತಿಗೆ ಅಪ್ಪಳಿಸಿದ ಪರಿಣಾಮ ಕನ್ನಡ ಚಿತ್ರರಂಗವನ್ನೂ ಬಿಡಲಿಲ್ಲ. ಲಾಕ್‍ಡೌನ್‍ನಿಂದಾಗಿ ಚಿತ್ರೋದ್ಯಮದಲ್ಲಿ ಕೆಲಸ ಕಾರ್ಯಗಳು ನಿಂತವು. ಸಿನಿಮಾಗಳು ಆರಂಭವಾಗುವುದೇ ಅಪರೂಪವಾಯಿತು, ಆದರೂ ಭರವಸೆ ಕಳೆದುಕೊಳ್ಳಲಿಲ್ಲ. ಸಿನಿಮಾದ ಮೇಲೆ ಇದ್ದ ಒಲವು ಮತ್ತು ನಂಬಿಕೆ ಭವಿಷ್ಯದಲ್ಲಿ ಸಿನಿಮಾ ಮಾಡುತ್ತೇನೆ ಎನ್ನುವ ಆಶಾಭಾವನೆ ಮೂಡಿಸಿತ್ತು. ಉತ್ಸಾಹ ಕಳೆದುಕೊಳ್ಳದ ಹಿನ್ನೆಲೆಯಲ್ಲಿ ಇಂದು ಒಂದರ ಮೇಲೆ ಒಂದು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ.

ಕಾಳಿದಾಸ ಕನ್ನಡ ಮೇಷ್ಟ್ರು ನಂತರ ಶುಭಮಂಗಳ ಎಂಬ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದೆ. ಕೋವಿಡ್ ಪರಿಸ್ಥಿತಿ ಮತ್ತು ಚಿತ್ರಮಂದಿರದ ಅಲಭ್ಯತೆಯಿಂದಾಗಿ ಬಿಡುಗಡೆ ಮಾಡಲು ಬಹಳ ಸಮಯ ತೆಗೆದುಕೊಂಡಿತು. ಲಾಕ್‍ಡೌನ್‍ಗೆ ಸ್ವಲ್ಪ ನಡೆದ 2020 ರ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಂಡು ಮೆಚ್ಚುಗೆ ಪಡೆದಿತ್ತು 2020 ರಲ್ಲಿ ಬಿಡುಗಡೆಯಾಗಬೇಕಾಗಿದ್ದ ಶುಭ ಮಂಗಳ ಚಿತ್ರವನ್ನು 2021ಕ್ಕೆ ಮುಂದೂಡಬೇಕಾಯೊತು ಕೊನೆಗೆ ಂತಿಮವಾಗಿ 2022 ರಲ್ಲಿ ಬಿಡುಗಡೆಯಾಯಿತು.

• ಛೂ ಮಂತರ್ ಚಿತ್ರದ ಕುರಿತು ಮಾಹಿತಿ ನೀಡಬಹುದಾದರೆ

2021 ರಲ್ಲಿ ಛೂಮಂತರ್ ಚಿತ್ರಕ್ಕೆ ಸಹಿ ಹಾಕಿದೆ. ಇದೇ ವೇಳ ಶಿವಾಜಿ ಸುರತ್ಕಲ್ -2 ಕೂಡ ಏಕಕಾಲದಲ್ಲಿ ಚಿತ್ರೀಕರಣ ಆರಂಭವಾಯಿತು, ಶಿವಾಜಿ ಸೂರತ್ಕಲ್-2 ಚಿತ್ರದಲ್ಲಿ ಡಿಸಿಪಿ ದೀಪಾ ಕಾಮತ್ ಪಾತ್ರ ಮಾಡಿದ್ದೇನೆ .ಒಳ್ಳೆಯ ಚಿತ್ರ. ಚಿತ್ರ ಬಿಡುಗಡೆಯಾಗಿ ಯಶಸ್ಸು ಗಳಿಸಿದೆ. ಇತ್ತೀಚೆಗಷ್ಟೇ 50 ದಿನ ಪೂರ್ಣಗಿಳಿಸಿದೆ, ಇದು ಖುಷಿಯ ಸಂಗತಿ. ಇನ್ನೂ ಇತ್ತೀಚೆಗಷ್ಟೇ ಛೂಮಂತರ್ ಚಿತ್ರಕ್ಕೆ ಡಬ್ಬಿಂಗ್ ಪೂರ್ಣಗೊಳಿಸಿದ್ದೇನೆ. ಇದೊಂದು ಹಾರರ್ ಮತ್ತು ಕಾಮಿಡಿ ಚಿತ್ರ. ಶರಣ್ ಸರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ, ಈ ವರ್ಷದ ಜನವರಿಯಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಸಹ ಬಿಡುಗಡೆ ಮಾಡಿದ್ದೇವೆ. ಚಿತ್ರ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದೇನೆ.

• ರವಿಚಂದ್ರನ್ ಅವರೊಂದಿಗೆ ಮೊದಲ ಚಿತ್ರ, ಅನುಭವ ಹೇಗಿತ್ತು?

ಗುರುರಾಜ್ ಕುಲಕರ್ಣಿ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ “ದಿ ಜಡ್ಜ್ ಮೆಂಟ್ “ ಚಿತ್ರದಲ್ಲಿ ರವಿಚಂದ್ರನ್ ಸರ್ ಜೊತೆಗೆ ಮೊದಲ ಬಾರಿಗೆ ತೆರೆಗೆ ಹಂಚಿಕೊಂಡಿದ್ದೇನೆ. ಇದು ನಿಜಕ್ಕೂ ಖುಷಿಯ ಸಂಗತಿ. ಈ ಚಿತ್ರದಲ್ಲಿ ನಾನು ರಾಜ್ಯ ಶಾಸ್ತ್ರ ಉಪನ್ಯಾಸಕಿಯ ಪಾತ್ರ ಮಾಡುತ್ತಿದ್ದೇನೆ. “ದಿ ಜಡ್ಜೆ ಮೆಂಟ್” ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ. ಇದೊಂದು ನ್ಯಾಯಾಲಯದ ಸುತ್ತ ಸಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಮಾಹಿತಿ ಹಂಚಿಕೊಂಡರು.

• ಪಿಎಚ್‍ಡಿ ತೆಗೆದು ಕೊಂಡಿದ್ದೀರಿ ಅಲ್ಲವೇ

ಒಳ್ಳೆಯ ಕಥೆಗಳು ಪಾತ್ರಕ್ಕಾಗಿ ಕೆಲ ಸಮಯ ಕಾಯುತ್ತಿದೆ, ಈ ಬಿಡುವಿನ ವೇಳೆ ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದರಿಂದ ಸಮಯ ಸದುಪಯೋಗ ಪಡಿಸಿಕೊಳ್ಳಬೇಕಾಗಿತ್ತು. ಇದಕ್ಕಾಗಿ ಪಿಎಚ್ ಡಿ ತೆಗೆದುಕೊಂಡೆ. ಸಿನಿಮಾ ಇಲ್ಲದಿದ್ದಾಗ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತೇನೆ.ಅಲ್ಲಿನ ಆಚಾರ ವಿಚಾರ ಸಂಸ್ಕøತಿಯನ್ನು ತಿಳಿಯುವ ಕೆಲಸ ಮಾಡುತ್ತೇನೆ.

• ನಿಮ್ಮ ಹವ್ಯಾಸ ಏನು?
ಸಿನಿಮಾ ಹೊರತಾಗಿ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಇದರ ಜೊತೆಗೆ ದೇಶ ಸುತ್ತುವುದು. ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಎನ್ನುವುದು ಬಹುಷಃ ಪ್ರೇರಣೆ ಇರಬಹುದು. ಪುಸ್ತಕ ಓದುವುದರಲ್ಲಿ ಹೆಚ್ಚು ಆಸಕ್ತಿ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin