Review: Vidyapati is a pure entertainment, a laugh-out-loud film,

Review: ವಿದ್ಯಾಪತಿ, ಶುದ್ಧ ಮನರಂಜನೆಯ ರಸದೌತಣದ ನಗೆಬುಗ್ಗೆ - CineNewsKannada.com

Review: ವಿದ್ಯಾಪತಿ, ಶುದ್ಧ ಮನರಂಜನೆಯ ರಸದೌತಣದ ನಗೆಬುಗ್ಗೆ

ಚಿತ್ರ: ವಿದ್ಯಾಪತಿ
ನಿರ್ದೇಶನ : ಇಶಾಮ್, ಹಸೀನ್
ನಿರ್ಮಾಣ: ಡಾಲಿ ಪಿಕ್ಚರ್ಸ್
ತಾರಾಗಣ: ನಾಗಭೂಷಣ್, ಮಲೈಕಾ ವಸುಪಾಲ್, ಗರುಡ ರಾಮ್, ಧನಂಜಯ, ರಂಗಾಯಣ ರಘು, ಧರ್ಮಣ್ಣ ಕಡೂರು, ಗಿರಿ ಜೆಟ್ಟಿ, ಶ್ರೀವತ್ಸ, ಬಿಂಧು, ಪ್ರತೀಕ್ಷಾ ಮತ್ತಿತರರು
ರೇಟಿಂಗ್ : **** 4 / 5

ಸೂಪರ್ ಸ್ಟಾರ್ ಪತ್ನಿ ದುಡಿದ ದುಡ್ಡಿನಲ್ಲಿ ಶೋಕಿ ಮಾಡಿಕೊಂಡಿದ್ದ ಶೋಕಿವಾಲನ ಜೀವನದ ಏರಿಳಿತಗಳ ಜೊತೆಗೆ ಎಮೋಷನ್, ಆಕ್ಷನ್, ಸೆಂಟಿಮೆಂಟ್ ಹೂರಣದ ಜೊತೆಗೆ ನಗುವಿನ ಬುಗ್ಗೆ ತರಿಸುವ ಚಿತ್ರ ” ವಿದ್ಯಾಪತಿ”.
ಮನರಂಜನೆಯನ್ನೇ ಮುಖ್ಯವಾಗಿರಿಸಿಕೊಂಡು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೇ ಮಜುಗರವಿಲ್ಲದೆ ನೋಡಬಹುದಾದ ಹಾಸ್ಯದ ರಸದೌತಣದ ಚಿತ್ರವನ್ನು ಇಶಾಮ್, ಹಸೀನ್ ತಂಡ ಕಟ್ಟಿಕೊಟ್ಟಿದೆ. ಈ ಮೂಲಕ ಕನ್ನಡದಲ್ಲಿ ಬಹಳ ದಿನದ ನಂತರ ಮನೆ ಮಂದಿಯಲ್ಲಾ ಅಂಜಿಕೆ ಅಳುಕಿಲ್ಲದೆ ಮನಸಾರೆ ನಕ್ಕು ನಲಿಯಬಹುದಾದ ಚಿತ್ರ ಇದು.
ಇಂತಹದೊಂದು ಕಥೆಯಲ್ಲಿ ನಂಬಿಕೆ ಇಟ್ಟು, ಜೊತೆಗೆ ಪ್ರತಿಭೆಗಳನ್ನು ಪ್ರೋತ್ಸಾಹ ನೀಡಬೇಕು ಎನ್ನುವ ಉಮೇದಿನಲ್ಲಿ ಲಾಭ ನಷ್ಠದ ಲೆಕ್ಕಾಚಾರ ಹಾಕದೆ ಸದಭಿರುಚಿಯ ಕಥೆಗಳನ್ನು ಪ್ರೋತ್ಸಾಹಿಸುವ ಡಾಲಿ ಫಿಕ್ಚರ್ಸ್ ಉದ್ದೇಶ ಅಭಿನಂಧನೀಯ.
ಸ್ಟಾರ್ ನಟಿಯಾದರೂ ಅದರ ಹಮ್ಮು ಬಿಮ್ಮು ಇಲ್ಲದೆ ಮುಗ್ದತೆಯ ವಿದ್ಯಾ (ಮಲೈಕಾ ಮಸುಪಾಲ್). ದುಡಿದು ತಿನ್ನುವ ಬದಲು ಯಾವಾರಿಸಿ ತಿನ್ನುವ ಕಲೆ ಕರಗತ ಮಾಡಿಕೊಂಡ ಪತಿ ಸಿದ್ದು (ನಾಗಭೂಷಣ). ಗ್ಯಾಂಗ್ ಕಟ್ಟಿಕೊಂಡು ಹೆದರಿಸಿ ಬೆದರಿಸುವ ಜಗ್ಗು (ಗರುಡ ರಾಮ್), ಸ್ವಾಭಿಮಾನದಿಂದ ಜೀವನ ಕಟ್ಟಿಕೊಂಡ ಸಿದ್ದು ಪೋಷಕರು, ಈ ಮದ್ಯೆ ಆನಕೊಂಡ (ಧನಂಜಯ) ಪ್ರವೇಶ. ಹೀಗೆ ಒಂದಷ್ಟು ವಿಷಯಗಳ ಹದವರಿತ ಕಥೆ. ಅದಕ್ಕೊಪ್ಪುವ ಚಿತ್ರಕಥೆ, ಯಾವುದೂ ಅತಿಯಾಗಿಸಿದೆ ಎಲ್ಲವೂ ಇತ ಮಿತವಾದ ಸೀದಾ ಸಾದ ನಗುವಿನ ಅಲೆ ಎಬ್ಬಿಸುವ ಚಿತ್ರ ವಿದ್ಯಾಪತಿ.
ವಿದ್ಯಾ ಮಾಡಿರುವುದೇ ಆರೇ ಚಿತ್ರ. ಅದರಲ್ಲಿ ಮೂರು ಹಿಟ್. ಇನ್ಮೂರು ಸೂಪರ್ ಡೂಪರ್ ಹಿಟ್, ಆಕೆಯ ಕಾಲ್ ಶೀಟ್ ಪಡೆಯಲು ನಿರ್ಮಾಪಕರ ದಂಡು ತಾ ಮುಂದು ತಾಮುಂದು ಎಂದು ಮುಗಿಬಿದ್ದವರು, ಈ ನಡುವೆ ಸಿದ್ದು ನಟಿಯನ್ನು ಒಲೈಸಿಕೊಳ್ಳಲು ಮಾಡದ ತಂತ್ರಗಳಿಲ್ಲ, ಆಕೆಯ ಅಮಾಯಕತೆ ಬಂಡವಾಳ ಮಾಡಿಕೊಂಡು ಬಿಟ್ಟಿಗೆ ಹಾಕಿಕೊಂಡ ಚಾಣಾಕ್ಷ. ಪತ್ನಿಗೆ ಪತಿ ಕಮ್ ಮ್ಯಾನೇಜರ್ ಆದವ, ಆತನ ಒಪ್ಪಿಗೆ ಇಲ್ಲದೆ ಏನೂ ನಡೆಯದು. ಅದಕ್ಕಾಗಿ ದರ ನಿಗಧಿ, ಪತ್ನಿ ಮುಂದೆ ಅಮಾಯಕನ ರೀತಿ ನಡೆದುಕೊಳ್ಳುವ ಸಿದ್ದು ಬಾರಿ ಶೋಕಿವಾಲ. ಚಿನ್ನದ ಹಲ್ಲು ಹಾಕಿಸಿಕೊಂಡವ.
ಇಂತ ಶೋಕಿವಾಲನ ಜೀವನದಲ್ಲಿ ಎದುರಾದ ಘಟನೆಗಳು ಕೆಟ್ಟು ಪಟ್ಟಣ ಸೇರು ಎನ್ನುವ ಗಾದೆ, “ಉಳಿವಿಗಾಗಿ ಊರು ಸೇರು” ಎನ್ನುವ ಪರಿಸ್ಥಿತಿ ಸಿದ್ದುನದು. ಆಡಂಬರದಲ್ಲಿ ಅಪ್ಪ, ಅಮ್ಮ, ಸ್ನೇಹಿತನ್ನು ನಿರ್ಲಕ್ಷಿಸಿದವ. ಮರಳಿ ಊರಿಗೆ ಬಂದಾಗ ಆತನ ಸ್ಥಿತಿ ಏನಾಗಿರುತ್ತದೆ. ಯಾಕೆ ಆತ ಪತ್ನಿ ಬಿಟ್ಟು ಬಂದ, ಅಲ್ಲಿ ನಡೆದ ಘಟನೆಯಾದರೂ ಏನು, ಈ ನಡುವೆ ಜಗ್ಗು, ಆನಕೊಂಡ ಪ್ರವೇಶ ಯಾಕಾಯಿತು ಎನ್ನುವುದನ್ನು ಹಾಸ್ಯದ ಮೂಲಕ ಕುತೂಹಲ ಕಟ್ಟಿಕೊಡಲಾಗಿದೆ.
ಚಿತ್ರದ ಮೊದಲರ್ದ ಸಿದ್ದು ಕಿತಾಪತಿ, ತರಲೆ ತುಂಟಾಟ,ಯಾವಾರಿಸುವ ಕಲೆ, ವಿಲನ್ ಜೊತೆ ಮುಖಾಮುಖಿ ನಗುವಿಲ ಅಲೆ ಮೂಡಿಸಿದೆ. ಇನ್ನರ್ಧ, ಗಂಭೀರತೆ, ಸೋಲು, ಅವಮಾನಕ್ಕೆ ಉತ್ತರದ ಸುತ್ತ ಚಿತ್ರ ಸಾಗಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ಇಶಾಮ್ ಮತ್ತು ಹಸೀನ್ ಜೋಡಿ ಸರಳವಾದ ಕಥೆ ಮುಂದಿಟ್ಟುಕೊಂಡು ಪ್ರೇಕ್ಷಕರನ್ನು ನಗಿಸುವ ಕೆಲಸ ಮಾಡಿದ್ದಾರೆ. ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ. ಸಣ್ಣ ವಿಷಯಗಳೂ ನಗುವಿಗೆ ಕಾರಣವಾಗಿದೆ.
ನಟ ನಾಗಭೂಷಣ, ತಮ್ಮ ಹಾವ- ಭಾವದಲ್ಲಿ ಮರಳು ಮಾಡಿದ್ದಾರೆ. ಯಾವುದೇ ಅಬ್ಬರ ಆಡಂಬರ, ಬಿಲ್ಡಪ್ ಇಲ್ಲದೆ ಕಥೆಗೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ, ಅದರಲ್ಲಿಯೂ ಖಳ ನಟ ಗರುಡ ರಾಮ್ ಮುಂದೆ ನಿಂತಾಗ ಇವನನ್ನು ಎದುರುಸತ್ತಾನಾ ಎನ್ನುವುದೇ ಎಂದು ಕುತೂಹಲ, ಇಡೀ ಚಿತ್ರ ಆವರಸಿಕೊಂಡಿದ್ದಾರೆ.
ನಟಿ ಮಲೈಕಾ ವಸುಪಾಲ್, ಹಾಡು, ಕೆಲ ಸನ್ನಿವೇಶಗಳಲ್ಲಿ ಕಾಣಿಸಿಕೊಂಡರೂ ಚಿತ್ರಕ್ಕೆ ಪೂರಕವಾಗಿದೆ. ಗರುಡರಾಮ್, ಧನಂಜಯ, ರಂಗಾಯಣ ರಘು, ಗಿರಿ ಜೆಟ್ಟಿ ಬಿಂಧು, ಧರ್ಮಣ್ಣ ಕಡೂರು, ಶ್ರೀವತ್ಸ ರಂಗಾಯಣ ರಘು, ಪ್ರತೀಕ್ಷಾ ಸೇರಿದಂತೆ ಪ್ರತಿಯೊಂದು ಪಾತ್ರವೂ ತಮ್ಮದೇ ಆದ ಮಹತ್ವ ಪಡೆದುಕೊಂಡಿವೆ.
ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸಮಯ ನಕ್ಕು ನಲಿವು ಬರಬಹುದಾದ ಚಿತ್ರ ವಿದ್ಯಾಪತಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin