Meena-Keshav duo's 'OTP' stirs in 'Nandagokula'

ನಂದಗೋಕುಲ’ದಲ್ಲಿ ಮೀನಾ-ಕೇಶವ ಜೋಡಿಯಒಟಿಪಿ’ ಸಂಚಲನ - CineNewsKannada.com

ನಂದಗೋಕುಲ’ದಲ್ಲಿ ಮೀನಾ-ಕೇಶವ ಜೋಡಿಯಒಟಿಪಿ’ ಸಂಚಲನ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕೌಟುಂಬಿಕ ಧಾರಾವಾಹಿ `ನಂದಗೋಕುಲ’ ಇದೀಗ ಅತ್ಯಂತ ರೋಚಕ ಹಾಗೂ ಹಾಸ್ಯಭರಿತ ತಿರುವುಗಳೊಂದಿಗೆ ವೀಕ್ಷಕರ ಗಮನ ಸೆಳೆಯುತ್ತಿದೆ.

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿಯು ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯೋಗಗಳ ಮೂಲಕ ಮನೆಮಾತಾಗುತ್ತಿದೆ. ಧಾರಾವಾಹಿಯಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ವಿಷಯವೆಂದರೆ ಅದು `ಒಟಿಪಿ’. ಹೌದು, ನಂದಗೋಕುಲದ ಮನೆಯೊಳಗೆ ಈಗ ಈ ಒಟಿಪಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಕಥೆಗೆ ಹೊಸ ಆಯಾಮ ನೀಡಿದೆ.

ಸಾಮಾನ್ಯವಾಗಿ ಬ್ಯಾಂಕಿಂಗ್ ಅಥವಾ ಡಿಜಿಟಲ್ ವ್ಯವಹಾರಗಳಲ್ಲಿ ಬಳಕೆಯಾಗುವ ಒಟಿಪಿ' ಪದ ಇಲ್ಲಿ ಸಂಪೂರ್ಣವಾಗಿ ಭಿನ್ನವಾದ ಅರ್ಥ ಪಡೆದುಕೊಂಡಿದೆ. ಧಾರಾವಾಹಿಯ ಪ್ರಮುಖ ಜೋಡಿಗಳಾದ ಮೀನಾ ಮತ್ತು ಕೇಶವ ನಡುವೆ ಈ ಒಟಿಪಿ ವಿಚಾರ ಅತ್ಯಂತ ಮಜವಾಗಿ ಸಾಗುತ್ತಿದೆ. ಇದನ್ನು ಕೇಳಿದ ತಕ್ಷಣ ಎಲ್ಲರಿಗೂ ಒನ್ ಟೈಮ್ ಪಾಸ್‍ವರ್ಡ್ ಇರಬಹುದೆಂಬ ಕುತೂಹಲ ಮೂಡುವುದು ಸಹಜ. ಆದರೆ ಮೀನಾ ಮತ್ತು ಕೇಶವನ ಪ್ರೀತಿಯ ಭಾಷೆಯಲ್ಲಿ ಈ ಒಟಿಪಿ ಎಂದರೆಒನ್ ಟೈಮ್ ಪಪ್ಪಿ’ ಎಂದರ್ಥ. ಈ ಜೋಡಿ ಕ್ಯೂಟ್ ರೊಮ್ಯಾನ್ಸ್‍ಗೆ ಇದೀಗ ಸೀಕ್ರೆಟ್ ಕೋಡ್‍ವರ್ಡ್ ಸಾಥ್ ನೀಡಿದೆ.

ಒಟಿಪಿ' ವಿಚಾರ ಸದ್ಯಕ್ಕೆ ನಂದಕುಮಾರ್ ಮನೆಯವರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮೀನಾ ಮತ್ತು ಕೇಶವ ಪರಸ್ಪರಒಟಿಪಿ’ ಕೊಡುವ ವಿಚಾರವಾಗಿ ಮಾತನಾಡಿಕೊಳ್ಳುತ್ತಿರುವುದು ಮನೆಯವರಿಗೆ ದೊಡ್ಡ ರಹಸ್ಯವಾಗಿ ಪರಿಣಮಿಸಿದೆ. ಮನೆಯವರೆಲ್ಲರೂ ಈ ಒಟಿಪಿ ಅಂದರೆ ಏನಿರಬಹುದು ಎಂದು ತಲೆಕೆಡಿಸಿಕೊಳ್ಳುತ್ತಿದ್ದು, ಸನ್ನಿವೇಶ ಹೇಗಿದೆಯೆಂದರೆ ಎಲ್ಲರೂ ಒಬ್ಬೊಬ್ಬರಾಗಿ `ನಾನು ಕೊಡ್ತೀನಿ, ನಾನು ಕೊಡ್ತೀನಿ’ ಎನ್ನುತ್ತಿದ್ದಾರೆ. ಯಾರಿಗೂ ಇದರ ಅಸಲಿ ಅರ್ಥ ತಿಳಿಯದೆ, ಎಲ್ಲರೂ ಒಟಿಪಿ ನೀಡಲು ಮುಗಿಬೀಳುತ್ತಿರುವುದು ಧಾರಾವಾಹಿಯಲ್ಲಿ ಹಾಸ್ಯದ ಹೊಳೆಯನ್ನೇ ಹರಿಸುತ್ತಿದೆ.

ಮೀನಾ ಮತ್ತು ಕೇಶವ ಪರಸ್ಪರ ಪ್ರೀತಿಯಿಂದ ಸಂವಹನ ನಡೆಸಲು ಬಳಸುತ್ತಿರುವ ರಹಸ್ಯ ಕೋಡ್‍ವರ್ಡ್ ಇನ್ನೂ ಮನೆಯವರ ಮಟ್ಟಿಗೆ ಗುಟ್ಟಾಗಿಯೇ ಉಳಿದಿರುವುದು ಕಥೆಗೆ ಹೊಸ ಟ್ವಿಸ್ಟ್ ನೀಡಿದೆ. ಅಷ್ಟೂ ದಿನ ಕದ್ದುಮುಚ್ಚಿ ನಡೆಯುತ್ತಿದ್ದ ಈ ರೊಮ್ಯಾಂಟಿಕ್ ಆಟ ಸದ್ಯ ಮನೆಯವರ ಕುತೂಹಲದ ಕೇಂದ್ರಬಿಂದುವಾಗಿದೆ. ಈ ಜೋಡಿಯ ನಡುವಿನ ಇಂತಹ ಸಣ್ಣ ಪುಟ್ಟ ತುಂಟಾಟಗಳು ಮತ್ತು ಕಾಮಿಡಿ ಸನ್ನಿವೇಶಗಳು ಸೀರಿಯಲ್ ವೀಕ್ಷಕರಿಗೂ ಸಹ ಭರ್ಜರಿ ಮನರಂಜನೆ ನೀಡುತ್ತಿವೆ. ಈ `ಒಟಿಪಿ’ ವಿಚಾರವೇ ಸಾಮಾಜಿಕ ಜಾಲತಾಣಗಳಲ್ಲೂ ಈಗ ಅಭಿಮಾನಿಗಳ ನಡುವೆ ಸಾಕಷ್ಟು ಹಾಸ್ಯಮಯ ಚರ್ಚೆಗಳನ್ನು ಹುಟ್ಟುಹಾಕಿದೆ.

ಇನ್ನೊಂದೆಡೆ ಕಥೆಯಲ್ಲಿ ಹೊಸ ಸೊಸೆ ಪ್ರಿಯಾಳ ಎಂಟ್ರಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಪ್ರಿಯಾ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ತವಕದಲ್ಲಿ ವಿಭಿನ್ನವಾಗಿ ವರ್ತಿಸುತ್ತಿದ್ದು, ಮನೆಯ ಇತರ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿದ್ದಾಳೆ. ಅಮಾಯಕತೆಯ ಮುಖವಾಡ ಧರಿಸಿರುವ ಅವಳು, ಸದ್ದಿಲ್ಲದೆ ಮನೆಯವರ ನಡುವೆ ವೈಮನಸ್ಸು ತಂದಿಡುವ ಕೆಲಸ ಮಾಡುತ್ತಿದ್ದಾಳೆ. ಇದರಿಂದ ನಂದಗೋಕುಲದ ಮನೆಯೊಳಗಿನ ಶಾಂತಿಯುತ ವಾತಾವರಣವು ಏರುಪೇರಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕಥೆಯಲ್ಲಿ ಯಾವ ರೀತಿಯ ತಿರುವುಗಳನ್ನು ಪಡೆಯಬಹುದು ಎಂಬ ಕುತೂಹಲ ಮೂಡಿಸಿದೆ.

ನಂದಗೋಕುಲ ಧಾರಾವಾಹಿಯು ಕೇವಲ ಮನರಂಜನೆಯನ್ನು ಮಾತ್ರವಲ್ಲದೆ, ಒಂದು ಫ್ಯಾಮಿಲಿ ಡ್ರಾಮಾದಲ್ಲಿ ಇರುವಂತಹ ಸಂಕೀರ್ಣ ಸಂಬಂಧಗಳನ್ನು ಮತ್ತು ಅವುಗಳ ನಡುವಿನ ವ್ಯತ್ಯಾಸಗಳನ್ನು ನೈಜವಾಗಿ ಚಿತ್ರಿಸುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಮ್ಮದೇ ಆದ ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೂ, ಒಟ್ಟಾಗಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಈ ಕಥೆ ಸಾರುತ್ತಿದೆ. ಭಾರತೀಯ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ತೋರಿಸುವಲ್ಲಿ ನಂದಗೋಕುಲ ಯಶಸ್ವಿಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin