ಪ್ರತಿ ಭಾನ್ವಿತ ನಟ ಪ್ರಸಾದ್ ವಸಿಷ್ಠ ನಟನೆಯ ಹಾರರ್ ಕಾನ್ಸೆಪ್ಟ್ ಚಿತ್ರ ‘ಕಬಂಧ’ ತೆರೆಗೆ ಬರಲು ಸಿದ್ದತೆ

ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹಾರರ್ ಕಾನ್ಸೆಪ್ಟ್ ಹೆಣೆಯಲಾಗಿರುವ ಚಿತ್ರ ‘ಕಬಂಧ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರಕ್ಕೆ ಸತ್ಯನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಲಿರಿಕಲ್ ಹಾಡಿನ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಚಿತ್ರದಲ್ಲಿ ಎರಡು ಕಾಲಘಟ್ಟದಲ್ಲಿ ನಡೆಯುವ ಸೈಕಲಾಜಿಕಲ್ ಹಾರರ್ ಕಥೆಯನ್ನು ಸತ್ಯನಾಥ್ ಹೆಣೆದಿದ್ದಾರೆ, ಕುಂಜರ ಫಿಲಂಸ್ ಬ್ಯಾನರ್ಅಡಿ ಪ್ರಸಾದ್ ವಸಿಷ್ಠ ಹಾಗೂ ಒಂದಷ್ಟು ಗೆಳೆಯರು ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ಪ್ರಸಾದ್ ವಸಿಷ್ಠ ಅವರಿಗೆ ಇದು ಪ್ರಮುಖ ಚಿತ್ರ

ನಿರ್ದೇಶಕ ಸತ್ಯನಾಥ್ ಮಾತನಾಡಿ, ಹಾರರ್ ಸಿನಿಮಾ, ಹಾಡುಗಳಿಗೆ ಜಾಗ ಇರಲಿಲ್ಲ, ನಂತರ ಕೆ.ಕಲ್ಯಾಣ್ ಅವರ ಕೈಲಿ ಸಾಹಿತ್ಯ ರಚಿಸಿದ್ದೇವೆ ವಾಸುಕಿ ವೈಭ ವ್ ಹಾಡಿದ್ದಾರೆ, ವ್ಯವಸಾಯದ ಸಮಸ್ಯೆ, ನಮಗೆ ಗೊತ್ತಿಲ್ಲದೆ ಅದು ನಮ್ಮನ್ನು ಕಾಡುತ್ತಿದೆ. ಅದು ಮನೆಯೊಳಗೂ ಬಂದಿದೆ. ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಸೈಕಲಾಜಿಕಲ್ ಹಾರರ್ ಕಥೆಯಿದು. ಮೊದಲು ಕಿಶೋರ್ರನ್ನು `ಭೇಟಿಮಾಡಿ ಅವರಿಗೆ ಕಥೆ ಹೇಳಿದೆವು. ಒಪ್ಪಿದರು, ಚಿತ್ರದಲ್ಲಿ ಅವರದು ಹನುಮ ಎಂಬ ರೈತನ ಪಾತ್ರ. ತುಮಕೂರು ಮತ್ತು ದೇವರಾಯನದುರ್ಗದ ಸುತ್ತಮುತ್ತ 55 ದಿನಗಳವರೆಗೆ ಚಿತ್ರೀಕರಣ ನಡಿಸಿದ್ದೇವೆ ಎಂದರು.

ನಟ ಕಿಶೋರ್ ಮಾತನಾಡಿ, ನಿಜವಾದ ಹಾರರ್ ನೋಡಿದರೆ ಏನೂ ಅನಿಸಲ್ಲ, ದೆವ್ವಗಳನ್ನು ಬಳಸಿಕೊಂಡು ಒಂದು ಕಥೆ ಹೇಳುವ ಪ್ರಯತ್ನ. ಮನುಷ್ಯನ ಮೂಲಭೂ`ತ ಅವಶ್ಯಕತೆ ಆಹಾರದ ಬಗ್ಗೆಯೂ ನಾವು ಯೋಚಿಸುತ್ತಿಲ್ಲ ರಾಸಾಯನಿಕ ಬಳಸುತ್ತಿರುವುದರಿಂದ ಎಲ್ಲವೂ ವಿಷಕಾರಿಯಾಗುತ್ತಿದೆ ಎಂದಿದ್ದಾರೆ

ನಿರ್ಮಾಪಕ ಹಾಗೂ ನಾಯಕ ಪ್ರಸಾದ್ ವಸಿಷ್ಠ ಮಾತನಾಡಿ, ಕುಂಜರ ಫಿಲಂಸ್ ನನ್ನ ಒಂದಷ್ಟು ಗೆಳೆಯರೇ ಸೇರಿ ಹುಟ್ಟು ಹಾಕಿರುವ ಸಂಸ್ಥೆ, ಇದು ನಮ್ಮ ಕನ್ನಡದ ಮಣ್ಣಿನ ಸಿನಿಮಾ, ಎಂಟರ್ಟೈನ್ಮೆಂಟ್ ಜೊತೆಗೆ ಒಂದು ಮೆಸೇಜ್ ಕೂಡ ನಮ್ಮ ಸಿನಿಮಾದಲ್ಲಿದೆ. ಚಿತ್ರದಲ್ಲಿ ನಚಿಕೇತ ಎಂಬ ಜಮೀನ್ದಾರಿ ಕುಟುಂಬದಿಂದ ಬಂದ ಮುಗ್ಧ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಆ ಯುವಕನ ಜರ್ನಿಯ ಸುತ್ತಮುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು
ನಾಯಕಿ ಪ್ರಿಯಾಂಕ ಮಳಲಿ ಮಾತನಾಡಿ ತುಂಬಾ ಬೋಲ್ಡ್ ಕ್ಯಾರೆಕ್ಟರ್ ಇರುವ ಮಹಾಲಕ್ಷ್ಮಿ ಎಂಬ ಯುವತಿಯಾಗಿ ನಟಿಸಿದ್ದೇನೆ ಜೀವನದಲ್ಲಿ ಏನೇ ಬಂದರೂ ಎದುರಿಸಿ ನಿಲ್ಲುವಂಥ ಪಾತ್ರವದು ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಛಾಯಾಶ್ರೀ ಮಾತನಾಡಿ ಹನುಮನ ಪತ್ನಿ ರುಕ್ಕು ಪಾತ್ರದಲ್ಲಿ ಕಾಣಿಸಿಕೊಂಡಿದ್ದು `ಮಧ್ಯಮ ವರ್ಗದ ಕುಟುಂಬದ ಮಹಿಳೆ ಎಂದು ಹೇಳಿದರು,

ಛಾಯಾಗ್ರಾಹಕರಾಗಿ ವಿಷ್ಣುಪ್ರಸಾದ್, ಸಂಗೀತ ನಿರ್ದೇಶಕರಾಗಿ ರಘೋತ್ತಮ ಎನ್.ಎಸ್. ಮತ್ತು ಶ್ರೇಯಸ್ ಬಿ.ರಾವ್ ಕೆಲಸ ಮಾಡಿದ್ದಾರೆ, ಚಿತ್ರದ ಉಳಿದ ಪಾತ್ರಗಳಲ್ಲಿ ಅವಿನಾಶ್, ಯೋಗರಾಜ್, ಶ್ರುತಿ ನಾಯಕ್ ಮುಂತಾದವರು ನಟಿಸಿದ್ದಾರೆ