"Royal" song released: DBoss hailed by celebrities

” ರಾಯಲ್ ” ಹಾಡು ಬಿಡುಗಡೆ : ಸೆಲೆಬ್ರಿಟಿಗಳಿಂದ ಡಿಬಾಸ್ ಜಯಘೋಷ - CineNewsKannada.com

” ರಾಯಲ್ ” ಹಾಡು ಬಿಡುಗಡೆ :  ಸೆಲೆಬ್ರಿಟಿಗಳಿಂದ ಡಿಬಾಸ್ ಜಯಘೋಷ

ಕನ್ನಡದ ಪ್ರತಿಭಾನ್ವಿತ ‌ನಿರ್ದೇಶಕ ದಿನಕರ್ ತೂಗುದೀಪ ಹಲವು ವರ್ಷದ ಬಳಿಕ ಆಕ್ಷನ್ ಕಟ್ ಹೇಳುತ್ತಿರುವ ವಿರಾಟ್ ಹಾಗು ಸಂಜನಾ ಆನಂದ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿರುವ ” ರಾಯಲ್‌” ಚಿತ್ರದ 2 ನೇ ಹಾಡು ಬಿಡುಗಡೆಯಾಗಿದ್ದು ಕುತೂಹಲ ಹೆಚ್ಚು ಮಾಡಿದೆ.

ಟೈಟಲ್ ಅಷ್ಟೇ ಅಲ್ಲ ಪ್ರಮೋಷನ್‌ ನಲ್ಲೂ ” ರಾಯಲ್ ” ಅಂತೇಳಿ, ರಾಯಲ್ ಸಿನಿಮಾದ ಪ್ರಮೋಷನ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡ್ತಿದೆ. ದಿನಕರ್ ತೂಗುದೀಪ ನಿರ್ದೇಶನದ, ಜಯಣ್ಣ ಭೋಗೇಂದ್ರ ನಿರ್ಮಾಣದ “ರಾಯಲ್ ” ಚಿತ್ರದ 2ನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಈ ವೇಳೆ ಡಿ ಬಾಸ್ ಜಯಘೋಷ ಮೊಳಗಿದೆ.

ಹಾಡು ಬಿಡುಗಡೆಗೂ ಮುನ್ನ ಇಡೀ ಚಿತ್ರತಂಡ ತುಮಕೂರು ಸಿದ್ದಗಂಗೆ ಮಠಕ್ಕೆ ಹೋಗಿ ಗೋವಿಗೆ ನಮಸ್ಕರಿಸಿ, ಶ್ರೀಗಳ ಪಾದ ಸ್ಪರ್ಶಿಸಿ ರಾಯಲ್ ಆಗಿ ಪ್ರಾರ್ಥನೆ ಮಾಡಿದ್ದು ವಿಶೇಷವಾಗಿತ್ತು.

ರಾಯಲ್ ಸಿನಿಮಾದ ಟಾಂಗು ಟಾಂಗು ಹಾಡನ್ನು ವಿದ್ಯಾರ್ಥಿಗಳಿಂದಲೇ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. , ವಿದ್ಯಾರ್ಥಿಗಳು ರಾಯಲ್‌ ಚಿತ್ರದ ನಾಯಕ ನಟ ವಿರಾಟ್ ಹಾಗೂ ನಟಿ ಸಂಜನಾ ಆನಂದ್ ಜೊತೆ ಸಖತ್ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದರು.

ಇದೇ ವೇಳೆ ನಿರ್ದೇಶಕ ದಿನಕರ್ ತೂಗುದೀಪ, ಸಂಗೀತ ನಿರ್ದೇಶಕ ಚರಣ್ ರಾಜ್. ಟಾಂಗು ಟಾಂಗು ಹಾಡಿ‌ನ ಸಾಹಿತಿ ಕವಿರಾಜ್ ಕೂಡ ಉಪಸ್ಥಿತರಿದ್ದರು

ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನಮಗ್ಯಾವುದೇ ಸಮಸ್ಯೆ ಇರಲಿ ಏನೇ ಇರಲಿ ಯಾವಾಗಲೂ ಬೆಂಬಲಿಸುತ್ತಿರುವ ಸೆಲೆಬ್ರೆಟೀಸ್ ಗೆ ಫ್ಯಾಮಿಲಿ ಮತ್ತು ದರ್ಶನ್ ಕಡೆಯಿಂದ ಪ್ರತಿಯೊಬ್ಬರಿಗೂ ಧನ್ಯವಾದ .. ಇಷ್ಟು ದಿನ ನಾನೆಲ್ಲೂ ಹೋಗಿರಲಿಲ್ಲ‌ ಕಾರಣ ಪರಿಸ್ಥಿತಿ. ಆದ್ರೆ ನಂಬಿ ಜಯಣ್ಣ ಭೋಗಣ್ಣ ದುಡ್ಡು ಹಾಕಿದ್ದಾರೆ ಇದು ಜವಾಬ್ದಾರಿ ಅದಕ್ಕಾಗಿ ಈ ವೇದಿಕೆಗೆ ಬಂದಿದ್ದೀನಿ. ನಮ್ಮ ಸಿನಿಮಾ‌ ಮಾತ್ರವಲ್ಲ‌ ಎಲ್ಲ ಕನ್ನಡ ಚಿತ್ರಗಳಿಗೂ ಹೀಗೆ ಸಪೋರ್ಟ್ ಮಾಡಿ ಎಂದರು

ಜೊತೆ ಜೊತೆಯಲಿ, ನವಗ್ರಹ, ಸಾರಥಿ ನಾನ್ ಹಿಟ್ ಮಾಡಿಲ್ಲ. ನಂಗೆ ಒಳ್ಳೆ ಸಿನಿಮಾವಷ್ಟೆ ಮಾಡೋಕೆ ಗೊತ್ತು ಹಿಟ್ ಮಾಡೋಕೆ ಗೊತ್ತಿಲ್ಲ. ಅಭಿಮಾನಿಗಳೇ ಹಿಟ್ ಮಾಡಿದ್ದು. ನಿಮಗೆ ಬೇಕಿರೋ ಅಷ್ಟು ಎಲಿಮೆಂಟ್ಸ್ ರಾಯಲ್ ನಲ್ಲಿದೆ ಈ ಸಿನಿಮಾ ಹಿಂದಿನ ಶಕ್ತಿ ಜಯಣ್ಣ ಭೋಗೇಂದ್ರ. ನನ್ನ ನಿರೀಕ್ಷೆಯನ್ನ ವಿರಾಟ್ ಸಂಜನಾ ಪೂರೈಸಿದ್ದಾರೆ ಎಂದರು

ಟಾಂಗು ಟಾಂಗು ಹಾಡು ಬರೆದಿರುವ ಕವಿರಾಜ್ ಮಾತನಾಡಿ, ಇದು ಪಕ್ಕಾ ರಾಯಲ್ ಸಾಂಗ್ ಕಾರಣ‌ ನಿರ್ದೇಶಕರು ರಾಯಲ್, ಸಂಗೀತ ನಿರ್ದೇಶಕರು ಕೂಡ ಪಕ್ಕಾ ರಾಯಲ್. ಜಯಣ್ಣ ಫಿಲ್ಮ್ ಕೂಡ ಪ್ರೊಡಕ್ಷನ್ ನಲ್ಲಿ ರಾಯಲ್. ಚರಣ್ ರಾಜ್ ಬೆಳವಣಿಗೆ ಖುಷಿ ಕೊಡುತ್ತೆ. ನನ್ನ ಆಪ್ತಮಿತ್ರ ದಿನಕರ್ ತೂಗುದೀಪ. ಇನ್ನೂ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ವೇದಿಕೆ ಮೇಲೆ‌ ಮಾತನಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.

ಇದೇ ವೇಳೆ ನಟ ವಿರಾಟ್ ಹಾಗೂ ನಟಿ ಸಂಜನಾ ಮಾತನಾಡಿ, ತುಮಕೂರು ಪ್ರೀತಿಗೆ ನಾ ಚಿರಋಣಿ. ಜಯಣ್ಣ ಬೋಗಣ್ಣ ಸರ್ ತುಂಬಾ ಖರ್ಚು ಮಾಡಿ ಈ ಹಾಡು ಮಾಡಿದ್ದಾರೆ.. ಎಲ್ಲರ ಸಪೋರ್ಟ್ ಹೀಗೆ ಇರಲಿ ಎಂದು ಕೇಳಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin