ಈ ಯಪ್ಪಾ… ಒಳ್ಳೆಯ ಪಾತ್ರನೂ ಕೊಟ್ಟು ಪೇಮೆಂಟು ಮಾಡಿದ್ದಾರೆ : ನಟ ಮುನಿ

ಸ್ನೇಹಿತರಾದ ಮೇಲೆ ಪೇಮೆಂಟ್ ಮಾಡಲ್ಲ, ಏನೋನೋ ಸಬೂಬು ಹೇಳಿ ಮಾಡಮ್ಮ ಅಂದ್ರು ಬಿಡ್ತಾರೆ. ಸ್ನೇಹಕ್ಕೆ ಕಟ್ಟುಬಿದ್ದು ಕೊನೆಗೆ ನಟನೆ ಮಾಡಿ ಬರುತ್ತೇವೆ. ಆದರೆ ನಿರ್ಮಾಪಕ ರಾಮ್ ಜಿ ಹಾಗಲ್ಲ. ಮೊದಲಿನಿಂದಲೂ ಅವರು ನನ್ನ ಸ್ನೇಹಿತರು ಅವರನ್ನು ಸರ್ ಎಂದೇ ಕರೆಯೋದು. ಮಾಡಿದ ಕೆಲಸಕ್ಕೆ ಕೈ ತುಂಬಾ ಪೇಮೆಂಟ್ ಮಾಡ್ತಾರೆ ಎಂದರು ಹಿರಿಯ ಕಲಾವಿದ ಮುನಿ ರಾಜು.
“ಹೆಜ್ಜಾರು” ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡ ಮುನಿ, “ಈ ಯಪ್ಪಾ, ಒಳ್ಳೆ ಪಾತ್ರನೂ ಕೊಟ್ಟು ಒಳ್ಳೆ ಪೇಮೆಂಟ್” ಕೂಡ ಮಾಡಿದ್ದಾರೆ ಎಂದು ನಿರ್ಮಾಪಕ ಕೆ.ಎಸ್ ರಾಮ ಜೀ ಅವರ ಸ್ನೇಹ, ಕೆಲಸದಲ್ಲಿ ಇರುವ ಗೌರವ, ತನ್ನ ಜೊತೆ ಕೆಲಸ ಮಾಡುವ ಮಂದಿಯನ್ನು ನೋಡಿಕೊಳ್ಳುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮುನಿ.

“ಹೆಜ್ಜಾರು” ಚಿತ್ರದಲ್ಲಿ ಪೊಲೀಸ್ ಪಾತ್ರ. ಪಾತ್ರ ಹೇಳಿದಾಗ ಮಾಡೋದು ಬೇಡ ಅಂದುಕೊಂಡಿದ್ದೆ. ಆದರೆ ಅವರ ಪ್ರೀತಿ ನನ್ನನ್ನು ಬಿಡಲಿಲ್ಲ. ಸಿನಿಮಾ ಈ ಮಟ್ಟಕ್ಕೆ ಯಶಸ್ಸು ತಂದುಕೊಟ್ಟಿದೆ. ಅದಕ್ಕಾಗಿ ನಿರ್ಮಾಪಕರಿಗೆ ಧನ್ಯವಾದ ಎಂದರು.
15 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ, ನಿರ್ದೇಶಕ ಹರ್ಷಪ್ರಿಯಾ ಅವರು ನಮ್ಮನ್ನು ನಡೆಸಿಕೊಂಡ ರೀತಿ ಮತ್ತು ಕೊಟ್ಟ ಪಾತ್ರ , ಚಿತ್ರೀಕರಣ ಸೆಟ್ನಲ್ಲಿ ಅವರು ನಡೆದುಕೊಳ್ಳುವ ರೀತಿ ಬಹಳನಾ ಖುಷಿ ಆಯ್ತು,. ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ಬೇರೆ ರೀತಿಯದೇ ವಾತಾವರಣ ಇರುತ್ತೆ. ಹೆಜ್ಜಾರು ಚಿತ್ರೀಕರಣದ ಸಮಯದಲ್ಲಿ ಮನೆಯ ವಾತಾವರಣದಂತೆ ಇತ್ತು ಎಂದು ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ನವೀನ್ ಕೃಷ್ಣ, ನಾವೆಲ್ಲಾ ನಾಟಕದಿಂದ ಜೊತೆಯಲ್ಲಿ ಕೆಲಸ ಮಾಡಿಕೊಂಡು ಬಂದವರು ಈ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾಯಕ ಭರತ್ ಮತ್ತು ನಾಯಕಿ ಶ್ವೇತಾ ಉತ್ತಮವಾಗಿ ನಟಿಸಿದ್ದಾರೆ.ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಪೊಲೀಸ್ ಪಾತ್ರವೇ ಹೆಚ್ಚು:
ಚಿತ್ರರಂಗದಲ್ಲಿರುವ ಬಹುತೇಕ ಕಾಸ್ಟೂಮ್ ಡಿಸೈನರ ಬಳಿ ನನ್ನ ಪೊಲೀಸ್ ಯೂನಿಫಾರಂ ಅಳತೆ ಇದೆ. ಪೊಲೀಸ್ ಪಾತ್ರಕ್ಕೆ ಮುನಿ ಅಂದ್ರೆ ಸಾಕು, ಅವರ ಅಳತೆ ನಮ್ಮಲ್ಲಿ ಇದೆ ಅಂದು ಬಿಡ್ತಾರೆ . ಪಾತ್ರ ಬೇಕು, ಕಾಸು ಬೇಕು, ಆದರೆ ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್ ಮಾಡಿ ಬಿಡ್ತಾರೆ ಎನ್ನುವ ಭಯ.
ಮೊದಲೆಲ್ಲಾ ದೊಡ್ಡ ದೊಡ್ಡ ಪಾತ್ರ ಮಾಡಿಕೊಂಡೇ ಬಂದೆ. ಮದ್ಯದಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದೆ. ದೊಡ್ಡದಾಗಿ ಪಾತ್ರ ಸಿಗಲಿಲ್ಲ.ಹೆಜ್ಜಾರು ಚಿತ್ರದಲ್ಲಿ ನಿರ್ದೇಶಕರು, ನಿರ್ಮಾಪಕರು ತೆರೆಯಲ್ಲಿ ದೊಡ್ಡದಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. ಸಿನಿಮಾ ಗೆದ್ದಿದೆ. ಮುಂದೆ ಭಗವಂತ ಯಾವ ರೀತಿ ಕರೆದುಕೊಂಡು ಹೋಗ್ತಾನೆ ನೋಡೋಣ, ಒಳ್ಳೆಯ ಪಾತ್ರ ಸಿಗುತ್ತವೆ ಎನ್ನುವ ನಂಬಿಕೆಯೂ ಇದೆ ಎನ್ನುವ ವಿಶ್ವಾಸ ಹೊರ ಹಾಕಿದರು ಮುನಿ
ಕುಚುಕು ರೀತಿ: ರಾಮ್ ಜೀ

ನಟ ಮುನಿ ನನ್ನ ಕುಚಿಕು ರೀತಿ ಎಂದು ನಿರ್ಮಾಪಕ ರಾಮ್ ಜೀ ಎಂದು ಅಪ್ಪಿಕೊಂಡರು. ತಮ್ಮ ಜೊತೆ ಕೆಲಸ ಮಾಡುವ ಎಲ್ಲಾ ಮಂದಿಯೂ ಚೆನ್ನಾಗಿರಬೇಕು ಎನ್ನುವ ಉದ್ದೇಶ ನಮ್ಮದು ಎಂದು ಹೇಳಿದರು.