Bharat Laxmikant's innovative attempt at “Dhwandva screen Ready to come

ಭರತ್ ಲಕ್ಷ್ಮಿಕಾಂತ್ ವಿನೂತನ ಪ್ರಯತ್ನದ “ಧ್ವಂದ್ವ ತೆರೆಗೆಬರಲು ಸಿದ್ದ - CineNewsKannada.com

ಭರತ್ ಲಕ್ಷ್ಮಿಕಾಂತ್ ವಿನೂತನ ಪ್ರಯತ್ನದ “ಧ್ವಂದ್ವ ತೆರೆಗೆಬರಲು ಸಿದ್ದ

ಯುವ ಪ್ರತಿಭಾನ್ವಿತ ನಿರ್ದೇಶಕ ಭರತ್ ಲಕ್ಷ್ಮಿಕಾಂತ್ ವಿಭಿನ್ನ ಕಥಾ ಹಂದರ ಮುಂದಿಟ್ಟುಕೊಂಡು ನಿರ್ದೇಶಿಸಿರುವ “ದ್ವಂದ’ ಚಿತ್ರ ಇದೇ 22ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಸ್ನೇಹಿತರ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದು ವಿಭಿನ್ನ ಕಥಾನಕದ ಮೂಲಕ ಕನ್ನಡ ಪ್ರೇಕ್ಷಕರ ಜನ ಮನ ಗೆಲ್ಲಲು ಭರತ್ ಮತ್ತವರ ತಂಡ ಮುಂದಾಗಿದೆ.ಬಹು ತಾರಾಗಣದ ಧ್ವಂದ್ವ ಚಿತ್ರದಲ್ಲಿ ಅನಿತಾ ಭಟ್, ತಿಲಕ್, ಶೋಭರಾಜ್, ದಿನೇಶ್ ಮಂಗಳೂರು, ರಾಘು ರಮಣಕೊಪ್ಪ, ಸೇರಿದಂತೆ ಹಿರಿ ಕಿರಿಯ ಕಲಾವಿದರು ಇದ್ದಾರೆ.

ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ನಿರ್ದೇಶಕ ಭರತ್ ಲಕ್ಷ್ಮಿ ಕಾಂತ್, ಚಿತ್ರ ನಿರ್ದೇಶನ ಆರೆಂಟು ವರ್ಷದ ಕನಸು. ಚಿತ್ರವನ್ನು ಇದೇ ವಾರ ತೆರೆಗೆ ಬರಲಿದೆ. ಒಂದು ದಿನದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ನಡೆಯುವ ಕಥೆಯನ್ನು ಮುಂದಿಟ್ಡುಕೊಂಡು ಸಿನಿಮಾ ಮಾಡಲಾಗಿದೆ. ವಿಭಿನ್ನ ಸಮಸ್ಯೆಯಿಂದ ಬಳಲುವ ಹುಡುಗಿಯನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುತ್ತಾರೆ ಎನ್ನುವುದು ಚಿತ್ರದ ತಿರುಳು ಎಂದರು.

ಕಾಯಿಲೆ ಸೇರಿದಂತೆ ಸೈನ್ಸ್ ಪಿಕ್ಷನ್ ಸೇರಿದಂತೆ ನಾಲ್ಕು ಹಂತದಲ್ಲಿ ನಡೆಯಲಿದೆ. ಚಿತ್ರವನ್ನು ಮೂಡಿಗೆರೆ,ಚಿಕ್ಕಮಗಳೂರು, ಸಕಲೇಶಪುರ, ಊಟಿ, ಬೆಂಗಳೂರು, ಸೇರಿದಂತೆ 37 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಲ್ಪನೆಯನ್ನು ಮುಂದಿಟ್ಟುಕೊಂಡು ನಡೆಯುವ ಘಟನೆಯ ಚಿತ್ರ ಎಲ್ಲರ ಸಹಕಾರವಿರಲಿ ಎಂದರು.

ನಟಿ ಅನಿತಾ ಭಟ್ ಮಾತನಾಡಿ, ಸಚಿವರೊಬ್ಬರ ಮಗಳ ಪಾತ್ರ. ರಾಜಕಾರಣಿಯ ಉತ್ತರಾಧಿಕಾರಿ ಪಾತ್ರ ಚೆನ್ನಾಗಿದೆ.ಚಿತ್ರ ನೋಡಿ ಹರಸಿ. ಇದುವರೆಗೂ ಮಾಡಿರದ ವಿಭಿನ್ನ ಪಾತ್ರ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ನಟ ತಿಲಕ್ ಜೊತೆ ನನ್ನ ಕಾಂಬಿನೇಷನ್ ಇಲ್ಲ. ಒಳ್ಳೆಯ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ. ಹೊಸ ಹೊಸ ಪ್ರಯತ್ನಗಳಿಗೆ ಪ್ರೇಕ್ಷಕರ ಕೈ ಹಿಡಿಯಲಿದ್ದಾನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಟ ತಿಲಕ್ ಮಾತನಾಡಿ, ಚಿತ್ರದಲ್ಲಿ ನನ್ನದು ಒಳ್ಳೆಯ ಮತ್ತು ಕೆಟ್ಟ ಪಾತ್ರದಲ್ಲಿ ನೋಡಬಹುದು. ಹೊಸಬರ ಚಿತ್ರಗಳು ತೆರೆಗೆ ಬರುವುದು ಖುಷಿ ಆಗಿದೆ. ಪ್ರೀತಿ ಬೆಂಬಲ ಇರಲಿ ಎಂದರು.

ನಟಿ ಆಸಿಯಾ ಫಿರ್ಧೋಸ್ ಮಾತನಾಡಿ, ಕಿರುತೆರೆಯಲ್ಲಿ ನಟಿಸುತ್ತಿದ್ದ ನನಗೆ ದ್ವಂದ ಮೊದಲ ಚಿತ್ರ. ಒಳ್ಳೆಯ ಪಾತ್ರ ಸಿಕ್ಕಿದೆ. ವಿಭಿನ್ನ ಕಾಯಿಲೆಯ ಸಮಸ್ಯೆಯಿಂದ ಬಳಲುವ ಪಾತ್ರ. ನಿರ್ದೇಶಕರು ಹೇಳಿದ ಹಾಗೆ ನಟಿಸಿದ್ದೇನೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ಕಲಾವಿದ ದಿನೇಶ್ ಮಂಗಳೂರು ಮಾತನಾಡಿ ಚಿತ್ರ ಈ ವಾರ ಬಿಡುಗಡೆಗೆಯಾಗಲಿದೆ. ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಹೆಚ್ಚಿಸಿದೆ. ಹೊಸಬರ ಜೊತೆ ತುಂಬಾ ಚೆನ್ನಾಗಿದೆ. ಮೇಕಿಂಗ್ ಚೆನ್ನಾಗಿದೆ ಎಲ್ಲರ ಸಹಕಾರವಿರಲಿ ಎಂದು ಕೇಳೀಕೊಂಡರು

ಚಿತ್ರದ ವಿತರಣೆಯ ಜವಾದ್ದಾರಿ ಯನ್ನು ವೆಂಕಟ್ ಗೌಡ ಹೊತ್ತಿದ್ದಾರೆ .ಪ್ರದೀಪ್ ಕುಮಾರ್ ಸೇರಿದಂತೆ ಸ್ನೇಹಿತರು ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ ಆಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin