ಸಾಮಾಜಿಕ ಕಳಕಳಿಯ “ಧೃತಿ” ಚಿತ್ರ ಮೇ 8 ರಂದು ತೆರೆಗೆ
ಹೊಸ ಪ್ರತಿಭೆಗಳ ತಂಡ ಸೇರಿಕೊಂಡು ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ ಚಿತ್ರ “ಧೃತಿ” ಸಾಮಾಜಿಕ ಕಳಕಳಿ ಇಟ್ಟು ಮಹಿಳಾ ರಕ್ಷಣೆಯ ಬಗ್ಗೆ ಮಾಡಿದ ಸಿನಿಮಾ ಮೇ 8 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.

ಎಂ. ಜಗದೀಶ್. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಉದ್ದೇಶದಿಂದ “ಧೃತಿ” ಚಿತ್ರಕ್ಕೆ ನಿರ್ದೇಶನ, ನಿರ್ಮಾಣ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ
ನಿರ್ದೇಶಕ ಹಾಗೂ ನಿರ್ಮಾಪಕ ಜಗದೀಶ್ ಮಾತನಾಡಿ ಚಿಕ್ಕಂದಿನಿಂದಲೂ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ನನಗೆ. ಚಿತ್ರದ ಮೂಲಕ ಈಡೇರಿದೆ. ಆರು ವರ್ಷಗಳ ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ಆರಂಭವಾಗಿದ್ದು. ಮೊಬೈಲ್ನಲ್ಲೇ ಚಿತ್ರೀಕರಣ ಮಾಡುವ ಯೋಜನೆ ಇತ್ತು. ಆನಂತರ ಪತ್ನಿ ಹಾಗೂ ಸ್ನೇಹಿತರು ಸಹಕಾರ ನೀಡಿದರು. ಆನಂತರ ಚಿತ್ರವನ್ನು ಕ್ಯಾಮೆರಾದಲ್ಲಿ ಚಿತ್ರಿಸಲಾಯಿತು. ಚಿತ್ರೀಕರಣ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಛಾಯಾಗ್ರಾಹಕರು ವಿಧಿವಶರಾದರು. ಆಗ ನಾನೇ ಛಾಯಾಗ್ರಹಣದ ಬಗ್ಗೆ ತಿಳಿದುಕೊಂಡು ಆ ಜವಾಬ್ದಾರಿಯನ್ನು ನಿರ್ವಹಿಸಿದ್ದೆ. ಸುತ್ತಮುತ್ತ ನಡೆಯುವ ಹಾಗೂ ನಡೆದಿರುವ ಹೆಣ್ಣಿನ ಮೇಲಿನ ಶೋಷಣೆಯ ಬಗ್ಗೆ ಈ ಚಿತ್ರದ ಕಥೆ ಇದೆ. ಹಾಗಂತ ನಮ್ಮ ಚಿತ್ರದಲ್ಲಿ ಬರೀ ಶೋಷಣೆಯನ್ನೇ ತೋರಿಸಿಲ್ಲ. ಅದಕ್ಕೆ ಪರಿಹಾರವನ್ನು ತೋರಿಸಿದ್ದೇವೆ ಎಂದರು
ಪ್ರಶಾಂತ್ ಚಿತ್ರದ ನಾಯಕ. ಆಂಚಲ್ ನಾಯಕಿ. ಹಲವಾರು ನೂತನ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸನ್ನ ಕುಮಾರ್ ಅವರ ಸಂಗೀತ ಈ ಚಿತ್ರದ ಹೈಲೆಟ್. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ಮಾಣ ಕೂಡ ನನ್ನದೆ. ಮೇ 8 ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರ ನೋಡಿ ಎಂದರು

ನಾಯಕಿ ಆಂಚಲ್ ಮಾತನಾಡಿ ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಇಂತಹ ಒಳ್ಳೆಯ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ. “ಧೃತಿ” ನನ್ನ ಪಾತ್ರದ ಹೆಸರು. ಸಾಕಷ್ಟು ಸಮಸ್ಯೆ ಎದುರಾದರೂ “ಧೃತಿಗೆಡದೆ” ಎಲ್ಲವನ್ನು ಎದುರಿಸುವ ಪಾತ್ರ ನನ್ನದು ಎಂದು ಹೇಳಿದರು.
ನಾಯಕ ಪ್ರಶಾಂತ್ ಮಾತನಾಡಿ ಮೂಲತಃ ನೃತ್ಯ ಕಲಾವಿದ ಹಾಗೂ ನೃತ್ಯ ನಿರ್ದೇಶಕ. ರಂಗಭೂಮಿ ಕಲಾವಿದನೂ ಹೌದು. ಯಾವ ರೀತಿಯ ಪಾತ್ರದ ಮೂಲಕ ನಾನು ನಟನಾಗಿ ಚಿತ್ರರಂಗ ಪ್ರವೇಶಿಸಬೇಕೆಂದುಕೊಂಡಿದ್ದೆನೊ ಅದೇ ತರಹದ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ ಎಂದು ತಿಳಿಸಿದರು.
ಸಂಗೀತದ ಕುರಿತು ಪ್ರಸನ್ನ ಕುಮಾರ್ ಮಾಹಿತಿ ನೀಡಿದರು. ನಟರಾದ ಮನೋಜ್ ಕುಮಾರ್ ಹಾಗೂ ಮಧು ಮಂದಗೆರೆ ತಮ್ಮ ಪಾತ್ರದ ಕುರಿತು ಮಾತನಾಡಿದರು.


