“ರಾಸಾ”ಸಿಲ್ವರ್ ಜ್ಯುವೆಲ್ಲರಿ ಗೆ ಸ್ಯಾಂಡಲ್ ವುಡ್ ತಾರೆಯರ ಸಾಥ್
ಪ್ರೀಮಿಯಂ ಬೆಳ್ಳಿ ಆಭರಣ ಲೇಬಲ್ ರಾಸಾ ಜ್ಯುವೆಲ್ಲರಿ ಬೆಂಗಳೂರಿನ ಜಯನಗರದಲ್ಲಿ ಮೂರನೇ ಶಾಖೆ ಆರಂಭಿಸಿದೆ ಕನ್ನಡ ಚಲನಚಿತ್ರ ನಟಿ ಸುಧಾರಾಣಿ , ನಟಿ ಕಾರುಣ್ಯ ರಾಮ್ ಜೊತೆಗೆ ಜಯನಗರ ಕ್ಷೇತ್ರದ ಶಾಸಕರಾದ ಸಿಕೆ ರಾಮಮೂರ್ತಿ ಸಾಥ್ ನೀಡಿದರು
ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಗಣ್ಯರು, ಗ್ರಾಹಕರು ಮತ್ತು ಬೆಳ್ಳಿ ಆಭರಣ ಪ್ರಿಯರು ಭಾಗವಹಿಸಿದ್ದರು. 9ನೇ ಮುಖ್ಯ ರಸ್ತೆ, ಮೂರನೇ ಬ್ಲಾಕ್, ಜಯನಗರ ದಲ್ಲಿರುವ ಅಂಗಡಿಯು ಬೆಂಗಳೂರಿನ ಶೈಲಿಯ ಬಗ್ಗೆ ಕಾಳಜಿಯುಳ್ಳ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಕರಕುಶಲ, ಲೇಪಿತ ಬೆಳ್ಳಿ ಆಭರಣಗಳ ವಿಸ್ತಾರವಾದ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಎಂದು ಭರವಸೆ ಮೂಡಿಸಿದೆ ,
ಈಗಾಗಲೇ ರಾಸಾ ಸಂಸ್ಥೆಯ ಸಿಲ್ವರ್ ಜ್ಯುವೆಲ್ಲರಿ ಕಮರ್ಷಿಯಲ್ ಸ್ಟ್ರೀಟ್, ಎಚ್ಎಸ್ಆರ್ ಲೇಔಟ್ ಮತ್ತು ಹೊಸದಾಗಿ ಜಯನಗರದಲ್ಲಿ ಸ್ಥಾಪಿತವಾಗಿವೆ ಮುಂದಿನ ದಿನಗಳಲ್ಲಿ ವಿಜಯನಗರ ಉದ್ಘಾಟನೆ ಮಾಡುವುದಾಗಿ ಶಾಪ್ ನ ಮಾಲೀಕರು ತಿಳಿಸಿದ್ದಾರೆ .
ಬೆಂಗಳೂರಿನ ಆಭರಣ ಪ್ರಿಯರಿಗೆ ಹೊಸ ತಾಣವಾಗುವ ಭರವಸೆಯನ್ನು ಜಯನಗರ ಅಂಗಡಿ ನೀಡಲಿದ್ದು, ಗುಣಮಟ್ಟದ ಕರಕುಶಲತೆ, ಸಂಪ್ರದಾಯ ಮತ್ತು ಕೈಗೆಟುಕುವ ಬೆಲೆಯನ್ನು ಒಂದೇ ಸೂರಿನಡಿಯಲ್ಲಿ ಸಮ್ಮಿಲನಗೊಳಿಸುತ್ತದೆ.

