Review: A sensitive film “Thimmana Mottegalu

Review : ಸೂಕ್ಷ್ಮ ಸಂವೇದನೆಯ ಚಿತ್ರ “ ತಿಮ್ಮನ ಮೊಟ್ಟೆಗಳು” - CineNewsKannada.com

Review  : ಸೂಕ್ಷ್ಮ ಸಂವೇದನೆಯ ಚಿತ್ರ “ ತಿಮ್ಮನ ಮೊಟ್ಟೆಗಳು”

ಚಿತ್ರ : ತಿಮ್ಮನ ಮೊಟ್ಟೆಗಳು
ನಿರ್ದೇಶಕ: ರಕ್ಷಿತ್ ತೀರ್ಥಹಳ್ಳಿ
ತಾರಾಗಣ : ಕೇಶವ್ ಗುತ್ತಳಿಕೆ, ಪ್ರಗತಿ ಪ್ರಭು, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ, ಮಾ.ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್, ಪ್ರಾಣೇಶ್ ಮತ್ತಿತರರು
ರೇಟಿಂಗ್ : *** 3.5/5

ಪ್ರಕೃತಿಗೆ ವಿರುದ್ದವಾಗಿ ನಡೆದುಕೊಂಡರೆ ಏನೆಲ್ಲಾ ಘಟನೆಗಳು ಜರುತ್ತವೆ ಎನ್ನುವುದನ್ನು ಮುಂದಿಟ್ಟುಕೊಂಡು ಸೂಕ್ಷ್ಮ ಸಂವೇದನೆಯೊಂದಿಗೆ ತೆರೆಗೆ ಬಂದಿರುವ ಚಿತ್ರ “ ತಿಮ್ಮನ ಮೊಟ್ಟೆಗಳು.

ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರ “ಕಾಡಿನ ನೆಂಟರು” ಕಥಾ ಸಂಕಲನದ ಕಥೆ ಆಧರಿಸಿ “ತಿಮ್ಮನ ಮೊಟ್ಟೆಗಳು “ ಚಿತ್ರವನ್ನು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಕ್ಕೂ ಬದುಕುವ ಹಕ್ಕಿದೆ ಎನ್ನುವ ಸೂಕ್ಷ್ಮ ವಿಷಯವನ್ನು ತೆರೆಯ ಮೇಲೆ ತಂದಿದ್ಧಾರೆ.

ಮನುಷ್ಯರಿಗೆ ತಮ್ಮ ಮಕ್ಕಳು ಎಷ್ಟು ಮುಖ್ಯವೋ ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ತಮ್ಮ ಮರಿ, ಮೊಟ್ಟೆ, ಅಷ್ಟೇ ಮುಖ್ಯ ಎನ್ನುವ ವಿಷಯವನ್ನು ಮನದಟ್ಟು ಮಾಡಿಕೊಡುವ ಕಥನ ಇದಾಗಿದೆ. ನಿರ್ದೇಶಕರು ಆಯ್ಕೆ ಮಾಡಿಕೊಂಡ, ಕಥೆ, ವಿಷಯ ಮಹತ್ವ ಹಾಗು ಮನಮುಟ್ಟುವಂತಿದೆ.

ಮಲೆನಾಡಿನ ಪರಿಸರದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಅಡಿಕೆ ಮರಳಿಗೆ ಔಷಧಿ ಸಿಂಪಡಿಸುವುದು ತಿಮ್ಮ (ಕೇಶವ್ ಗುತ್ತಳಿಕೆ) ಕಾಯಕ. ಪತ್ನಿ ಲಕ್ಷ್ಮಿ (ಪ್ರಗತಿ ಪ್ರಭು) ಜೊತೆಗೆ ಮಗ ಸುಬ್ಬನ ಜೊತೆಗೆ ಸಂಸಾರ. ನಿಲ್ಲಲು ನೆಲೆ ಇಲ್ಲದೆ, ಹೊಲ ಗದ್ದೆ ಇಲ್ಲದ ವ್ಯಕ್ತಿ. ಕಾಳಿಂಗ ಸರ್ಪ ಹಾಗೂ ಅದರ ಮೊಟ್ಟೆಗಳ ಸಂರಕ್ಷಣೆಗೆ ಸಂಶೋಧಕ (ಸುಚೇಂದ್ರ ಪ್ರಸಾದ್) ತಂಡ ಬರುತ್ತದೆ ವಿಜಯಕುಮಾರ್ ಜೊತೆ ಹಿತ, ನರ್ತನ, ಫೆÇೀಟೋಗ್ರಾಫರ್ ವೈಭವ್ ಗೆ ನಾಗೇಶ್ ಎಂಬುವ ಸಾಥ್ ನೀಡುತ್ತಾರೆ.

ಊರ ಹಿರಿಯ ಮುಖಂಡ ವೆಂಕಟಯ್ಯ ಒಬ್ಬ ದೈವಭಕ್ತ, ಹಳ್ಳಿ ಜನರಿಗೂ, ಸರ್ಪ ಹಿಡಿಯಲು ಬಂದ ತಂಡಕ್ಕೂ ಎಚ್ಚರಿಕೆ ನೀಡಿದರೂ ಅದನ್ನು ತಂಡ ದಿಕ್ಕರಿಸುತ್ತದೆ. ಇದಕ್ಕಾಗಿ ತಂಡ ತಿಮ್ಮನ ಸಹಾಯ ಪಡೆಯುತ್ತದೆ. ಆತನಿಗೆ ಮನೆ, ಗದ್ದೆ ಪಡೆಯಬೇಕು ಎನ್ನುವ ಹಂಬಲ,ತಂಡದ ಜೊತೆ ಕೈಜೋಡಿಸುತ್ತಾನೆ. ಅರಣ್ಯದಲ್ಲಿ ಮೊಟ್ಟೆಗಳಿಗಾಗಿ ನಡೆಸಿದ ಶೋಧದಲ್ಲಿ ಕಲೆವು ತಿರುವು ಅನಾವರಣವಾಗಲಿದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.

ಮಲೆನಾಡ ಪರಿಸರ, ಮತ್ತು ಅಲ್ಲಿ ನಡೆಯುವ ವಿಷಯಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಕುತೂಹಲ ಭರಿತ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ. ಜೊತೆಗೆ ನಿಸರ್ಗ ವಿರುದ್ದ ಹೋಗಬಾರದು ಎನ್ನುವ ಸಂದೇಶವನ್ನು ಚಿತ್ರದ ಮೂಲಕ ನೀಡುವ ಪ್ರಯತ್ನ ಮಾಡಿದ್ದು ಅದರಲ್ಲಿ ಅವರು ಸಫಲರಾಗಿದ್ದಾರೆ

ಕೇಶವ್ ಗುತ್ತಳಿಕೆ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ಧಾರೆ. ಜೊತೆಗೆ ಪ್ರಗತಿ ಪ್ರಭು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಿಸಿಕೊಂಡಿದ್ದಾರೆ. ಇನ್ನುಳಿದಂತೆ ಸುಚೇಂದ್ರ ಪ್ರಸಾದ್,ಆಶಿಕಾ, ರಘು ರಾಮನಕೊಪ್ಪ ಸೇರಿದಂತೆ ಹಲವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin