‘ರಸಾನುಭವ” 2026’ ದಲ್ಲಿ ಸಾಂಸ್ಕೃತಿಕ ನೃತ್ಯಕಲೆಗಳ ಸಂಗಮ
ನಟೇಶ ನೃತ್ಯಾಲಯ ಆಯೋಜಿಸಿದ್ದ ಭಾರತೀಯ ವಿವಿಧ ನೃತ್ಯ ಪ್ರಾಕಾರಗಳ ಸಂಗಮವಾಗಿ ಮೂಡಿಬಂದ `ರಸಾನುಭವ 2026′ ಕಾರ್ಯಕ್ರಮ ನೃತ್ಯ ಪ್ರಿಯರ ಗಮನ ಸೆಳೆಯಿತು.
ಶ್ರೀ ಹರಿ ಮತ್ತು ತಂಡದಿಂದ ಕಥಕ್ ಪ್ರದರ್ಶನ, ನಯನಾ ಶ್ರೀನಿವಾಸನ್ ಭರತನಾಟ್ಯ, ದೇವೇಶ್ ನಾಯರ್ ಕುಚಿಪುಡಿ ನೃತ್ಯ ಮತ್ತು ಐಶ್ವರ್ಯ ಒಡಿಸಿ ನೃತ್ಯ ಪ್ರದರ್ಶನ ಗಮನ ಸೆಳೆದವು. ಅಲ್ಲದೆ “ಪ್ರದರ್ಶನ ಕಲೆಗಳಲ್ಲಿ ಉದ್ಯೋಗಾವಕಾಶಗಳು” ಎಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಡಾ.ಪ್ರಿಯಾಶ್ರೀ ರಾವ್ ಭಾಗವಹಿಸಿ, ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ವೃತ್ತಿ ನಿರ್ಮಾಣದ ಸಾಧ್ಯತೆಗಳು, ಸವಾಲುಗಳು ಮತ್ತು ಭವಿಷ್ಯದ ದಿಕ್ಕುಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಿ.ಪ್ರವೀಣ್ ಕುಮಾರ್ ಭರತನಾಟ್ಯ, ನೀನಾ ಪ್ರಸಾದ್ ಮೋಹಿನಿಯಾಟಂ ಮತ್ತು ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್ ತಂಡದಿಂದ ಪ್ರದರ್ಶಿಸಲ್ಪಟ್ಟ ಗೋವರ್ಧನ ಲೀಲೆ' ಮಹಾ ನೃತ್ಯರೂಪಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.ಗೋವರ್ಧನ ಲೀಲೆ’ ಪ್ರದರ್ಶನವು ತನ್ನ ವೈಭವ, ನಿರೂಪಣೆ ಮತ್ತು ಭಾವಗಾಢತೆಯಿಂದ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಪಡೆದುಕೊಂಡಿತು.
`ರಸಾನುಭವ 2026′ ದಿನಪೂರ್ತಿ ನಡೆದ ಸಾಂಸ್ಕೃತಿಕ ಯಾತ್ರೆಯಾಗಿದ್ದು, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಉತ್ತೇಜನದತ್ತ ನಟೇಶ ನೃತ್ಯಾಲಯ ಸಂಸ್ಥೆಯ ದೃಢ ನಿಲುವಿಗೆ ಸಾಕ್ಷಿಯಾಗಿದೆ.

