ಮೂರು ದಶಕಗಳ ಬಳಿಕ ಹೊಸ ರಾಜ ರಾಣಿ
ಮೂರು ದಶಕಗಳ ಹಿಂದೆ ‘ರಾಜರಾಣಿ’ ಎನ್ನುವ ಸಿನಿಮಾವೊಂದು ತೆರೆಕಂಡಿತ್ತು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ‘ಇಟ್ಟಿಗೆ ಗೂಡಿನಲ್ಲಿ ರಾಜರಾಣಿ’ ಎಂಬ ಅಡಿಬರಹವಿದೆ.
ಬಳ್ಳಾರಿ ಮೂಲದ ರಣಧೀರ್ ಮೂಲತ: ಪ್ರೋಟೋಗ್ರಾಫರ್ ಒಂದು ಸಂದರ್ಭದಲ್ಲಿ ಕಿರುಚಿತ್ರಕ್ಕೆ ನಟಿಸುವ ಅವಕಾಶ ಸಿಕ್ಕಿದೆ. ಅಲ್ಲಿ ಸೈಕಲ್ ಹೊಡೆದುದರಿಂದ ಅವಮಾನವಾಗಿದೆ. ಇದನ್ನೆ ಛಾಲೆಂಜ್ ಆಗಿ ತೆಗೆದುಕೊಂಡಿದ್ದರಿಂದಲೇ ಮುಂದೆ ‘ಪುದಿಯವರುಗಳ್’ ತಮಿಳು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದರು.
ನಂತರ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ನಿರ್ದೇಶನ ಜತೆಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಶ್ರೀ ಚಾಮುಂಡೇಶ್ವರಿ ಮೂವಿ ಮೇಕರ್ಸ್ ಅಡಿಯಲ್ಲಿ ವಿಜಯ್ಬಳ್ಳಾರಿ ಮತ್ತು ನೇತ್ರಾವತಿ ಮಲ್ಲೇಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಮಧುಸುದನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಕಾಲ್ಪನಿಕ ಕಥೆಯು ಇಬ್ಬರು ನಾಯಕರುಗಳ ನಡುವೆ ಕಾಣೆಯಾದ ನಾಯಕಿಯ ಸುತ್ತ ನಡೆಯಲಿದೆ. ಸೆಸ್ಪೆನ್ಸ್ ಹಾಗೂ ಪ್ರೀತಿಯನ್ನು ಒಳಗೊಂಡ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಕಾಣೆಯಾದ ನಾಯಕಿಯು ಯಾರಿಗೆ ಒಲಿಯುತ್ತಾಳೆ ಎನ್ನುವ ನಿಗೂಢ ಅಂಶಗಳು ಇರಲಿದೆ.
ಮಂಡ್ಯ ಕಡೆಯ ರಿತನ್ಯಶೆಟ್ಟಿ ನಾಯಕಿ. ಜೀವನ್ ಉಪನಾಯಕ. ಉಳಿದಂತೆ ಗಿರಿಜಾಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್ವೆಂಕಟೇಶ್, ಗಿರೀಶ್ಜತ್ತಿ, ಮಂಜುಳಾನಾಯ್ಡು, ಚಂದ್ರಪ್ರಭ ಮುಂತಾದವರು ನಟಿಸಿದ್ದಾರೆ. ಸಾಹಿತ್ಯ-ಸಂಗೀತ ಸುಧನ್ಪ್ರಕಾಶ್. ಐದು ಹಾಡುಗಳ ಪೈಕಿ ಒಂದು ಗೀತೆಗೆ ರವಿತಪಸ್ವಿ ಸಾಹಿತ್ಯ ರಚಿಸಿದ್ದಾರೆ. ಛಾಯಾಗ್ರಹಣ ಮಧು, ಸಾಹಸ ಪುನೀತ್, ಸಂಕಲನ ನಿಶಿತ್ಪೂಜಾರಿ ಅವರದಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಕೋಲಾರ, ಮಾಲೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳು ಮುಗಿದಿದ್ದು, ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಚಿತ್ರವು ಹೋಗಲಿದೆ.