ಆದಿವಾಸಿಗಳ ಬದುಕಿನ ದುರಂತಮಯ ಕಥನ 19.20.21

ಚಿತ್ರ: 19.20.21
ನಿರ್ದೇಶನ: ಮಂಸೋರೆ
ನಿರ್ಮಾಪಕ : ದೇವರಾಜು. ಆರ್. ಸತ್ಯ ಹೆಗಡೆ
ತಾರಾಗಣ: ಶೃಂಗ,ಎಂ,ಡಿ ಪಲ್ಲವಿ, ಸಂಪತ್ ಮೈತ್ರೇಯಾ, ಸಂದೀಪ್, ವೈಜಿ ಉಮಾ,ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಮಹದೇವ್ ಹಡಪದ್, ವಿರ್ಶ ಕರ್ಣ, ವೆಂಕಟೇಶ್ ಪ್ರಸಾದ್ ಮತ್ತಿತರರು
ರೇಟಿಂಗ್ : **** 4/5

ಹರಿವು, ನಾತಿಚರಾಮಿ ಮತ್ತು ಆಕ್ಟ್ 1978 ಚಿತ್ರ ನಿರ್ದೇಶಿಸಿ ತಾವೊಬ್ಬ ಹೊಸ ತಲೆಮಾರಿನ ವಿಭಿನ್ನ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದ್ದ ನಿರ್ದೇಶಕ ಮಂಸೋರೆ ಇದೀಗ “19.20.21” ಚಿತ್ರದ ಮೂಲಕ ಮನ ಮಿಡಿಯುವ ಕಥನವನ್ನು ನೈಜತೆಯ ನೆಲೆಗಟ್ಟಿನಲ್ಲಿ ತೆರೆಯ ಮೇಲೆ ತಂದಿದ್ದಾರೆ.
ಪಶ್ವಿಮ ಘಟ್ಟ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ಚಿಕ್ಕ ಸಮುದಾಯವಾದ ಮಲೆಕುಡಿಯ ಜನರ ಬದುಕು,ಬವಣೆ, ಹೋರಾಟದ ಕಥನ ಅವರ ನೋವಿನ ಅರಣ್ಯರೋಧನ ಕಥನವನ್ನು ವಾಸ್ತವ ನೆಲೆಗಟ್ಟಿನಲ್ಲಿ ಚಿತ್ರರೂಪಕ್ಕೆ ತಂದುಕೊಟ್ಟಿದ್ದಾರೆ ನಿರ್ದೇಶಕರು.

ತನ್ನದಲ್ಲದ ತಪ್ಪಿಗೆ ಪೊಲೀಸರಿಂದ ದೌರ್ಜನ್ಯ, ನರಕಯಾತನೆ ಅನುಭವಿಸುವ ಘಟನೆಗಳನ್ನು ವನವಾಸಿಗಳ ನೋವಿನ ,ಕರುಳು ಹಿಂಡುವ, ಮಾನವೀಯ ಹೃದಯವಿರುವ ಜನರನಷ್ಟೇ ಯಾಕೆ ಕಲ್ಲುಹೃಯದವರ ಮನ ಕಲಕುವ ಚಿತ್ರ “19.20.21”
ದುರಂತಮಯ ಘಟನೆಯನ್ನು ಸಿನಿಮಾ ರೂಪದಲ್ಲಿ ಜನರ ಮುಂದೆ ಇಟ್ಟಿದ್ದಾರೆ. ಇದಕ್ಕಾಗಿ ನಿರ್ದೇಶಕ ಮಂಸೋರೆ ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿ ನೈಝ ಘಟನೆಯನ್ನು ಸಿನಿಮಾ ರೂಪದಲ್ಲಿ ಜನರ ಮುಂದೆ ಇಟ್ಟಿದ್ದಾರೆ.
ಹಲವು ದಶಕಗಳಿಂದ ಕಾಡಿನಲ್ಲಿ ಬದುಕು ಸಾಗಿಸುವ ಆದಿವಾಸಿಗಳ ಕಷ್ಟ ಕೋಟಲೆ, ಅನುಭವಿಸಿದ ಯಾತನೆ, ಮಲೆ ಕುಡಿಯ ಸಮುದಾಯದ ಅರಣ್ಯರೋಧನ,ಅವರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ತಮ್ಮದಲ್ಲದೆ ತಪ್ಪಿಗೆ ಸಿಲುಕುವಂತೆ ಮಾಡಿ ನರಕ ಅನುಭವಿಸುವ ಕ್ಷಣಗಳು ನಿಜಕ್ಕೂ ಕಲ್ಲು ಹೃದಯ ಕರಗಿಸುವಂತೆ ಮಾಡಿದೆ,
ಕಾಲೇಜು ವಿದ್ಯಾರ್ಥಿ ಮಂಜು ( ಶೃಂಗ) ನನ್ನು ನಕ್ಸಲ್ ಬೆಂಬಲ ನೀಡಿದ ಆರೋಪ ಬಂಧನ, ಮತ್ತು ಅವರ ಕುಟುಂಬದ ಮೇಲೆ ದೌರ್ಜನ್ಯ ದಬ್ಬಾಳಿಕೆ ಹೋರಾಟಗಾರರು, ಪತ್ರಕರ್ತರ ಗಮನಕ್ಕೆ ಬಂದಾಗ ಅವರಿಗಾಗಿ ಹೋರಾಟ ಮುಂದುವರಿಯುತ್ತದೆ.
ನಕ್ಸಲ್ ಬೆಂಬಲಿಗ ಎನ್ನುವ ಆರೋಪ ಹೊತ್ತ ಮಂಜು ಮತ್ತು ಆತನ ತಂದೆ ಎದುರಿಸುವ ಸಮಸ್ಯೆ, ಸಂಕಷ್ಟ ಸೇರಿದಂತೆ ಅವರ ಬುದಕಿನ ಘಟನೆಗಳನ್ನು ತೆರೆಯ ಮೇಲೆ ತಂದುಕೊಡುವಲ್ಲಿ ನಿರ್ದೇಶಕ ಮಂಸೋರೆ ಯಶಸ್ಸಿಯಾಗಿದ್ದಾರೆ.
ಚಿತ್ರದಲ್ಲಿ ಶೃಂಗ, ಎಂಡಿ ಪಲ್ಲವಿ ಸಂಪತ್ ಮೈತ್ರೇಯಾ, ಸಂದೀಪ್, ವೈಜಿ ಉಮಾ,ಬಾಲಾಜಿ ಮನೋಹರ್, ರಾಜೇಶ್ ನಟರಂಗ ಪಾತ್ರವನ್ನು ಜೀವಿಸಿ ಬಿಟ್ಟಿದ್ದಾರೆ ಮಹದೇವ್ ಹಡಪದ್, ವಿರ್ಶ ಕರ್ಣ, ವೆಂಕಟೇಶ್ ಪ್ರಸಾದ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಚಿತ್ರಕ್ಕೆ ಬಿಂಧು ಮಾಲಿನಿ ಸಂಗೀತ, ಶಿವು ಬಿ ಕುಮಾರ್ ಕ್ಯಾಮರಾ ಚಿತ್ರಕ್ಕಿದೆ.